ನಿಲಂಬೂರ್ ಉಪ ಚುನಾವಣೆ : ಚತುಷ್ಕೋನ ಸ್ಪರ್ಧೆಗೆ ಅಖಾಡ ಸಜ್ಜು.

ತಿರುವನಂತಪುರಂ :ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ನಿಲಂಬೂರ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಅಂತೂ ಇಂತೂ ಅಖಾಡ ಸಜ್ಜು ಗೊಂಡಿದ್ದು ಯು ಡಿ ಎಫ್ ನಿಂದ ಆರ್ಯಾಡನ್ ಸೌಕತ್ ಎಲ್ ಡಿ ಎಫ್ ನಿಂದ ಎಂ ಸ್ವರಾಜ್ ಎನ್ ಡಿ ಎ ಯಿಂದ ಮೋಹನ್ ಜೋರ್ಜ್ ಹಾಗೂ ಸ್ವತಂತ್ರ ಅಭ್ಯರ್ಥಿ ಯಾಗಿ ಪಿ ವಿ ಅನ್ವರ್ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಾಮಪತ್ರ ಸೂಕ್ಷ್ಮ ಪರಿಶೀಲನೆಯ ನಂತರ ಇಲ್ಲಿ ಒಟ್ಟು 14 ಸ್ಪರ್ಧಿಗಳು ಕಣದಲ್ಲಿದ್ದಾರೆ….

Read More

ರಾಕೇಶ್‌ ಪೂಜಾರಿ ನಿವಾಸಕ್ಕೆ ರಿಷಬ್‌ ಶೆಟ್ಟಿ ದಂಪತಿ ಭೇಟಿ : ತಾಯಿ, ತಂಗಿಗೆ ಸಾಂತ್ವನ ಹೇಳಿದ ನಟ

ಇತ್ತೀಚೆಗಷ್ಟೇ ನಿಧನರಾದ ʻಕಾಮಿಡಿ ಕಿಲಾಡಿʼ ಸೀಸನ್‌ 3 ವಿನ್ನರ್‌, ಕನ್ನಡದ ಕಿರುತೆರೆಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ (Rakesh Poojary) ಅವರ ನಿವಾಸಕ್ಕೆ ಡಿವೈನ್‌ ನಟ ರಿಷಭ್‌ ಶೆಟ್ಟಿ ದಂಪತಿ ಭೇಟಿ ನೀಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ರಿಷಬ್ ಶೆಟ್ಟಿ ಅವರು ಇಂದು ಭೇಟಿ ನೀಡಿ ರಾಕೇಶ್ ಅವರ ತಾಯಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ರಾಕೇಶ್‌ ತಂಗಿ ಮದುವೆಗೂ ಆರ್ಥಿಕ ಸಹಾಯ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಿರ್ಮಾಣವಾಗುವ ರಾಕೇಶ್‌ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ…

Read More

ತುಳುನಾಡ ಕೊಡುಗೈ ದಾನಿಯ ಹುಟ್ಟೂರ ಪ್ರೇಮ; ತನ್ನೂರ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗವನ್ನು ದತ್ತು ಪಡೆದ ಡಾ. ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ

ಮಂಜೇಶ್ವರ : ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಬಳಲಿ ಬೆಂಡಾಗಿರುವ ಅದೆಷ್ಟೋ ಜೀವಗಳಿವೆ. ಬಡತನ ಇನ್ನಷ್ಟು ಅವರ ಜೀವ ಹಿಂಡುತ್ತದೆ. ಯಾವುದಾದರೂ ಕಾಣುವ ಕೈಗಳ ಸಹಾಯಕ್ಕೆ ಕಾಯುತ್ತವೆ. ಆದರೆ ಎಲ್ಲರೂ ಮರುಗುವರೇ ಹೊರತು ಸಹಾಯಕ್ಕಾಗಿ ಮುಂದೆ ಬರುವುದು ವಿರಳ. ಇಂತಹ ಸಂದರ್ಭಗಳಲ್ಲಿ ನಮಗೆ ಹೊಳೆಯುವ ಹೆಸರೆಂದರೆ‌ ಅದು ಡಾ. ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ. ತಮ್ಮ ನಿಸ್ವಾರ್ಥವಾದ ಸಮಾಜ ಸೇವೆ ಇಂದು ಅವರನ್ನು ಬಹಳ ಎತ್ತರಕ್ಕೆ ತಂದು ನಿಲ್ಲಿಸಿದೆ.‌ ಜಾತಿ-ಮತ-ಧರ್ಮ ಎನ್ನುವ ಯಾವುದೇ ಭೇದವಿಲ್ಲದೆ ಸಮಾಜದಲ್ಲಿನ ಅಸಕ್ತರಿಗೆ…

Read More

ಪ್ರಶಾಂತಿಯಲ್ಲಿ ದೈವಿಕ ಅನುಗ್ರಹದೊಂದಿಗೆ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭ

ಬಾಯಾರು, ಜೂನ್ 2: ಬಾಯಾರಿನ ಪ್ರಶಾಂತಿ ವಿದ್ಯಾ ಕೇಂದ್ರವು ತನ್ನ 2025-2026ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಸಾಂಪ್ರದಾಯಿಕ ಸಂಸ್ಕೃತಿ ಆಚಾರಗಳ ವಿಧಿವಿಧಾನ ದೊಂದಿಗೆ ಉತ್ಸಾಹ ಮತ್ತು ಆಧ್ಯಾತ್ಮಿಕ ವೈಭವದೊಂದಿಗೆ ಆಚರಿಸಲಾಯಿತು. ಹೊಸ ಶೈಕ್ಷಣಿಕ ವರ್ಷಕ್ಕೆ ದೈವಿಕ ಆಶೀರ್ವಾದವನ್ನು ಕೋರುತ್ತಾ, ಅರ್ಚಕ ವೇದಮೂರ್ತಿ ಶ್ರೀ ನವನೀತ ಕೃಷ್ಣ ಬೋಳoತಕೋಡಿ ಮತ್ತು ಸಹ-ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಸರಸ್ವತಿ ಹವನದೊಂದಿಗೆ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀಡಿದ ಭಾವಪೂರ್ಣ ಭಕ್ತಿಪೂರ್ವ ಭಜನೆಗಳಿಂದ ಪ್ರಶಾಂತ ವಾತಾವರಣವು ಸಮೃದ್ಧವಾಗಿತ್ತು. ನಂತರ…

Read More

ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಇತ್ತೀಚೆಗೆ ಕಯ್ಯಾರು ಪರಂಬಳ ಭಾರತಾ ಮಾತಾ ಸೇವಾ ಟ್ರಸ್ಟ್ ಸಭಾ ಭವನದಲ್ಲಿ ದಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ರಮ್ಯಾ .ಯನ್ ಸೀತಾ0ಗೊಳಿ ಮಕ್ಕಳ ಸಹಾಯ ವಾಣಿ ಕೇಂದ್ರದ ಮುಖ್ಯಸ್ಥೆ , ಗೌರವ ಮಾರ್ಗದರ್ಶಕಿ ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇವರು ವಹಿಸಿದರು. ಸಭೆಯನ್ನು ಕುಂಬಳೆ ಪೊಲೀಸ್ ಸ್ಟೇಷನ್ ಇದರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ…

Read More

33.5ಕಿಲೋ ಗಾಂಜಾ ಸಹಿತ ಸೋಂಕಾಲ್ ನಿವಾಸಿಯ ಬಂಧನ

ಕುಂಬಳೆ: ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಯೆನ್ನಲಾದ ಉಪ್ಪಳ ಸಮೀಪದ ಸೋಂಕಾಲ್ ನಿವಾಸಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೋಲೀಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ್ಪಳ ಸೋಂಕಾಲಿನ ಎ.ಅಶೋಕ(45) ಎಂಬಾತನನ್ನು ಬಂಧಿಸಿ, ಈತ ಮಲಗುವ ಮಂಚದಡಿಯಲ್ಲಿ ದಾಸ್ತಾನಿರಿಸಿದ್ದ 33.5ಕಿಲೋ ಗಾಂಜ ನಶಪಡಿಸಲಾಗಿದೆ.ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಗಳಲ್ಲಿ ಈತನೂ ಒಬ್ಬನೆಂದು ಪೋಲೀಸರು ತಿಳಿಸಿದ್ದಾರೆ. ಮಂಜೇಶ್ವರ ಎಸ್.ಐ.ಕೆ.ಆರ್.ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

Read More

ಬ್ಲಾಕ್ ಸ್ಟಾಲೋನ್ಸ್ ಆರ್ಟ್ಸ್ ಆಂಡ್ ಸ್ಟೋರ್ಟ್ಸ್ ಕ್ಲಬ್ ತಲೇಕಲ ಇದರ 10ನೇ ವಾರ್ಷಿಕೋತ್ಸವ, ಆರೋಗ್ಯ ತಪಾಸಣೆ ಹಾಗೂ ಉಚಿತ ವೈದ್ಯಕೀಯ ಶಿಬಿರ

ಬ್ಲಾಕ್ ಸ್ಟಾಲೋನ್ಸ್ ಆರ್ಟ್ಸ್ ಆಂಡ್ ಸ್ಟೋರ್ಟ್ಸ್ ಕ್ಲಬ್ ತಲೇಕಲ ಇದರ 10ನೇ ವಾರ್ಷಿಕೋತ್ಸವದ ಪ್ರಯುಕ್ತನಾಯರ್‌ ಮೂಲೆ ಫ್ಯಾಮಿಲಿ ಅಸೋಸಿಯೇಷನ್ ಕುಟುಂಬ ವೈದ್ಯರಿಂದ ಮೀಯಪದವು ಶಾಲಾವಠಾರದಲ್ಲಿ ಆರೋಗ್ಯ ತಪಾಸಣೆ ಹಾಗೂ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಶಿಬಿರದಲ್ಲಿ ನೂರಾರು ಮಂದಿ ಫಲಾನುಭವಿಗಳು ಪಾಲ್ಗೊಂಡರು. ಶಿಬಿರವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್ ಉದ್ಘಾಟಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ನಿವೃತ ಜಿಲ್ಲಾ ನ್ಯಾಯಾಧೀಶಹಾಜಿ ಮೂಸ ಕುಂಞ ನಾಯರ್ ಮೂಲೆ, ಡಾಕ್ಟರ್ ಉಮರ್…

Read More

ಡಾ| ಬಿ.ಆರ್ ಕಲಾ ಸಂಘ ಅಂಬೇಡ್ಕರ್ ನಗರ ಕುಬಣೂರು ಇದರ ವತಿಯಿಂದ ಸತತ 19ನೇ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕೋಪಕರಣದ ವಿತರಣಾ ಕಾರ್ಯಕ್ರಮ

ಡಾ, ಬಿ.ಆರ್ ಕಲಾ ಸಂಘ ,ಅಂಬೇಡ್ಕರ್ ನಗರ ಕುಬಣೂರು ಇದರ ವತಿಯಿಂದ ಸತತ 19ನೇ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕೋಪಕರಣದ ವಿತರಣಾ ಕಾರ್ಯಕ್ರಮ ಕಲಾ ಸಂಘದಲ್ಲಿ ಜರಗಿತು. ಯುವ ಕವಿ ಹಾಗೂ ಅಧ್ಯಾಪಕರಾದ ಶ್ರೀ ಹರೀಶ್ ಸುಲಾಯಿ ಒಡ್ಡoಬೆಟ್ಟು,ಅಧ್ಯಾಪಕರಾದ ಶ್ರೀ ಅಶೋಕ್ ಮಾಸ್ಟರ್ ಕೊಡ್ಲಮೊಗರು,ಅಧ್ಯಾಪಕಿ ಸುಹಾಸಿನಿ ಟೀಚರ್,ಅಧ್ಯಾಪಕಿ ನಿವೇದಿತಾ ಟೀಚರ್, ಕಲಾ ಸಂಘದ ಅಧ್ಯಕ್ಷ ಶಿವಪ್ರಸಾದ್,ಮಹಿಳಾಸಂಘದ ಅಧ್ಯಕ್ಷೆ ಸಾವಿತ್ರಿ,ರೈಲ್ವೆ ಉದ್ಯೋಗಿ ಸದಾನಂದ ಕುಬಣೂರು ಶುಭಾಶಂಸನೆಗೈದರು. ವಿಶ್ವನಾಥ್ ಮಾಸ್ತರ್ ಸ್ವಾಗತಿಸಿ,ಮೋಹಿನಿ ಟೀಚರ್ ವಂದಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿಯಿಂದ…

Read More

ಅಬ್ದುಲ್ ರಹೀಮ್ ಕೊಲೆ ಪ್ರಕರಣ ಮೂವರು ಆರೋಪಿಗಳು ಪೋಲೀಸರ ಬಲೆಗೆ

ಮಂಜೇಶ್ವರ: ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹ್ಮಾನ್ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಮತ್ತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ತೆಂಕಬೆಳ್ಳುರು ಗ್ರಾಮದ ಸುಮಿತ್ ಆಚಾರ್ಯ (27), ಹಾಗೂ ಬಡಗಬೆಳ್ಳೂರು ಗ್ರಾಮದ ರವಿರಾಜ್ (23)ನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು,ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಮಳೆಹಾನಿ ಪ್ರದೇಶದಲ್ಲಿ DYFI ಯೂತ್ ಬ್ರಿಗೇಡ್ ನಿಂದ ರಕ್ಷಣಾ ಕಾರ್ಯ

ತೀವ್ರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡ ಜೋಡುಕಲ್ಲು,ಕನ್ನಟ್ಟಿಪಾರೆ, ಉಪ್ಪಳ ,ಪೆರಿಂಗಡಿ ಮತ್ತು ಶುಭಾಷ್ ನಗರ ಇತ್ಯಾದಿ ಪ್ರದೇಶಗಳಲ್ಲಿ CPIM ಮಂಜೇಶ್ವರ ಏರಿಯಾ ಸೆಕ್ರೆಟರಿ ವಿ ವಿ ರಮೇಶ್ ಹಾಗೂ DYFI ಜಿಲ್ಲಾ ಜೊತೆ ಕಾರ್ಯದರ್ಶಿ ಸಾಧಿಕ್ ಚೆರುಗೋಳಿ ಇವರ ನೇತೃತ್ವದಲ್ಲಿ DYFI ಯೂತ್ ಬ್ರಿಗೇಡ್ ನಿಂದ ರಕ್ಷಣಾಕಾರ್ಯ ನಡೆಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಪ್ರಯತ್ನ ಪಟ್ಟರು.ಈ ಸಂಧರ್ಭದಲ್ಲಿ DYFI ಯೂತ್ ಬ್ರಿಗೇಡ್ ಸದಸ್ಯರು ಹಾಜರಿದ್ದರು

Read More
error: Content is protected !!