ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರು ಪರಸ್ಪರ ಡಿಕ್ಕಿ ಮಹಿಳೆಯೊಬ್ಬರ ದಾರುಣ ಸಾವು

ಮಂಜೇಶ್ವರ : ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ವರ್ಕಾಡಿ ಸಮೀಪದ ಕೋಳ್ಯೂರು ಪದವು ನಿವಾಸಿ ನವ್ಯ (28) ಸಾವನ್ನಪ್ಪಿದ ದುರ್ದೈವಿ. ಇವರ ಪತಿ ಪದ್ಮನಾಭ(36) ಹಾಗೂ ಮಗು ಗಾಯನ್ ಎಂಬಿವರು ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೃತ ನವ್ಯಾ ಅವರು ತಲಪ್ಪಾಡಿಯ ಗೇರೇಜ್ ಮಾಲಕ ಶಿವರಾಮ ಆಚಾರ್ಯ ರ ಪುತ್ರಿಯಾಗಿದ್ದು, ಔಷಧಿಗೆಂದು ಕಾರಿನಲ್ಲಿ ತೆರಳುತ್ತಿದ್ದರು. ಉಪ್ಪಳ ಭಾಗದಿಂದ ಮಂಗಳೂರು ಕಡೆ…

Read More

ಮಂಜೇಶ್ವರದಲ್ಲಿ ಸುರಿದ ಧಾರಾಕಾರ ಮಳೆ ಮನೆ, ಮಸೀದಿ ,ದೇವಸ್ಥಾನ, ವ್ಯಾಪಾರ ಸಂಸ್ಥೆ ಜಲಾವೃತ

ಮಂಜೇಶ್ವರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ, ಮಸೀದಿ ,ದೇವಸ್ಥಾನ ,ವ್ಯಾಪಾರ ಸಂಸ್ಥೆ ಜಲಾವೃತಗೊಂಡಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆನೀರಿನಿಂದಾಗಿ ಮಂಜೇಶ್ವರ ತಾಲೂಕಿನ ಪ್ರದೇಶವಾದ ಕನಿಲ, ಪೊಸೋಟು , ಹೊಸಂಗಡಿ , ಬಂಗ್ರಮಂಜೇಶ್ವರ್ ,ಕಾಡಿಯಾರ್ ಸಂಪೂರ್ಣ ಜಲಾವೃತವಾಗಿದೆ. ಹಾಗು ಅಂಗಡಿ , ಕ್ಲಬ್ ದೇವಾಲಯಗಳಿಗೂ ನೀರು ನುಗ್ಗಿದ್ದು ಹಲವು ನಾಶ ನಷ್ಟ ಸಂಭವಿಸಿದೆ. ಕೆಲವೊಂದು ಕಡೆಗಳಲ್ಲಿ ಅಪಾಯವನ್ನುಟುಮಾಡಿದೆ . ಕಾಡಿಯಾರ್ ನಲ್ಲಿ ಮೀನಿನ ಬಲೆ ದೋಣಿ , ದೋಣಿಯ ಇಂಜಿನ್ , ಮನೆಗಳಿಗೆ ಹನಿಯಾಗಿ ಬಹಳಷ್ಟು ನಾಶ ನಷ್ಟ ಸಂಭವಿಸಿದೆ. ಪಂಚಾಯತ್…

Read More

ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸು ಡಿಕ್ಕಿ : ಗಾಯಗೊಂಡ ಮೂವರ ಪೈಕಿ ಒಬ್ಬನ ಸ್ಥಿತಿ ಗಂಭೀರ…!

ಮಂಜೇಶ್ವರ: ರೈಲು ನಿಲ್ದಾಣದಿಂದ ಬರುತ್ತಿದ್ದ ಕಾರಿಗೆ ಕಾಸರಗೋಡು ಭಾಗದಿಂದ ತಲಪಾಡಿಗೆ ತೆರಳುತಿದ್ದ ಖಾಸಗಿ ಬಸ್‌ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಪೊಸೋಟಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವರ್ಕಾಡಿ ಮಜೀರ್ ಪಳ್ಳ ನಿವಾಸಿಗಳಾದವ ಪ್ರೀತಮ್ (20), ಪ್ರಜ್ವಲ್ (21), ಕೆಲ್ವಿನ್ (20) ಎಂಬಿ ಗಾಯಗಳಾಗಿದ್ದು, ಈ ಪೈಕಿ ಕೆಲ್ವಿನ್ ಸ್ಥಿತಿ ಗಂಭಿರವಾಗಿದೆ. ಸ್ಥಳೀಯರು ಕೂಡಲೇ ಗಾಯಳುಗಳನ್ನು…

Read More

ಎಡೆಬಿಡದೆ ಸುರಿಯುತ್ತಿರುವ ಮಳೆ : ಹೊಸಂಗಡಿ ಪೇಟೆ ವ್ಯಾಪಾರಿಗಳು ಸಂಕಷ್ಟದಲ್ಲಿ

ಧಾರಾಕಾರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಸಂಗಡಿ ಪೇಟೆಯ ವ್ಯಾಪಾರ ಮಳಿಗೆಗಳು,ಅಂಗಡಿಗಳು,ಹೋಟೆಲುಗಳು ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲಿಕ್ಕಿದ್ದು ಅಪಾರ ನಾಶ ನಷ್ಟ ಉಂಟಾಗಿದೆ.ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ ಪಂಚಾಯತ್ ಅಧಿಕಾರಿಗಳು ಹೊಣೆಯೆಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರತಿವರ್ಷವೂ ಇಂತಹ ಕೃತಕ ನೆರೆ ಬರುವುದು ಹೊಸಂಗಡಿಯಲ್ಲಿ ಸಹಜವಾಗಿದೆ.ಸೂಕ್ತ ಕ್ರಮವನ್ನು ಕೈಗೊಳ್ಳಬೇಕು,ವ್ಯಾಪಾರಿಗಳಿಗೆ ನಷ್ಟ ಪರಿಹಾರವನ್ನು ನೀಡಬೇಕು ,ಇಲ್ಲದೆ ಇದ್ದಲ್ಲಿ ಹೋರಾಟವನ್ನು ನಡೆಸುವುದಾಗಿ ಮಂಜೇಶ್ವರ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿಯ…

Read More

ಪಿ ವಿ ಅನ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರ :ಗೊಂದಲದಗೂಡಾದ ರಾಜ್ಯ ಕಾಂಗ್ರೆಸ್ .

ತಿರುವನಂತಪುರಂ : ಉಪಚುನಾವಣೆ ನಡೆಯುವ ನಿಲಂಬೂರ್ ಕ್ಷೇತ್ರದ ಮಾಜಿ ಶಾಸಕಪಿ ವಿ ಅನ್ವರ್ ಯು ಡಿ ಎಫ್ ಗೆ ಸೇರುವ ಬಗ್ಗೆ ಯಾವುದೇ ತೀರ್ಮಾನ ಮಾಡದೇ ಮೀನಮೇಷ ಎಣಿಸುತ್ತಿದ್ದಾರೆ.ಈ ಮದ್ಯೆ ಅನ್ವರ್ ಆಗಮನದ ವಿಷಯ ರಾಜ್ಯ ಕಾಂಗ್ರೆಸ್ ಮನೆಯಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದ್ದು ಪಕ್ಷದ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಧಾನ ಸಭೆಯ ವಿಪಕ್ಷ ನಾಯಕ ವಿ ಡಿ ಸತೀಶನ್ ಮಾತನಾಡಿ ಅನ್ವರ್ ಯು ಡಿ ಎಫ್ ಗೆ ಬರುವ ಬಗ್ಗೆ ಮೊದಲು ತೀರ್ಮಾನ…

Read More

ದೇರಳಕಟ್ಟೆ : ಮನೆ ಮೇಲೆ ಬಿದ್ದ ತಡೆಗೋಡೆ – ಬಾಲಕಿ ಮೃತ್ಯು

ದೇರಳಕಟ್ಟೆ, ಮೇ. 30 (namma media24x7): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ತಡೆಗೋಡೆ ಕುಸಿದುಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ಕಾನಕರೆ ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ನೌಶಾದ್ ರ ಪುತ್ರಿ ಫಾತಿಮ ನಈಮ (10) ಎಂದು ಗುರುತಿಸಲಾಗಿದೆ. ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದಿದ್ದು, ಮನೆಯ ಕೊಠಡಿ ಯ ಕಿಟಕಿ ಮಗುವಿನ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. ಘಟನೆ ನಡೆದ ಕೂಡಲೇ ಮಗುವನ್ನು…

Read More

ಕುಂಬಳೆ ಪರಿಸರದಲ್ಲಿ ಸರಣಿ ಕಾರು ಅಪಘಾತ ಹಲವರು ಗಾಯದಿಂದ ಪಾರು

ಮಂಜೇಶ್ವರ: ಕುಂಬಳೆ ಸಮೀಪದ ಭಾಸ್ಕರನಗರ ಕೆಎಸ್‌ಟಿಪಿ ರಸ್ತೆಯಲ್ಲಿ ಗಂಟೆಗಳ ವ್ಯತ್ಯಾಸದಲ್ಲಿ ಎರಡು ಕಾರುಗಳು ಅಪಘಾತಕ್ಕೀಡಾ ಗಿವೆ. ಈ ಪೈಕಿ ಒಂದು ಕಾರಿನಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಬರುತ್ತಿದ್ದ ಕಳತ್ತೂರು ನಿವಾಸಿಗಳು ಸಂಚರಿಸಿದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿಚರಂಡಿಗೆ ಮಗುಚಿ ಬಿದ್ದಿದೆ. ಅದರಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮತ್ತೊಂದು ಅಪಘಾತ ಕಳೆದ ರಾತ್ರಿ 12.30ರ ವೇಳೆ ಸಂಭವಿಸಿದೆ. ಇದರಲ್ಲಿ…

Read More

ಅಬ್ದುಲ್ ರಹೀಂ ಕೊಲೆ ಪ್ರಕರಣ -ದೀಪಕ್ ಸಹಿತ ಮೂವರು ಪೊಲೀಸರ ವಶಕ್ಕೆ

ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ಅಬ್ದುಲ್ ರಹೀಂ ಅವರನ್ನು ಕೊಲೆಗೈದ‌ ಪ್ರಕರಣದಲ್ಲಿ ದೀಪಕ್ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಕೊಲೆ ಕೃತ್ಯದಲ್ಲಿ ಸುಮಾರು 15 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಕೃತ್ಯ ನಡೆದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಆ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More

ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣ ಗಣನೆ…….

ಪುಟ್ಟ ಕನಸುಗಳೊಂದಿಗೆ ದಿಟ್ಟ ಹೆಜ್ಜೆಯನಿಕ್ಕುತ ವಿದ್ಯಾದೇಗುಲಕ್ಕೆ ವಿದ್ಯಾರ್ಥಿಗಳು .ಜೂನ್ 2 ರಂದು ನೂತನ ಅಧ್ಯಯನ ವರ್ಷ ಆರಂಭ ಅಂತೂ ಇಂತೂ ಬೇಸಿಗೆ ರಜೆ ಕಳೆದು ಮತ್ತೊಂದು ನೂತನ ಶೈಕ್ಷಣಿಕ ವರ್ಷದ ಸ್ವಾಗತದಲ್ಲಿ,ಲವಲವಿಕೆಯೊಂದಿಗೆ ವಿದ್ಯಾರ್ಥಿ ಸಮೂಹ .ಜೂನ್ 2ರಂದು ರಾಜ್ಯದ ಎಲ್ಲಾ ಶಾಲೆಗಳು ಪುನರಾರಂಭಗೊಳ್ಳಲ್ಲಿದ್ದು ಈ ಮೂಲಕ 2025-2026 ರ ಸಾಲಿನ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಭವಿಷ್ಯದ ಹತ್ತು ಹಲವಾರು ಕನಸುಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳಲ್ಲೊಂದಿಗೆ ನೂತನವಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳನ್ನು ಹಾಗೂ ನೂತನ ಶಾಲಾರಂಭವನ್ನು…

Read More

ದೇಶದಲ್ಲೆಡೆ ಸಾವಿರ ದಾಟಿದ ಕೊರೋನಾ ಸೋಂಕು ಭಾದಿತರ ಸಂಖ್ಯೆ. ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳತ್ತ ಆರೋಗ್ಯ ಇಲಾಖೆ

ದೇಶದೆಲ್ಲೆಡೆ ಕೋವಿಡ್ 19 ರ ಮೂರನೇ ಅಲೆ ವ್ಯಾಪಕವಾಗಿ ಪಸರಿಸುತ್ತಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರ ,ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕು ಭಾದಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.ದೇಶದೆಲ್ಲೆಡೆ ವಿವಿಧ ರಾಜ್ಯಗಳಲ್ಲಾಗಿ ಒಟ್ಟು ಸಾವಿರಕ್ಕಿಂತಲೂ ಸೋಂಕು ಭಾದಿತರಾದ ಬಗ್ಗೆ ಆರೋಗ್ಯ ಇಲಾಖೆಯು ಸೂಚನೆ ನೀಡಿದೆ. ಎಲ್ಲಾ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.ಕಳೆದೆರಡು ಬಾರಿ ಬಂದ ಕೊರೊನದಿಂದಾಗಿ ಜನರು ತೀರಾ ಹೈರಾಣಾಗಿದ್ದು ಇನ್ನೊಂದು ಅಲೆಯನ್ನು ಎದುರಿಸಲು ವಿವಿಧ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ. ಹೆಚ್ಚಾಗಿ…

Read More
error: Content is protected !!