ಕುಂಬಳೆ :ಮಳಿoಗರೇ ನಾರಾಯಣ ಗುರು ಮಂದಿರದಲ್ಲಿ ಮೊರ ಶ್ರೀ ಐವರ್ ಭಗವತಿ ಕಣ್ಣೂರು ಯುವಜನ ಸಂಘ ಮಳಿoಗರೆ ಇವರ ವತಿಯಿಂದ 171ನೇ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಗರು ಮಂದಿರದ ಅಧ್ಯಕ್ಷ ರಾದ ಭಾಸ್ಕರ ಕುಂಬಳೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯನ್ ಬದಿಯಡ್ಕ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಭಾಗವಹಿಸಿದ್ದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ನಾಗೇಶ್ ಕುಂಬಳೆ ಹಾಗೂ ಮಾದವ ಕುಂಬಳೆ ಸಂಘದ ಸದಸ್ಯರು ಊರಿನ ಜನತೆ ಭಾಗವಹಿಸಿದರು. ಸುಧಾಕರ ಕುಂಬಳೆ ಸ್ವಾಗತಿಸಿ, ಕುಸುಮ ಕುಂಬುಳೆ ವಂದಿಸಿದರು.