ಕಾಳಸಂತೆಯಲ್ಲಿ 2. ರಿಂದ 3 ಲಕ್ಷಕ್ಕೆ ಮಾರಾಟವಾಗುತ್ತಿದೆ ಆಟೋ ರಿಕ್ಷಾ ಪರವಾನಿಗೆ…? : ಗ್ರೀನ್ ಸಿಟಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರತೇಶ್
ಮಂಗಳೂರು:ಈ ಹಿಂದೆ ಇದ್ದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಮುಲೈ ಮುಗಿಲನ್ ಇ.ವಿ ರಿಕ್ಷಾಗಳಿಗೆ ದಕ್ಷಿಣ ಕನ್ನಡದಲ್ಲಿ ಮುಕ್ತ ಸಂಚಾರ ಮಾಡಬಹುದೆಂದು ಆದೇಶ ಹೊರಡಿಸಿದ್ದರು . ಈ ಕಾರಣದಿಂದಲೇ ನಾವು ಕಪ್ಪು ರಿಕ್ಷಾವನ್ನು ಮಾರಿ, 4 ಲಕ್ಷ 30,000 ಸಾವಿರ ಬ್ಯಾಂಕ್ ನಲ್ಲಿ ಸಾಲ ಮಾಡಿ ಇ ವಿ ಆಟೋವನ್ನು ಖರೀದಿಸಿದೆವು ಆದರೆ ಇತ್ತೀಚಿಗೆ ಹೊಸದಾಗಿ ಬಂದ ಜಿಲ್ಲಾಧಿಕಾರಿಗಳು ಗ್ರಾಮಾಂತರ ಭಾಗದವರು ನಗರಕ್ಕೆ ಬಂದು ಬಾಡಿಗೆ ಮಾಡಬಾರದೆಂದು ಹೊಸ ಆದೇಶವನ್ನು ಹೊಸ ನಿಯಮ ಬಂದು ಆರು ತಿಂಗಳು ಮುಗಿಯುವುದರೊಳಗೆ…