ಜನರ ಹೃದಯದಿಂದ ಎಡರಂಗ ಅಸ್ತಮಯ- ಕಾಂಗ್ರೆಸ್.

ಕೋಮುಶಕ್ತಿಗಳ ಬೆಂಬಲದೊಂದಿಗೆ ಕುಟಿಲ ಮತ್ತು ಕೀಳು ತಂತ್ರಗಳ ಮೂಲಕ ಅಧಿಕಾರಕ್ಕೇರಿದ ಎಡರಂಗವು ಜನಹೃದಯಗಳಿಂದ ಶಾಶ್ವತವಾಗಿ ಮರೆಯಾಗುವ ಹಂತದಲ್ಲಿದೆ. ಒಂದು ಕಾಲದಲ್ಲಿ ಶ್ರಮಿಕರು, ಕೃಷಿಕರು, ಭೂರಹಿತರು ಮುಂತಾದ ದಮನಿತ ಜನರಿಗಾಗಿ ಹೋರಾಡುತ್ತಿದ್ದ ಸಿಪಿಎಂ ಇಂದು ಸ್ವತಃ ಶೋಷಕರಾಗಿ ಮಾರ್ಪಟ್ಟದ್ದು ವಿಷಾದಕರ. ಕಂಡ ಕಂಡ ವಿಷಯಗಳಿಗೆ ತೆರಿಗೆ ವಿಧಿಸಿ ಜನರನ್ನು ಚೆನ್ನಾಗಿ ಸುಲಿಗೆ ಮಾಡಿದ ಸಿಪಿಎಂ ಈಗ ಬಹುಕೋಟಿ ವ್ಯವಹಾರಗಳ ಖದೀಮರ ಡಾರ್ಲಿಂಗ್ ಆಗಿ ಮಾರ್ಪಟ್ಟಿದೆ. ಆಡಳಿತದ ಸಕಲ ವಲಯಗಳಲ್ಲೂ ವಿಫಲವಾದ ಎಡರಂಗವು ಇತರರ ಖಾಸಗಿ ಜೀವನಕ್ಕೆ ಇಣುಕಿ ನೋಡುವ…

Read More

ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ

ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ ತರವಾಡು ಕ್ಷೇತ್ರದಲ್ಲಿ ನಡೆಯಿತು. ಸಭೆಯಲ್ಲಿ ಉತ್ತರ ಮಲಬಾರ್ ತೀಯಾ ಕ್ಷೇತ್ರ ಸಂರಕ್ಷಣಾ ಸಮಿತಿ ಇದರ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜನ್ ಪೆರಿಯ ಉಪಸ್ಥಿತರಿದ್ದು ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ಸಮಗ್ರ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸುಕುಮಾರ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆಚಾರ ಪಟ್ಟವರಾದ ಶ್ರೀ ಹರಿಪ್ರಸಾದ್…

Read More

ಡಾ. ವಾಮನ್ ರಾವ್ ಬೇಕಲ್ ರೀಗೆ -ವಿಶ್ವ ರಾಮಕ್ಷತ್ರಿಯ ಮಹಾಸಂಘ ಮಹಾಸಭೆ ಯಲ್ಲಿ ಸನ್ಮಾನ

ಕಾಸರಗೋಡು : ವಿಶ್ವ ರಾಮಕ್ಷತ್ರಿಯ ಮಹಾಸಂಘದ ವತಿಯಿಂದ ದಿನಾಂಕ 14.09.2025ರಂದು ಶ್ರೀ ಸೀತಾ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ದ್ವೈವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಇತ್ತೀಚಿಗೆ ಸಾಮಾಜಿಕ ಕ್ಷೇತ್ರದಲ್ಲಿನ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಲಭಿಸಿದ ಡಾಕ್ಟ್ರೇರೇಟ್ ಪದವಿಯನ್ನು, ಹಾಗೂ ಕಾಸರಗೋಡು ಕನ್ನಡ ಭವನ ಮುಖಾಂತರ ನಡೆಸುತ್ತಿರುವ ಕನ್ನಡ ಪರ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಉಚಿತ ಸಾರ್ವಜನಿಕ ವಾಚನಾಲಯ ಸೇವೆ, ಕನ್ನಡ ಭವನ ಪ್ರಕಾಶನ ಮೂಲಕ ರಾಮಕ್ಷತ್ರಿಯ…

Read More

ಹಿಪ್ನೋಟಿಸಂ ಹೆಸರಲ್ಲಿ ಕಿರಿಯ ವಿದ್ಯಾರ್ಥಿಳನ್ನು ಹಿಗ್ಗಾಮುಗ್ಗಾ ಥಳಿಸಿ ಪ್ರಜ್ಞೆ ತಪ್ಪಿಸಿದ ಹಿರಿಯ ವಿದ್ಯಾರ್ಥಿಗಳು : ನೂತನ ಶೈಲಿಯ ರಾಗಿಂಗ್

ಮಂಜೇಶ್ವರ : ಶಾಲಾ ವಿದ್ಯಾರ್ಥಿಗಳು ನೂತನ ರೀತಿಯ ರಾಗಿಂಗ್ ಕಂಡು ಹಿಡಿದಿದ್ದು,ಹಿಪ್ನೋಟಿಸಂ ಹೆಸರಲ್ಲಿ ಹೊಸ ರಾಗಿಂಗ್ ಇದೀಗ ಭಾರೀ ಸುದ್ದಿಯಾಗುತ್ತಿದೆ. ಹಿಪ್ನೋಟಿಸಂ ತೋರಿಸಿ ಕೊಡುವುದಾಗಿ ಹೇಳಿ ಕೆಲವೊಂದು ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಗಂಭೀರ ಹಲ್ಲೆಗೈದು ಅವರ ಪ್ರಜ್ಞೆ ತಪ್ಪಿಸಿರುವುದು ಆತಂಕಕ್ಕೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಗುತಿದ್ದಂತೆಯೇ ಸಂಬಂಧಪಟ್ಟ ಶಾಲಾ ಅಧಿಕಾಕಸ್ಥರನ್ನು ಹಾಗೂ ಘಟನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರ ಹೆತ್ತವರನ್ನು ಕುಂಬಳೆ ಪೊಲೀಸರು ಠಾಣೆಗೆ ಕರೆಸಿ…

Read More

ಕಟ್ಟೆ ಪ್ರೆಂಡ್ಸ್ ಮತ್ತು ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೆತೃತ್ವದಲ್ಲಿ ಓಣಂ ಹಬ್ಬ.

ಕಟ್ಟೆ ಪ್ರೆಂಡ್ಸ್ ಮತ್ತು ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೇತೃತ್ವ ದಲ್ಲಿ ಓಣಂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಅಡ್ಕ ಶ್ರೀ ಚಕ್ರಪತಿ ಬೀರಮಾರ್ಲರ್ ಮಾಡ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೈವದ ಪಾತ್ರಿ ರಾಧಾಕೃಷ್ಣ ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು .ಸಂಸ್ಥೆಯ ಅಧ್ಯಕ್ಷರಾದ ಸಂಜೀವ ವೀರನಗರ ಅಧ್ಯಕ್ಷತೆ ವಹಿಸಿದ್ದರು. ಶಾಂತಾರಾಮ್ ಶೆಟ್ಟಿ,ಭಗವಾನ್ ದಾಸ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯ ನಂತರ ಬಹುಮಾನ ವಿತರಣೆಯು ನಡೆಯಿತು .ಕಾರ್ಯಕ್ರಮವನ್ನು ಬಾಲಕೃಷ್ಣ ವಿ ಎನ್ ನಿರೂಪಿಸಿದರು.

Read More

ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿಇದರ ವಾರ್ಷಿಕ ಮಹಾ ಸಭೆ

ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 14/09/25 ನೇ ರವಿವಾರ ಗೌರಿ ಗಣೇಶ ಮಂದಿರದಲ್ಲಿ ಶ್ರೀ ಪರಪ್ಪು ಲೋಕನಾಥ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯ ಬಳಿಕ. ಶ್ರೀ ಆನಂದ ಮಾಸ್ತರ್ ಸ್ವಾಗತಿಸಿದರು. ಗೌರವ ನಿರ್ದೇಶಕರಾದ ಶ್ರೀ ನಾರಾಯಣ ಮಣಿಯಾಣಿ ಹಾಗೂ ಶ್ರೀ ಗಣೇಶಸುಧಾ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಯಕ್ಷಗುರುಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೂತನ ಚೆಂಡೆ ಮದ್ದಳೆ ಖರೀದಿಸುವರೇ ತೀರ್ಮಾನ…

Read More

ದಕ್ಷಿಣ ಕನ್ನಡ ಜಿಲ್ಲೆಯ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತನಿಖೆಗೆ ಕೇಂದ್ರ ಸರಕಾರ ತನಿಖಾ ತಂಡವನ್ನು ರಚಿಸಲಿ ; ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ.

ಕರಾವಳಿ ಭಾಗದಲ್ಲಿ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿಯು ಅವೈಜ್ಞಾನ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಸೂಕ್ತವಾದ ತನಿಖೆ ನಡೆಯಬೇಕೆಂದು ಕೇಂದ್ರ ಸರಕಾರಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಆಗ್ರಹಿಸಿದರು . ಅವರು ಮನಪಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕರಾವಳಿಯ ರಸ್ತೆಗಳು ಅವ್ಯವಸ್ಥೆಗಳ ಆಗರವಾಗಿದೆ . ಮಾರ್ಗಗಳು ಅವೈಜ್ಞಾನಿಕತೆ ಮತ್ತು ಕಳಪೆ ಕಾಮಗಾರಿಯಿಂದ ಕೂಡಿದೆ . ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೇಂದ್ರದ ಹೆದ್ದಾರಿ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ . ಕರಾವಳಿ…

Read More

ಮಂಗಳೂರಿಗೆ ಕೀರ್ತಿ ತಂದ ಸಹೋದರ ಸಹೋದರಿಯರು

ಮಂಗಳೂರು : ಮಂಗಳೂರು ನಗರದ ಬಜಾಲ್ ನಿವಾಸಿಯಾದ ಕೇವಲ ಐದೂ ವರ್ಷದ ಹಾಗೂ 11 ವರ್ಷದ ಸಹೋದರ ಸಹೋದರಿಯವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರತಿನಿಧಿಸುತ್ತಾ ಸೆಪ್ಟೆಂಬರ್ 6 ,2025 ಬೆಂಗಳೂರಿನ , ಕಿಂಗ್ಸ್ ಮೆಡವ್ಸ್ ಹೋಟೆಲ್ ನಲ್ಲಿ ಆಯೋಜಿಸಲಾದ ಮಿಸ್ ಪ್ರತಿಭಾ ಸಂಶಿಮಠ ಇವರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಮಿಸ್ ಅಂಡ್ ಮಿಸ್ಸೆಸ್ ಅಸ್ತ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಲಿಟಲ್ ಮಿಸ್ಟರ್ ಇಂಡಿಯಾ ರನ್ನರ್ ಅಪ್ ಅನ್ನು ಲಹರ್ ಸಾಯಿ ಇವರು ಹಾಗೂ ಅವರ ಸಹೋದರಿ…

Read More

ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲದಲ್ಲಿ ಅಬ್ಬಕ್ಕ ರಥಯಾತ್ರೆ ನಾಳೆ ಸಂಪನ್ನ

ಮಂಗಳೂರು: ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದವತಿಯಿಂದ ನಡೆಯುತ್ತಿರುವ ರಾಣಿ ಅಬಕ್ಕೆ ರಥಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಬೃಹತ್ ಶೋಭಯಾತ್ರೆ ಮಂಗಳೂರಿನಲ್ಲಿ ನಾಳೆ ನಡೆಯಲಿದೆ ಎಂದು ಎ ಬಿ ವಿ ಪಿ ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ ತಿಳಿಸಿದರು . ಅವರು ಪತ್ರಿಕಾಭನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿಯ ಪ್ರಯುಕ್ತ ಅಬ್ಬಕ್ಕ ರಥಯಾತ್ರೆಯು ಸೆಪ್ಟೆಂಬರ್ 6 ರಿಂದ ಮೊದಲ್ಗೊಂಡು ರಾಜ್ಯಾದ್ಯಂತ ಬಹಳ ಯಶಸ್ವಿ ಯಾಗಿ ಸಂಚರಿಸುತ್ತಾ…

Read More

ಮೂರು ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವು ಮಿಲಾಗ್ರಿಸ್ ಬುಕ್ ಕ್ವೆಸ್ಟ್’ ಸೆ. 16 ರಿಂದ 21ರ ವರೆಗೆ

ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರು ಹಾಗೂ ಯೂಸ್ಟ್ ಬುಕ್ ಆರ್ ಇದರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 16 ರಿಂದ 21ರ ವರೆಗೆ ಮೂರು ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವು ಮಿಲಾಗ್ರಿಸ್ ಬುಕ್ ಕ್ವೆಸ್ಟ್’ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಲ್ವಿನ್ ಸೆರಾವ್ ತಿಳಿಸಿದರು . ಅವರು ಪತ್ರಿಕಾಭನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಮಕ್ಕಳಲ್ಲಿ ಇಂದು ಪುಸ್ತಕವನ್ನು ಓದುವ ಹವ್ಯಾಸ ಕಡಿಮೆ ಆಗ್ತಾ ಇದೆ , ವಿದ್ಯಾರ್ಥಿಗಳಲ್ಲಿ ಓದುವ…

Read More
error: Content is protected !!