ಕೊರಗ ಯುವಕ ಸಂಘ( ರಿ )ಕಾಸರಗೋಡು ಇದರ ವತಿಯಿಂದ ಕೊರಗ ಯುವಕ ಯುವತಿಯರಿಗೆ ಕೇರಳ ಪಿ ಎಸ್ ಸಿ ಮಾಹಿತಿ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕೊರಗ ಯುವಕ ಸಂಘ( ರಿ )ಕಾಸರಗೋಡು ಇದರ ವತಿಯಿಂದ ಕೊರಗ ಯುವಕ ಯುವತಿಯರಿಗೆ ಕೇರಳ ಪಿ ಎಸ್ ಸಿ ಮಾಹಿತಿ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವು ಸದ್ಗುರು ವಿದ್ಯಾಪೀಠ ಕೊoಡೆಯೂರು ನಲ್ಲಿ ನಡೆಯಿತು.

ಕಾರ್ಯಕ್ರಮ ವು ಪ್ರಾರ್ಥನೆ ಯ ಮೂಲಕ ದ ಅಧ್ಯಕ್ಷ ಸ್ಥಾನ ವನ್ನು ಸಂಘಟನೆಯ ಅಧ್ಯಕ್ಷರಾದ ಶ್ರೀಯುತ ಬಾಲಕೃಷ್ಣರವರು ವಹಿಸಿದರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಜಿಯವರು ಆಶೀರ್ವಚನ ಮಾಡಿದರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗಣೇಶ್ ಪ್ರಸಾದ್ (ನಿವೃತ್ತ ಅಂಡರ್ ಸೆಕ್ರೆಟರಿ ಕೇರಳ psc ) ಇವರು ಉಪಸ್ಥಿತರಿದ್ದು ತರಬೇತಿ ನೀಡಿದರು ಸಂಘಟನೆಯ ಗೌರವಧ್ಯಕ್ಷರಾದ ಶೇಖರ ಬಾಲ್ಯೂರ್, ಸುಮತಿ ಅಮರಾನಾಥ್ ಬದಿಯಡ್ಕ ಉಪಸ್ಥಿತರಿದ್ದು ಇವರು ಶುಭ ಹಾರೈಸಿದರು ಪ್ರತಿಭಾನ್ವಿತ ಮಕ್ಕಳಾದ ವೈಷ್ಣವಿ ಹಾಗೂ ಹರ್ಷಿಣಿ ಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಕಾರ್ಯಕ್ರಮಕ್ಕೆ ಶೋಭಿತರವರು ಸ್ವಾಗತಿಸಿದರು ಸುಮತಿ ಯವರು ಧನ್ಯವಾದವಿತ್ತರು ಮೀನಾಕ್ಷಿ ಬೊಡ್ಡೋಡಿ(ಕೊರಗ ಯುವಕ ಸಂಘದ ಕಾರ್ಯದರ್ಶಿ )ಯವರು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!