ಕಾಂಬೋಡಿಯಾದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರ ಸಹಿತ 37 ಮಂದಿ ರಕ್ಷಣೆ…. !
ಮಂಗಳೂರು:ಉದ್ಯೋಗಕ್ಕೆಂದು ತೆರಳಿ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಜಾಲದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರು ಯುವಕರ ಸಹಿತ 37 ಮಂದಿಯನ್ನು ರಕ್ಷಿಸಿ ತಾಯ್ತಾಡಿಗೆ ಕರೆತರಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಉದ್ಯೋಗದ ಭರವಸೆಯೊಂದಿಗೆ ಕಾಂಬೋಡಿಯಾಗೆ ತೆರಳಿ ಕಳೆದ ಹಲವು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿದ್ದ ಜಿಲ್ಲೆಯ ಐದು ಮಂದಿ ಸೇರಿ ಒಟ್ಟು 37 ಮಂದಿ ಭಾರತೀಯರು ಕೇಂದ್ರ ಸರಕಾರದ ಸತತ ಮಧ್ಯಸ್ಥಿಕೆ ಪರಿಣಾಮ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಕ ಕಾಂಬೋಡಿಯಾದ ರಾಜತಾಂತ್ರಿಕ ಇಲಾಖೆಗಳ…
