ಉದ್ಯಾವರ ಮಾಡ ಕ್ಷೇತ್ರ ಮಹಾದ್ವಾರ ಲೋಕಾರ್ಪಣೆ

ಇತಿಹಾಸ ಪ್ರಸಿದ್ಧ ಉದ್ಯಾವರ ಮಾಡ ಕ್ಷೇತ್ರದ ಮಹಾದ್ವಾರ ಇಂದು ಲೋಕಾರ್ಪಣೆ ಗೊಂಡಿದೆ.


ಈ ಮೊದಲು ಇದ್ದ ದ್ವಾರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರವುಗೊಂಡಿದ್ದು ನಂತರ ಸುಸಜ್ಜಿತ ದ್ವಾರದ ಬಗ್ಗೆ ಭಕ್ತರು ಒಲವು ವ್ಯಕ್ತಪಡಿಸಿದ್ದರು.
ಈ ಪ್ರಕಾರವಾಗಿ ಸರ್ವರ ಸಹಕಾರದಿಂದ ಕೊಡುಗೈ ದಾನಿ ಕೇಶವ ಶಂಕರ ಆಳ್ವರು ದ್ವಾರದ ವೆಚ್ಚವನ್ನು ಭರಿಸಿ ಅತ್ಯಾಕರ್ಷಣೆಯಾದ ದ್ವಾರವನ್ನು ನಿರ್ಮಿಸಿಕೊಟ್ಟರು.

ಲೋಕಾರ್ಪಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಾಜೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳು, ಮಾಡ ಕ್ಷೇತ್ರದ ಆಚಾರಕ್ಕೊಳಪಟ್ಟವರು, ದೇವಸ್ವಂ ಬೋರ್ಡ್ನ
ಕಮಿಷನರ್ ಶ್ರೀ ಬಿಜು, ಸಹಾಯಕ ಕಮಿಷನರ್ ಪ್ರದೀಪ್ ಕುಮಾರ್, ಆಡಳಿತ ಮುಖ್ತೇಸರ ಕಿರಣ್ ಕುಮಾರ್ ,ಕೇಶವ ಶಂಕರ ಆಳ್ವ, ಸುನೀಲ್ ಕುಮಾರ್, ಹರೀಶ್ ಶೆಟ್ಟಿ ಮಾಡ, ಸಂಕಪ್ಪ ಆಳ್ವ, ವಿಠಲ ಆಳ್ವ, ಮೋಹಿತ್ ಆಳ್ವ,ದಯಕರ ಮಾಡ,ಯೋಗಿಶ್ ಕುಂಜತ್ತೂರು, ಕರುಣಾಕರ ಶೆಟ್ಟಿ, ಸದಾಶಿವ ಶೆಟ್ಟಿ ಮೊದಲಾದರು ಈ ಸಂದರ್ಭದಲ್ಲಿ ಹಾಜರಿದ್ದರು.


ಕ್ಷೇತ್ರದ ವಾರ್ಷಿಕ ಜಾತ್ರ ಮಹೋತ್ಸವ ಹಾಗೂ ಐತಿಹಾಸಿಕ ಬಂಡಿ ಉತ್ಸವ ನಾಳೆಯಿಂದ ಆರಂಭಗೊAಡು ಮೇ 14ರ ತನಕ ನಡೆಯಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!