ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ಟ್ರಾಮಡೋಲ್ ಸಾಗಣೆ: ಯುವಕ ಬಂಧನ, 55 ಮಾತ್ರೆಗಳು ವಶ

ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಟ್ರಾಮಡೋಲ್ ಹೈಡ್ರೋಕ್ಲೋರೈಡ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಯುವಕನನ್ನು ಎಕ್ಸೈಸ್ ತಂಡವು ಬಂಧಿಸಿದೆ. ಮಂಗಳೂರು ಭಾಗದಿಂದ ಕಾಸರಗೋಡ್ ಕಡೆಗೆ ತೆರಳುತ್ತಿದ್ದ KL 58 Q 5171 ಸಂಖ್ಯೆಯ ಬಸ್ಸಿನಲ್ಲಿ ನಡೆಸಿದ ತಪಾಸಣೆಯಲ್ಲಿ ಉತ್ತರ ಪ್ರದೇಶದ ನಿವಾಸಿ ರಾಹತ್ ಜಾನ್ ಎಂಬಾತನಿಂದ 23.351 ಗ್ರಾಂ ಟ್ರಾಮಡೋಲ್ ಹೈಡ್ರೋಕ್ಲೋರೈಡ್ (55 ಮಾತ್ರೆಗಳು) ವಶಪಡಿಸಿಕೊಳ್ಳಲಾಗಿದೆ. ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿಲ್ ಕುಮಾರ್ ಅವರ ನೇತೃತ್ವದ ತಂಡವು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ. ಆರೋಪಿಯ…

Read More

ನರೇಗ ಬಚಾವೋ ಸಂಗ್ರಾಮ ರಾಷ್ಟ್ರವ್ಯಾಪಿ ಹೋರಾಟ: ಕೇಂದ್ರ ಸರಕಾರದ ವಿರುದ್ಧ ಬಂಟ್ವಾಳದಲ್ಲಿ ಕಾಂಗ್ರೆಸ್ ಪಾದಯಾತ್ರೆ ಘೋಷಣೆ – ರಮಾನಾಥ್ ರೈ

ಬಂಟ್ವಾಳ: ಯುಪಿಎ ಸರಕಾರದ ಅವಧಿಯಲ್ಲಿ ಜಾರಿಯಾದ ಮಹತ್ವಾಕಾಂಕ್ಷೆಯ ಕಾಯ್ದೆಯ ಮತ್ತು ಯೋಜನೆಗಳ ಹೆಸರು ಬದಲಾವಣೆ ಮಾಡಲು ಹೊರಟು ಕಾರ್ಯಕ್ರಮಗಳ ಮೂಲ ಸ್ಚರೂಪವೇ ಬದಲಾಗಿದೆ.ಅ ಕಾರಣಕ್ಕಾಗಿ ಕೇಂದ್ರ ಸರಕಾರದ ವಿರುದ್ದ ನರೇಗ ಬಚಾವೋ ಸಂಗ್ರಾಮ ಹಮ್ಮಿಕೊಂಡಿದ್ದು,ರಾಷ್ಟ್ರ ವ್ಯಾಪಿ ಸಂಗ್ರಾಮವಾಗಿದೆ. ಇದು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ಬು ಬೇರೆ ಬೇರೆ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಹೇಳಿದರು.ಅವರು ಪಾಣೆಮಂಗಳೂರು ಮತ್ತು ಬಂಟ್ವಾಳ ಕಾಂಗ್ರೆಸ್ ವತಿಯಿಂದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ…

Read More

ಮಹಿಳಾ ಕಾರ್ಯಕರ್ತರು ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು: ನವ್ಯ ಹರಿದಾಸ್

ಕಾಸರಗೋಡು: ದೇಶದ ಎಲ್ಲಾ ಸಾಮಾನ್ಯ ಜನರನ್ನು ಕೇಂದ್ರ ಸರ್ಕಾರದ ಯೋಜನೆಗಳ ಲಾಭಾಂಶದಾರರನ್ನಾಗಿಸುವ ಉದ್ದೇಶದಿಂದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಮುನ್ನಡೆದುಕೊಳ್ಳಬೇಕು ಹಾಗೂ ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು ಎಂದು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯ ಹರಿದಾಸ್ ಹೇಳಿದರು. ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ ಮಹಿಳಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಗಳಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಸ್ಥಾನಗಳನ್ನು ನೀಡುವ ಪಕ್ಷ ಬಿಜೆಪಿ ಎಂದು ಅವರು ಹೇಳಿದರು. ಮಹಿಳಾ ಸಬಲೀಕರಣವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪದಲ್ಲೂ ಜಾರಿಗೆ…

Read More

ಹೊಸಂಗಡಿ: ರಿಯಲ್ ಲ್ಯಾಬ್ ಕ್ಲಿನಿಕಲ್ ಲ್ಯಾಬೊರೇಟರಿಯ 5ನೇ ವಾರ್ಷಿಕೋತ್ಸವ—ಉಚಿತ ವೈದ್ಯಕೀಯ ಸಲಹಾ ಶಿಬಿರ

ಕಾಸರಗೋಡು: ಹೊಸಂಗಡಿಯ ರಿಯಲ್ ಲ್ಯಾಬ್ ಕ್ಲಿನಿಕಲ್ ಲ್ಯಾಬೊರೇಟರಿಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ವೈದ್ಯಕೀಯ ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಶ್ರೀ ಅಯ್ಯಪ್ಪ ಕೃಪಾ ವೀರಮಾರುತಿ ವ್ಯಾಯಾಮ ಶಾಲೆ (R), ವೀರ ಕೇಸರಿ ಫ್ರೆಂಡ್ಸ್ (R) ಹಾಗೂ ಚಕ್ರವರ್ತಿ (R), ಹೊಸಂಗಡಿ ಇವರ ಸಹಯೋಗದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಂಗಳೂರು ಮೂಲದ ಶ್ರೀಮತಿ ಮತ್ತು ಶ್ರೀ ಉಷಾ ನಾರಾಯಣ ಅವರು ಉದ್ಘಾಟಿಸಲಿದ್ದಾರೆ. ಶಿಬಿರವು ಜನವರಿ 21 ರಿಂದ ಫೆಬ್ರವರಿ 4, 2026ರವರೆಗೆ ಪ್ರತಿದಿನ ಸಂಜೆ 4ರಿಂದ ರಾತ್ರಿ…

Read More

ಜ.21ರಂದು ದಕ್ಷಿಣ ಭಾರತದ ಮೊಟ್ಟ ಮೊದಲ RuTAGe ಸ್ಮಾರ್ಟ್ ವಿಲೇಜ್ ಸೆಂಟರ್‌ಗೆ ಚಾಲನೆ… !

ಮಂಗಳೂರು:ಭಾರತ ಸರ್ಕಾರದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಮಾರ್ಗದರ್ಶನದಲ್ಲಿ, ನಿಮ್ಮ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಸೆಕ್ಷನ್ ಇನ್ಸಿನ್-8 ಫೌಂಡೇಶನ್ ಸಹಯೋಗದಲ್ಲಿ ದಕ್ಷಿಣ ಭಾರತದ ಮೊದಲ RUTAGE ಸ್ಮಾರ್ಟ್ ವಿಲೇಜ್ ಸೆಂಟರ್ ಜನವರಿ 21ರಂದು ಸ್ಥಾಪಿಸಲಾಗಲಿದೆ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ.ಅಜಯ್ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು , ಎನ್.ಸಿ. ಮೂರ್ತಿ ಅವರ ಉದಾರ ದೇಣಿಗೆಯಿಂದ ನಿಷ್ಠೆ ಹಾಗೂ ಫರಂಗಿಪೇಟೆ ಆರೋಗ್ಯ ಕೇಂದ್ರಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದವರು ತಿಳಿಸಿದರು. ಈ…

Read More

ಬಹುನಿರೀಕ್ಷಿತ ಕಟ್ಟೆಮಾರ್ ಸಿನೆಮಾ ಬೆಳ್ಳಿ ಪರದೆಯ ಮೇಲೆ ಮಿಂಚಲು ರೆಡಿ …. !

ಕೋಸ್ಟಲ್‌ವುಡ್‌ನ ಬಹುನಿರೀಕ್ಷೆಯ ಚಲನಚಿತ್ರ ಕಟ್ಟೆಮಾರ್ ಜನವರಿ 23 ರಂದು ಕರಾವಳಿಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ . ಅದಕ್ಕಿಂತ ಮುಂಚಿತವಾಗಿ ಮಂಗಳೂರು, ಪುತ್ತೂರು ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನ ಭರ್ಜರಿಯಾಗಿ ನಡೆಯಲಿದೆ.ಸಚಿನ್ ಕಟ್ಲ ಮತ್ತು ರಕ್ಷಿತ್ ಗಾಣಿಗ ಆಕ್ಷನ್ ಕಟ್ ನಿರ್ದೇಶನದಲ್ಲಿ ಮೂಡಿ ಬಂದಿದರುವ ಕಟ್ಟೆಮಾರ್ ಈಗಾಗಲೇ ತನ್ನ ಪೋಸ್ಟರ್, ಹಾಡುಗಳಿಂದ ಎಲ್ಲರಾ ಹುಬ್ಬೇರುವಂತೆ ಮಾಡಿದೆ. ತುಳು ಚಿತ್ರ ರಂಗದಲ್ಲೇ ವಿಭಿನ್ನ ಕಥಾ ಹಂದರವನ್ನು ಹೇಳಲು ರೆಡಿಯಾಗಿರುವ ಚಿತ್ರ ಈಗ ಟ್ರೇಲರ್ ಮೂಲಕ ನಿರೀಕ್ಷೆ ಮತ್ತಷ್ಟು ಮಗದಷ್ಟು…

Read More

ಸಂಸದ ಕೋಟರಿಂದ ಕಟಪಾಡಿ ಓವರ್ ಪಾಸ್ ಕಾಮಗಾರಿ ವೀಕ್ಷಣೆ

ಉಡುಪಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಆಗಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆ. ಸದ್ಯ ಕಾಮಗಾರಿ ಆರಂಭಗೊಂಡಿದ್ದು ,ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ. ಮಳೆಗಾಲ ಆರಂಭವಾಗುವ ಮೊದಲು ಬಹುತೇಕ ಕಾಮಗಾರಿ ಮುಗಿಸಬೇಕೆಂಬುದು ಇಂಜಿನಿಯರ್ ತಯಾರಿ ನಡೆಸಿದ್ದಾರೆ. ಕಾಮಗಾರಿ ಸ್ಥಳಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಸದ್ಯ ಕಾಮಗಾರಿ ಆಗುತ್ತಿರುವುದರಿಂದ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೆ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡದೆ ವಾಹನ ಚಲಾವಣೆ ಮಾಡುತ್ತಾರೆ ಮತ್ತು ಜನರು ಅಡ್ಡಾದಿಡ್ಡಿ…

Read More

ಶೀರೂರು ವೇದವರ್ಧನ ತೀರ್ಥರಿಂದ ಮೊದಲ ಪೂಜೆ

ಉಡುಪಿ: ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮೊದಲ ಮಹಾಪೂಜೆ ನಡೆಸಿದರು.ಶ್ರೀಕೃಷ್ಣನನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ದಿನವಾದ ಭಾನುವಾರ ಸುಮಾರು 80 ಸಾವಿರ ಮಂದಿ ಅನ್ನಪ್ರಸಾದ ಭೋಜನ ಸ್ವೀಕರಿಸಿದರು. ಮಹಾಪೂಜೆ ಬಳಿಕ ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾಜಾಂಗಣ, ಭೋಜನಶಾಲೆ, ಹೊರೆಕಾಣಿಕೆ ಪೆಂಡಾಲ್‌ ಸಹಿತ ವಿವಿಧೆಡೆಗಳಲ್ಲಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Read More

ಕರಾವಳಿ ಉತ್ಸವದ ಅಂಗವಾಗಿ ಚಲನಚಿತ್ರೋತ್ಸವ ಇಂದು ಶುರು … !

ಮಂಗಳೂರು:ಹಲವು ವಿಶೇಷತೆಗಳೊಂದಿಗೆ ಕರಾವಳಿ ಉತ್ಸವ ಜನಮನ್ನಣೆ ಗಳಿಸುತ್ತಿರುವ ಹೊತ್ತಿನಲ್ಲಿ ಜಿಲ್ಲಾಡಳಿತದ ನೇತ್ರಿತ್ವದಲ್ಲಿ ಈ ಬಾರಿ ತುಳು, ಕನ್ನಡ, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳ ಕರಾವಳಿ ಚಲನಚಿತ್ರ ಉತ್ಸವವು ಜ.19ರಿಂದ 21ರವರೆಗೆ ನಡೆಯಲಿದ್ದು ಇದರ ಭಾಗವಾಗಿ ಕರಾವಳಿ ಉತ್ಸವ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮವು ಬಿಜೈನ ಭಾರತ್ ಸಿನಿಮಾಸ್ ನಲ್ಲಿ ಇಂದು ನಡೆಯಿತ್ತು .ಭಾರತ್ ಸಿನೆಮಾಸ್ ಒಂದರಲ್ಲಿ ಒಟ್ಟು 18 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ತುಳು ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಬಾರಿ 11 ತುಳು ಚಿತ್ರಗಳ ಪ್ರದರ್ಶನ ನಡೆಯಲಿದೆ…

Read More

ಸುಲಿಗೆ ಪ್ರಕರಣ: ಶಿಕ್ಷೆ ಪ್ರಕಟವಾದ ನಂತರ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿ ಅರೆಸ್ಟ್

ಸುಲಿಗೆ ಕೇಸಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ನವೀನ್ ಸಿಕ್ವೇರಾ, ಬಂಧಿತ ವ್ಯಕ್ತಿ. ಇವರ ಮೇಲೆ 2011 ಹಾಗೂ 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ ನಂಬರ್ 195/2011 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015 ರಲ್ಲಿ ಮೂರು ವರ್ಷಗಳ ಕಠಿಣ ಕಾರಗೃಹ ಶಿಕ್ಷೆ ಹಾಗೂ ರೂಪಾಯಿ 5000 ಜುಲ್ಮಾನೆ ವಿಧಿಸಿ ತೀರ್ಪು…

Read More
error: Content is protected !!