Headlines

ಹಬ್ಬಗಳ ನಡುವೆಯೂ ಮಂದವಾಗಿರುವ ಮಾರುಕಟ್ಟೆ.

ಮಂಗಳೂರು: ವಿನಾಯಕ ಚತುರ್ಥಿ ಹಬ್ಬದ ಸಂಭ್ರಮ ಇನ್ನೇನೂ ಶುರುವಾಗುವಷ್ಟರಲ್ಲಿಯೇ ಮಳೆರಾಯ ಅಬ್ಬರಿಸಿ ಬೊಬ್ಬೇರಿದ್ದಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಕಾರಣ ಕರಾವಳಿಯಾದದಂತ್ಯ ಉತ್ತಮ ಮಳೆಯಾಗುತ್ತಾ ಇದೆ. ಈ ಮಳೆಯು ಬೀದಿ ಬದಿಗಳಲ್ಲಿ ಹೂ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಕಿರಿ ಕಿರಿಯನ್ನೇ ಉಂಟು ಮಾಡಿದೆ. ವಿಪರೀತವಾಗಿ ಸುರಿಯುವ ವರ್ಷಧಾರೆಯಿಂದ ಗ್ರಾಹಕರು ಮಾರುಕಟ್ಟೆಯ ಕಡೆಗೆ ಬರಲು ಹಿಂದೇಟು ಹಾಕ್ತಾ ಇದ್ರೆ, ಇತ್ತ ವ್ಯಾಪಾರಿಗಳು ತಾವು ತಂದ ಹೂವು ಮಾರಾಟ ವಾಗ್ತಾ ಇಲ್ಲವೆಂದು ದುಃಖವನ್ನು ವ್ಯಕ್ತ ಪಡಿಸ್ತಾ ಇದ್ದಾರೆ. ಹಬ್ಬದ…

Read More

ಯೂಟ್ಯೂಬರ್ ಶಮೀರ್ ಎಂ ಡಿ ಬಂಧನದ ವಿಳಂಭಕ್ಕೆ ಕಾರಣ ಸರಕಾರ -ಸತೀಶ್ ಕುಂಪಲ

ಮಂಗಳೂರು:ಯೂಟ್ಯೂಬರ್ ಶಮೀರ್ ಎಂ ಡಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ್ರಚಾರ ಮಾಡಿದ ದಿನವೇ ಆತನನ್ನು ಬಂಧಿಸಬೇಕಿತ್ತು. ಆದರೆ ಸರಕಾರ ಅನುಸರಿಸಿದ ಮೆದು ನೀತಿಯು ಆತನನ್ನು ಬಂಧಿಸಲಿಲ್ಲ . ಸರಕಾರ ಈ ಕೂಡಲೇ ಆತನನ್ನು ಬಂಧಿಸಬೇಕೆಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದರು. ಅವರು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮಾತನಾಡಿ, ಧರ್ಮಸ್ಥಳದ ಬಗ್ಗೆ ಇಂದು ಅಪ್ರಾಚಾರಗಳು ಹರಿದಾಡುತ್ತಿದೆ . ಈ ಎಲ್ಲಾ ಷಡ್ಯಂತರವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ತರುವಂಥದ್ದು. ಈ ಮೊದಲು ಶಬರಿಮಲೆ ದೇವಾಲಯದ ಪಾವಿತ್ರತೆಗೆ…

Read More

ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ.

ಮಂಜೇಶ್ವರ : ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪೋಷಕರ ಮಕ್ಕಳ ಮೇಲಿನ ಕರ್ತವ್ಯಗಳು ಎಂಬ ಮಹತ್ವಪೂರ್ಣ ವಿಷಯ ಉಪನ್ಯಾಸದ ಪ್ರಧಾನ ವಿಷಯವಾಗಿದ್ದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಪೋಷಕರಿಗೆ ಮಕ್ಕಳ ಪಾಲನೆಯ ಜವಾಬ್ದಾರಿ ಮತ್ತು ನೈತಿಕ ಬೆಳೆವಣಿಗೆಯ ಕುರಿತು ಅರಿವು ಮೂಡಿಸುವುದು ಹಾಗೂ ಅವರಲ್ಲಿ ಜವಾಬ್ದಾರಿಯುತ ಮನೋಭಾವವನ್ನು ಬೆಳೆಸುವುದಾಗಿತ್ತು. ಉಪನ್ಯಾಸಕರಾಗಿ ಭಾಗವಹಿಸಿದ್ದ ಮೊಹಮ್ಮದಲಿ ಸಲಫಿ ಅವರು ತೀವ್ರವಾದ ನೈತಿಕತೆಯೊಂದಿಗೆ ಹಾಗೂ ಇಸ್ಲಾಮಿಕ ದೃಷ್ಠಿಕೋನದಿಂದ…

Read More

ಚಿತ್ರರಂಗದಲ್ಲಿ ಹೊಸ ಸಂಚಲನದೊಂದಿಗೆ “ನೆತ್ತೆರೆಕೆರೆ” ತುಳು ಸಿನಿಮಾ ಆಗೋಸ್ಟ್ 29 ರಂದು ತೆರೆಗೆ.

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ “ನೆತ್ತೆರೆಕೆರೆ” ತುಳು ಸಿನಿಮಾ ಆಗೋಸ್ಟ್ 29 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ನಿರ್ಮಾಪಕ ಲಂಚುಲಾಲ್ ಮಾಹಿತಿ ನೀಡಿದರು. ನೆತ್ತೆರೆಕೆರೆ ಸಿನಿಮಾ ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲಿದೆ. ನೆತ್ತರೆಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದೆ. ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರ, ಕುತೂಹಲ ಹೆಚ್ಚಿದೆ. ಸಿನಿಮಾಕ್ಕೆ ಚೇಳಾರ್, ಮುಲ್ಕಿ,ಕಿನ್ನಿಗೋಳಿಯಲ್ಲಿ ಚಿತ್ರೀಕರಣಗೊಂಡಿದೆ.ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ ,…

Read More

ಶ್ರೀ ಅಯ್ಯಂಗಾಳಿ (1863 – 1941 )

ಕೇರಳದ ನವೋತ್ಥಾನ ನಾಯಕರಲ್ಲಿ ಒಬ್ಬರಾದ , ಅಗ್ರಗಣ್ಯ ಧೀಮಂತ ನಾಯಕರು ಆಗಿರುವ ದಲಿತರ ಸಾಮಾಜಿಕ ರಾಜಕೀಯ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ ಕೇರಳದ ಅಂಬೇಡ್ಕರ್ ಎಂದು ವಿಶೇಷಣವನ್ನು ಪಡೆದಿರುವ ಕೇರಳದ ಮಹಾನ್ ಪುತ್ರನಾಗಿರುವ ಶ್ರೀ ಅಯ್ಯಂಕಾಲಿ ಅವರ ಜನ್ಮದಿನವನ್ನು ಅಗಸ್ಟ್ 28ರಂದು ಎಲ್ಲಾ ವರ್ಷ ಅಯಂಕಾಲಿ ದಿನವನ್ನಾಗಿ ಆಚರಿಸಲಾಗುವುದು. ಶ್ರೀ ಅಯ್ಯಂಗಾಳಿಯವರು ತಿರುವನಂತಪುರದ ವೆಂಗನೂರು ಎಂಬಲ್ಲಿ ಶ್ರೀ ಅಯ್ಯನ್ ಮತ್ತು ಶ್ರೀಮತಿ ಮಾಲ ದಂಪತಿಗಳಿಗೆ 1863 ಅಗಸ್ಟ್ 28ರಂದು ಜನಿಸಿದರು. ಕೇರಳದ ದಲಿತ ಸಮುದಾಯದ ಸಾಮಾಜಿಕ ರಾಜಕೀಯ ಶೈಕ್ಷಣಿಕ…

Read More

ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ 8 ರ ಹರೆಯದ ರುಷಬ್ ರಾವ್ ಕರಾವಳಿಗೆ ಹೆಮ್ಮೆ.

ಮಂಗಳೂರು: ಆಗಸ್ಟ್ 13 ರಿಂದ 17 ರ ವರೆಗೆ ವಿಯೆಟ್ನಾಂ ನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿಭಾರತವನ್ನು ಪ್ರತಿನಿಧಿಸಿ Prince Category ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ “ಸೂಪರ್ ಟ್ಯಾಲೆಂಟ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ 8 ರ ಹರೆಯದ ರುಷಬ್ ರಾವ್ ಕರಾವಳಿಗೆ ಹೆಮ್ಮೆ ತಂದಿದ್ದಾನೆ ಎಂದು ವಿಜೇತನ ಆಪ್ತರಾದ ರಾಹುಲ್ ಅಮೀನ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿ, ರುಶಬ್ ಪ್ರತಿಭೆಯನ್ನು ಅತೀ ಹತ್ತಿರದಲ್ಲಿ ಕಂಡವನು ನಾನು,…

Read More

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ರಾಜ್ಯ ಸರಕಾರಿ ನೌಕರರ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.ದಕ್ಷಿಣ ಕನ್ನಡ ಜಿಲ್ಲೆಯ 133 ಎಸೆಸೆಲ್ಸಿ, 102 ಪಿಯುಸಿ ವಿದ್ಯಾರ್ಥಿಗಳಿಗೆ, ಉಡುಪಿ ಜಿಲ್ಲೆಯ 115 ಮಂದಿ ಎಸೆಸೆಲ್ಸಿ ಮತ್ತು 88 ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸದ…

Read More

ವಸಂತ್ ಗಿಳಿಯಾರ್ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್ ಖಂಡನೆ.

ಪವಿತ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕರು ಆಧಾರ ರಹಿತ ಆರೋಪ ಮಾಡುತ್ತಿರುವುದು ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸುದ್ದಿಯಾಗಿದೆ. ಬುರುಡೆ ಪ್ರಕರಣವನ್ನು ಸರ್ಕಾರ ಎಸ್ಐಟಿ ತನಿಖೆಗೆ ಒಳಪಡಿಸಿದೆ. ಧರ್ಮಾಧಿಕಾರಿಗಳು, ಕ್ಷೇತ್ರದ ಸಿಬ್ಬಂದಿ ರಾಜ್ಯಾದ್ಯಂತ ಎಲ್ಲರೂ ಸ್ವಾಗತಿಸಿದ್ದಾರೆ. ನಿಷ್ಪಕ್ಷಪಾತ ತನಿಖೆಯೂ ನಡೆಯುತ್ತಿದೆ. ಅನಾಮಿಕ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಅಗೆದು ತಪಾಸಣೆ ನಡೆಸಲಾಗಿದೆ. ಈ ಕುರಿತಾಗಿ ಯೂಟುಬರ್ ಗಳು, ಸೋಶಿಯಲ್ ಮೀಡಿಯಾ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮದೇ ತೀರ್ಪುಗಳನ್ನು ನೀಡುತ್ತಿದ್ದಾರೆ. ತನಿಖೆ ಆದೇಶಿಸಿ 2 ವಾರಗಳ…

Read More

ಎಸ್ಯಾಸಾಫ್ಟ್ ಯುವಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿದೆ. -ಶಾಸಕ ಉಮಾನಾಥ್ ಕೋಟ್ಯಾನ್

ಮಂಗಳೂರು: ಎಸ್ಯಾಸಾಫ್ಟ್ ಅತ್ಯಾಧುನಿಕ ಕಲಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಕೇಂದ್ರ ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಲಿದ್ದು ಇದು ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದು ಮೂಡಬಿದರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಹೇಳಿದರು ಬಜ್ಪೆಯ ಎಸ್ಯಾಸಾಫ್ಟ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತೀ ಹಳ್ಳಿಯೂ ಬೆಳೆದಾಗ ದೇಶ ಬೆಳೆಯುತ್ತದೆ. ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ನೀಡುವುದರಿಂದ ನಿರುದ್ಯೋಗ ನಿವಾರಣೆಯ ಜೊತೆಗೆ ಅವರ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ. ಇಂಜಿನಿಯರಿನ್, ಸಿ ಎ, ಮೆಡಿಕಲ್ ಕ್ಷೇತ್ರದತ್ತ…

Read More

ಕಾಸರಗೋಡಿನಲ್ಲಿ ಧರ್ಮಸ್ಥಳ ಕ್ಷೇತ್ರ ಭಕ್ತವೃಂದದ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಸಂಪನ್ನ.

ಕಾಸರಗೋಡು : ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವಿಧ್ವಂಸಕ ಚಟುವಟಿಕೆಗಳ ವಿರುದ್ಧವಾಗಿ ಧರ್ಮಸ್ಥಳ ಕ್ಷೇತ್ರ ಭಕ್ತವೃಂದ, ಕಾಸರಗೋಡು ಇವರ ನೇತೃತ್ವದಲ್ಲಿ ನಿನ್ನೆ ಸಂಜೆ 7 : OO ಗಂಟೆಗೆ ಭವ್ಯವಾದ ಪಂಜಿನ ಮೆರವಣಿಗೆ ಕಾಸರಗೋಡು ಪಟ್ಟಣದಲ್ಲಿ ಜರಗಿತು . ಮೆರವಣಿಗೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿತು. ನೂರಾರು ಭಕ್ತರು, ಯುವಕರು ಹಾಗೂ ಸಾರ್ವಜನಿಕರು ದೀಪಗಳೊಂದಿಗೆ ಭಾಗವಹಿಸಿ ಸಮಗ್ರ ಏಕತೆ ಹಾಗೂ ಭಕ್ತಿ ಭಾವವನ್ನು ತೋರಿಸಿದರು. ನಗರದ ಬೀದಿಗಳಲ್ಲಿ ಮೆರವಣಿಗೆ…

Read More
error: Content is protected !!