ಇ-ಖಾತಾ ಸಮಸ್ಯೆ ಕಾಂಗ್ರೆಸ್ ಕೃಪಾಪೋಷಿತ ಗ್ಯಾರಂಟಿ :- ಶಾಸಕ ಕಾಮತ್

ಮ.ನ.ಪಾ. ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಇನ್ನೂ ಸಹ ಜನರು ಹರಸಾಹಸ ಪಡುವಂತಾಗಿದ್ದು ದಪ್ಪ ಚರ್ಮದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಬಗ್ಗೆ ಚಿಂತೆಯೇ ಇಲ್ಲವಾಗಿರುವುದು ದುರಂತವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದ ದಿನದಿಂದಲೂ ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆ ಉಂಟಾಗಿದೆ. ದೂರದ ಊರುಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಖರೀದಿದಾರರು, ಮಾರಾಟಗಾರರು ಇಲ್ಲಿಗೆ ಬಂದು ಹಲವು ದಿನಗಳ ನಂತರವೂ ತಮ್ಮ ಕೆಲಸವಾಗದೇ ಬರಿಗೈಯಲ್ಲಿ ಮರಳುತ್ತಿದ್ದಾರೆ. ಮೊನ್ನೆ…

Read More

ಬೆಳ್ಳಾರು: ಪ್ರಸಿದ್ಧ ವಾಸ್ತು ಶಿಲ್ಪಿ ಧರ್ಮೇದ್ರ ಆಚಾರ್ಯ ನಿಧನ

ಉಪ್ಪಳ: ಬೇಕೂರು ಬಳಿಯ ಬೆಳ್ಳಾರು ನಿವಾಸಿ ವಾಸ್ತು ಶಿಲ್ಪಿ ಧರ್ಮೇಂದ್ರ ಆಚಾರ್ಯ [78] ಅಲ್ಪ ಕಾಲದ ಅಸೌಖ್ಯದಿಂದ  ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ರೋಹಿಣಿ, ಮಕ್ಕಳಾದ ಕಿರಣ್ ಆಚಾರ್ಯ, ಯತೀಶ್ ಆಚಾರ್ಯ, ಪವಿತ್ರ, ಸೊಸೆಯಂದಿರಾದ ಶ್ವೇತ, ದೀಕ್ಷಿತ, ಅಳಿಯ ಪಾಂಡುರoಗ ಆಚಾರ್ಯ, ಸಹೋದರಿ ಸೀತಾ, ಸಹೋದರ ಲಕ್ಷಣ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸoಸ್ಕಾರ  ಸಂಜೆ ಮನೆ ಪರಿಸರದಲ್ಲಿ ನಡೆಯಿತು.

Read More

ಕುಂಬಳೆ ಟೋಲ್ ಪ್ಲಾಸಾ ಹಿಂಸಾಚಾರ ಪ್ರಕರಣ: ಇಬ್ಬರ ಬಂಧನ

ಕಾಸರಗೋಡು:ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಸಾದಲ್ಲಿ ಟೋಲ್ ವಸೂಲಿಗೆ ವಿರೋಧವಾಗಿ ನಡೆದ ಪ್ರತಿಭಟನೆಯ ವೇಳೆ ಅಕ್ರಮಾಚಾರ ನಡೆಸಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೊಡಿಯಮ್ಮ, ಉಜಾರ್‌ನ ಫೈಸಲ್ ಅಬ್ದುಲ್ ರಹ್ಮಾನ್ (28) ಹಾಗೂ ಮಂಜೇಶ್ವರಂ, ವಾಮಂಜೂರು ಚೆಕ್ ಪೋಸ್ಟ್ ಸಮೀಪದ ನಿವಾಸಿ ಟಿ. ಅಬ್ದುಲ್ ನಾಸರ್ (46) ಅವರನ್ನು ಕುಂಬಳ ಪೊಲೀಸರು ಬಂಧಿಸಿದ್ದಾರೆ. ಆಕ್ಷನ್ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭ ಉಂಟಾದ ಸಂಘರ್ಷದ ವೇಳೆ ಟೋಲ್ ಪ್ಲಾಸಾದ ಮೇಲೆ ದಾಳಿ ನಡೆಸಿ ಉಪಕರಣಗಳನ್ನು ಹಾನಿಗೊಳಪಡಿಸಿದ ಆರೋಪದ…

Read More

ಗೃಹಿಣಿ ಪುಷ್ಪಲತಾ ವಿ. ಶೆಟ್ಟಿ ಅವರ ಸಾವು ಕೊಲೆ; ಕತ್ತು ಹಿಸುಕಿಸಿ ಉಸಿರುಗಟ್ಟಿಸಿ ಹತ್ಯೆ – ಮರಣೋತ್ತರ ಪರೀಕ್ಷಾ ವರದಿ; ಸ್ಥಳಕ್ಕೆ ಪೊಲೀಸ್ ಸರ್ಜನ್ ಭೇಟಿ

ಬದಿಯಡ್ಕ: ಕುಂಭ್ಡಾಜೆ ಮೌವ್ವಾರ್ ಅಜಿಲಾ ಪ್ರದೇಶದಲ್ಲಿನ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಗೃಹಿಣಿ ಪುಷ್ಪಲತಾ ವಿ. ಶೆಟ್ಟಿ (70) ಅವರನ್ನು ಮೃತ ಸ್ಥಿತಿಯಲ್ಲಿ ಪತ್ತೆ ಹಚ್ಚಿದ ಪ್ರಕರಣವು ಕೊಲೆಯೇ ಆಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ. ಕೈಗಳಿಂದ ಕತ್ತು ಹಿಸುಕಿಸಿ ಉಸಿರುಗಟ್ಟಿಸಿ ಹತ್ಯೆ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸ್ ಸರ್ಜನ್ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಸಾವು ಅಸಹಜವಾಗಿದೆ ಎಂಬ ಅನುಮಾನ…

Read More

ಕುಂಪಲ–ಬೈಪಾಸ್ ಡಿಮಾರ್ಟ್‌ನಲ್ಲಿ ಉದ್ಯೋಗವಿದೆ ಎಂದು ಸುಳ್ಳು ಜಾಹಿರಾತು: ನೂರಾರು ಮುಗ್ಧರು ಶಾಪಿಂಗ್ ಮಾಲ್ ಎದುರು ಜಮಾವಣೆ

ಮಂಗಳೂರು :ದೇಶದ ಪ್ರಸಿದ್ಧ ಶಾಪಿಂಗ್ ಮಾಲ್ ಡಿಮಾರ್ಟ್ ಸಂಸ್ಥೆಯ ಶಾಖೆಯೊಂದು ಉಳ್ಳಾಲ ತಾಲೂಕಿನ ಕುಂಪಲ- ಬೈಪಾಸ್ ಎಂಬಲ್ಲಿ ನಿರ್ಮಾಣಗೊಳ್ಳುತ್ತಿದೆ. ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಇರೋದಾಗಿ ಯಾರೋ ವಿಘ್ನ ಸಂತೋಷಿಗಳು ಜಾಲತಾಣಗಳಲ್ಲಿ ಜಾಹಿರಾತು ಹರಿಯಬಿಟ್ಟಿದ್ದು, ಉದ್ಯೋಗ ಅರಸಿ ಮಾಲ್ ಕಡೆಗೆ ಧಾವಿಸಿ ಬಂದ ನೂರಾರು ಮುಗ್ಧ ಜನರಿಗೆ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿಯ ಮಾತು ಕೇಳಿ ಶಾಕ್ ಆಗಿದೆ.ಸಾಮಾಜಿಕ ಜಾಲತಾಣವನ್ನ ಎಷ್ಟರ ಮಟ್ಟಿಗೆ ದುರುಪಯೋಗ ಪಡಿಸಬಹುದೆಂಬುದಕ್ಕೆ ಕುಂಪಲ -ಬೈಪಾಸಿನ ನೂತನ ಡಿಮಾರ್ಟ್ ನಲ್ಲಿ ಉದ್ಯೋಗಾವಕಾಶದ ಜಾಹಿರಾತು ಹರಿಯಬಿಟ್ಟ ಬೆಳವಣಿಗೆಯೇ…

Read More

ಮೂಡುಬಿದಿರೆ ಪುತ್ತಿಗೆಯಲ್ಲಿ 30 ಅಡಿ ಬಾವಿಗೆ ಬಿದ್ದು ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿ: ಅಗ್ನಿಶಾಮಕ ದಳದ ಸಾಹಸಮಯ ರಕ್ಷಣೆ

ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಮದ ಬಂಗ್ಲೆ ಎಂಬಲ್ಲಿ ಬುಧವಾ ರಾತ್ರಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸುರಂಗದೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ.ಪುತ್ತಿಗೆಯ ಜಾಣಪ್ಪ ಗೌಡರ ಪುತ್ರ ರಾಧಾಕೃಷ್ಣ (38 ವರ್ಷ) ಎಂಬವರು ಬುಧವಾರ ರಾತ್ರಿ ಅಕಸ್ಮಿಕವಾಗಿ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರು ಬಾವಿಯ ಒಳಗಿದ್ದ ಸುಮಾರು 20 ಅಡಿ ಆಳದ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಇದು ರಕ್ಷಣಾ ಕಾರ್ಯಕ್ಕೆ ದೊಡ್ಡ ಸವಾಲಾಗಿತ್ತು. ರಕ್ಷಣೆ ಕಾರ್ಯಾಚರಣೆಗೆ ಕಾರ್ಕಳ…

Read More

ಜನವರಿ 18 ರಂದು ಮಂಗಳೂರಿನಲ್ಲಿ ‘ಲಯ ಲಾವಣ್ಯ’ ಸಂಗೀತೋತ್ಸವ… !

ಮಂಗಳೂರು:ಕರಾವಳಿ ಭಾಗದ ಸಂಗೀತಾಸಕ್ತರಿಗೆ ನಾವಿನ್ಯ ರೀತಿಯ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿರುವ ಸಂಗೀತ ಭಾರತೀ ಪ್ರತಿಷ್ಠಾನವು ಮಂಗಳೂರಿನ ಪುರಭವನದಲ್ಲಿ ಜನವರಿ 18ರಂದು ಭಾನುವಾರ ಸಂಜೆ 6.00ರಿಂದ ‘ಲಯ ಲಾವಣ್ಯ’ ಎಂಬ ಭಾರತೀಯ ತಾಳವಾದ್ಯಗಳ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿಅಂಕುಶ್ ಎನ್ ನಾಯಕ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ‘ಕರ್ಣಾಟಕ ಬ್ಯಾಂಕ್‌ನ’ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ದೇಶನವನ್ನು ಖ್ಯಾತ ಮೃದಂಗ ವಿದ್ವಾಂಸರಾದ ಆನೂರು…

Read More

ಕೇಂದ್ರ ಸರಕಾರದ ಯೋಜನೆಗಳಿಗೆ ಗಾಂಧೀಜಿಯವರ ಕನ್ನಡಕ ಅವಶ್ಯಕತೆ ಇದೆ ಆದರೆ ಅವರ ಹೆಸರಿನ ಅವಶ್ಯಕತೆ ಇಲ್ಲ : ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ

ಮಂಗಳೂರು:ಕೇಂದ್ರ ಸರಕಾರ ಜಾರಿಗೆ ತಂದ ‘ವಿಬಿ-ಜಿ ರಾಮ್ ಜಿ’ ಯೋಜನೆಯು ನಿರೋದ್ಯೋಗ ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಉದ್ಯೋಗ ಖಾತರಿಗೆ ಕತ್ತರಿ ಹಾಕಲಿದೆ ಇದನ್ನು ರಾಜ್ಯ ಸರಕಾರದೊಂದಿದೆ ಯಾವುದೇ ರೀತಿಯ ಚರ್ಚೆಯನ್ನು ಮಾಡದೆ ಜಾರಿಗೆ ತರಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿದರು . ಅವರು ಮನಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಕೇಂದ್ರ ಸರಕಾರದ ಅನೇಕ ಯೋಜನೆಗಳಿಗೆ ಗಾಂಧೀಜಿಯವರ ಕನ್ನಡಕ…

Read More

ದ್ವೇಷ ಭಾಷಣ ಮಸೂದೆಯಿಂದ ರಾಜ್ಯದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಧಕ್ಕೆ : ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ

ಮಂಗಳೂರು:ರಾಜ್ಯದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಮತ್ತುರಾಜ್ಯದ ಜನರನ್ನು ಭಯಗೊಸಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆ ತರಲು ಉದ್ದೇಶಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆರೋಪಿಸಿದ್ದಾರೆ.ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ದ್ವೇಷ ಭಾಷಣ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ತರುತ್ತದೆ , ಈ ಮಸೂದೆಯನ್ನು ಸೂಕ್ತ ಚಿಂತನೆ, ಸಮಾಲೋಚನೆ ಹಾಗೂ ತಜ್ಞರ ಸಲಹೆ ಇಲ್ಲದೆ, ಏಕಪಕ್ಷೀಯವಾಗಿ ರೂಪಿಸಿ ಚರ್ಚೆಗಳನ್ನು ನಡೆಸದೆ…

Read More

ಉಪನ್ಯಾಸಕಿ, ಲೇಖಕಿ, ಬಹುಮುಖ ಪ್ರತಿಭೆ ರೇಷ್ಮಾ ಸಿ. ವೈ ಇವರೀಗೆ ಕನ್ನಡ ಭವನದ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.

ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.”ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More
error: Content is protected !!