ಕನ್ನಿ( ಪ್ರಥಮ ಮತದಾರರು)ಮತದಾರರನ್ನು ಭೇಟಿ ಮಾಡಲು ‘ಮತದಾರರ ಜಾಗೃತಿ ವಾಹನ’ ಕ್ಯಾಂಪಸ್ಗಳಿಗೆ
ಜನಾಧಿಪತ್ಯ ಪ್ರಕ್ರಿಯೆಯಲ್ಲಿ ಚುನಾವಣೆಯ ಮಹತ್ವವನ್ನು ತಿಳಿಸಿ, ಕನ್ನಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ” ಮತದಾರರ ಜಾಗೃತಿ” ವಾಹನಕ್ಯಾಂಪಸ್ಗಳತ್ತ ಪ್ರಚಾರ ಯಾತ್ರೆ ನಡೆಸಿತು.ಇಂದಿನ ಕಾರ್ಯಕ್ರಮವು ಮಂಜೇಶ್ವರದ ಗೋವಿಂದ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಕಲಾವಿದರಾಗಿ ಗಾಯಕರು ರಂಷಿ ಪಟ್ಟುವಂ, ಸುದೇಶ್ ಭಾಗವಹಿಸಿ ಜಾಗೃತಿ ಸಂದೇಶವನ್ನು ಸಂಗೀತದ ಮೂಲಕ ಹರಡಿದರು. ಕುಟುಂಬಶ್ರೀ ಬ್ಲಾಕ್ ಕೋಆರ್ಡಿನೇಟರ್ ಸಚಿನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು….
