ಮೀಂಜ ಪಂಚಾಯತ್ NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ,ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲು ಗೊಳಿಸುವ ಕೇಂದ್ರ ಸರಕಾರದ ಧೋರಣೆಗೆದುರಾಗಿ ಹಾಗೂ ಕೇಂದ್ರ ಸರ್ಕಾರದ ತೀರ್ಮಾನವನ್ನು ತಿದ್ದುಪಡಿಗೊಳಿಸುವಂತೆ ಆಗ್ರಹಿಸಿ ,ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು.
f ಧರಣಿ ಯ ಉದ್ಘಾಟನೆ ಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಕೇರಳ ರೈತ ಸಂಘದ ರಾಜ್ಯ ಸಮಿತಿ ಸದಸ್ಯರೂ ಆದ ಕಾ: ಕೆ.ಆರ್.ಜಯಾನಂದ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು NREG ಏರಿಯಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಎಲಿಯಾನ ವಹಿಸಿದ್ದು, ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ,ಸಿ. ಪಿ.ಎಂ.ಲೋಕಲ್ ಕಾರ್ಯದರ್ಶಿಗಳಾದ ಲೋಕೇಶ್ ಚಿನಾಲ,ಟಿ.ರಾಮಚಂದ್ರ ಮಹಿಳಾ ಅಸೋಸಿಯೇಶನ್ ನ ನೇತಾರೆ ಶ್ರೀಮತಿ ಐರಿನ್ ಜೋಸ್ಫಿನ್ ಮೊದಲಾದವರು ನೇತೃತ್ವ ವಹಿಸಿದ್ದರು. ಮೀಂಜ ಪಂಚಾಯತ್ ಕಚೇರಿ ಯಿಂದ ಅಂಚೆ ಕಚೇರಿ ವರೆಗೆ ನಡೆದ ಮಾರ್ಚ್ ನಲ್ಲಿ ಅಧಿಕ ಮಂದಿ ಎನ್.ಆರ್.ಈ. ಜಿ ಕಾರ್ಮಿಕರು ಭಾಗವಹಿಸಿದರು.