ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು-ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರು
ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು ಮಾಡಲು ಹೊರಡ್ತಾ ಇದೆ ಎಂದ್ರೆ ನೀವೆಲ್ಲರೂ ನಂಬಲೇ ಬೇಕು. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ಖಾಯಿಲೆಗಳು ಹರಡದಂತೆ ಎಚ್ಚರ ವಹಿಸೋ ಆರೋಗ್ಯ ಇಲಾಖೆಯ ನಿರ್ದೇಶನಕ್ಕೆ ಇಲ್ಲಿ ಎಳ್ಳು ನೀರು ಬಿಡುವುದು ಸ್ಪಷ್ಟವಾಗಿ ನೋಡ ಬಹುದು . ಕಿವಿ ಕೆಪ್ಪು, ಕಣ್ಣು ಕುರುಡು, ಮೊಸಳೆಯ ಮನಸ್ಸು ಇದ್ದ ಅಧಿಕಾರಿಗಳು ಮಾತ್ರವೇ ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡಬಲ್ಲರು. ಓಟ್ ಬರುವಾಗ ಹೋದರೆ ಸಾಕು ಅಲ್ಲಿ ತನಕ ಗೋಡೆಗೆ ಕಾಲು…
