ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನ

ಮಂಜೇಶ್ವರ : ಜಿಲ್ಲೆಯ ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನಿಸಿದ್ದಾನೆ.ಬದಿಯಡ್ಕ ಪೊಲೀಸರು ದಾಖಲಿಸಿದ ಕಳವು ಪ್ರಕರಣದ ಆರೋಪಿ ನೆಲ್ಲಿಕಟ್ಟೆ ಆಮೂಸ್ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ ಟಿ.ಎಂ. ಅಬ್ದುಲ್ ಸುಹೈಲ್ ಎಂಬಾತನ ವಿರುದ್ಧ ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೈಲು ಸುಪರಿಂಟೆಂಡೆಂಟ್ ನೀಡಿದ ದೂರಿನಂತೆ, ಶುಕ್ರವಾರ ಸೆಲ್‌ನಿಂದ ಹೊರಬಂದ ಆರೋಪಿ ಮರಳಿ ಜೈಲಿಗೆ ಪ್ರವೇಶಿಸುವ ಸಂದರ್ಭ ಅಡುಗೆ ಕೋಣೆಯ ಮೇಲ್ಭಾಗಕ್ಕೆ ಹತ್ತಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. 10 ಸಾವಿರ ರೂಪಾಯಿ ಕಳವು ಪ್ರಕರಣದಲ್ಲಿ…

Read More

ಟೈಮಿಂಗ್ ವಿಷಯದಲ್ಲಿ ಬಸ್ ನೌಕರರ ಮಧ್ಯೆ ಮಾರಾಮಾರಿ

ಮಂಜೇಶ್ವರ: ಟೈಮಿಂಗ್ ವಿಷಯದಲ್ಲಿ ಬಸ್ ನೌಕರರ ಮಧ್ಯೆ ಮಾರಾಮಾರಿ ಟಿಕೆಟ್ ಉಪಕರಣ ಹಾಗೂ ಮೊಬೈಲ್ ಫೋನ್ ಕಿತ್ತೆಸೆದು ಬಿಸಾಡಿ ಹಾನಿಗೊಳಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಕುಂಬಳೆ ಬದಿಯಡ್ಕ ರಸ್ತೆಯಲ್ಲಿ ಬಸ್ ಶೆಲ್ಟರ್ ನಲ್ಲಿ ಈ ಘಟನೆ ನಡೆದಿದೆ.ಕಾಸರಗೋಡು ಭಾಗದಿಂದ ಮಂಗಳೂರು ಕಡೆ ಸಂಚರಿಸುತಿದ್ದ ಬಸ್ಸು ಹಾಗೂ ಅದೇ ಭಾಗಕ್ಕೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸು ಕುಂಬಳೆಗೆ ತಲುಪಿದಾಗ ಸಾರಿಗೆ ಬಸ್ಸು ಚಾಲಕ ಖಾಸಗಿ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ್ದಾನೆ. ಈ ಮಧ್ಯೆ ಟೈಮಿಂಗ್ ವಿಷಯಲ್ಲಿ ಎರಡೂ ಬಸ್ಸು ಸಿಬ್ಬಂದಿಗಳ ಮಧ್ಯೆ…

Read More

50 ಲಕ್ಷ ಆವಿಷವೊಡ್ಡಿ ಕೇಸ್ ಕ್ಲೋಸ್ ಮಾಡುವಂತೆ ಕೋರಿದ್ದ ಜಗನ್ನಿವಾಸ್ ರಾವ್: ಕಾಂಗ್ರೆಸ್ ವಕ್ತಾರೆ ಪ್ರತಿಭಾ ಕುಳಾಯಿ

ಮಂಗಳೂರು: ಪೂಜಾ ಆಚಾರ್ಯಳಿಗೆ ಹುಟ್ಟಿದ ಮಗು ನನ್ನದು ಅಲ್ಲವೇ ಅಲ್ಲ ಎಂದು ಕೃಷ್ಣ ಜೆ.ರಾವ್ ಹೇಳುತ್ತಾನೆ. ಆದರೆ ಡಿ ಎನ್ ಎ ರಿಪೋರ್ಟ್ ನಲ್ಲಿ ಅವನದ್ದೇ ಮಗು ಎಂಬುದಾಗಿ ಸಾಬೀತಾಗಿದೆ . ಆರೋಪಿ ಕೃಷ್ಣನಲ್ಲಿ ವಿವಾಹವಾಗುವಂತೆ ಹಲವು ಬಾರಿ ಕೇಳಿಕೊಂಡರು ಆತ ಅದಕ್ಕೆ ಸಮ್ಮತಿಸುತ್ತಿಲ್ಲ. ಪೂಜಾ ಆಚಾರ್ಯ ಏಳೂವರೆ ತಿಂಗಳ ಗರ್ಭಿಣಿಯಾಗಿರುವಾಗಲೇ ಜಗನ್ನಿವಾಸ್ ರಾವ್ ೮ ಲಕ್ಷದ ಹಣದ ಆವಿಷವನ್ನು ಒಡ್ಡಿ ಮಗುವನ್ನು ಹೊಟ್ಟೆಯಿಂದ ತೆಗೆಸುವಂತೆ ಒತ್ತಾಯಿಸಿದ್ದ ಅದು ಸಾಧ್ಯವಾಗಲಿಲ್ಲ . ನಂತರ ಹುಟ್ಟಿದ ಮಗುವನ್ನು ಸಾಂತ್ವನ…

Read More

ಶೀಘ್ರವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ :- ಶಾಸಕ ಕಾಮತ್

ಮನಪಾ ವ್ಯಾಪ್ತಿಯಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಒಂದು ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ರವರು ಸೂಚನೆ ನೀಡಿದರು. ಪಾಲಿಕೆಯ ವಾರ್ಡ್ ಸಂಖ್ಯೆ 25, 26, 27, 41 ಹಾಗೂ 53 ರಲ್ಲಿ ಕುಡಿಯುವ ನೀರಿನ ಅಭಾವವುಂಟಾಗಿದ್ದು ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಕುಡಿಯುವ ನೀರಿನ ಸಮಸ್ಯೆ ಎದುರಾದ ತಕ್ಷಣ ಜನರ ಸಮಸ್ಯೆಗೆ ತುರ್ತಾಗಿ…

Read More

ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದಲ್ಲಿ ದೀಪೋತ್ಸವ, ರಥೋತ್ಸವ ಹಾಗೂ ದೈವದ ಕೋಲ

ಮಂಜೇಶ್ವರ: ತಾರೀಕು 22 /01 /2026 ಗುರುವಾರದಂದು ಬ್ರಹ್ಮಶ್ರೀ ಬಡಾಜೆ ಗೋಪಾಲ ಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ಶ್ರೀ ಶನೈಶ್ಚರ ದೇವರ ವರ್ಷಾವಧಿ ಬಲಿ ಉತ್ಸವ .ಕಲ್ಲುರ್ಟಿ ದೈವ ಮತ್ತು ರಾಜ ಗುಳಿಗ ಕೋಲ ವು ವಿಜೃಂಭಣೆಯಿಂದ ಜರುಗಲಿರುವುದು. ಅಂದು ಸಾಯಂಕಾಲ ಬೆಂಗಳೂರಿನ ಸೇವಾಕರ್ತರಾದ ಶ್ರೀ ಎನ್. ಕೆ ರಾಜ ಶಂಕರ್ ರವರಿಂದ ಶ್ರೀ ದೇವರಿಗೆ ಸಹಸ್ರ ದೀಪೋತ್ಸವ ನಡೆಯಲಿರುವುದು . ಶ್ರೀ ಆದಿಶಕ್ತಿ ಕುಣಿತಾ ಭಜನಾ ತಂಡ ಶನೈಶ್ಚರ ಮಂಜೇಶ್ವರ ತಂಡದಿಂದ ಕುಣಿತ ಭಜನೆಯು ನಡೆಯಲಿದೆ….

Read More

ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು 14 ವಾರ್ಡ್ ಇದ್ದು, IIರಲ್ಲಿ ಯುಡಿಎಫ್‌, 3ರಲ್ಲಿ ಬಿಜೆಪಿ, 2ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.

Read More

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಗೆ ,ಜಿಲ್ಲಾ ಕಲೋತ್ಸವದಲ್ಲಿ ಭರ್ಜರಿ ಯಶಸ್ಸು

ಕಾಸರಗೋಡಿನ ಮೊಗ್ರಾಲಿನ ಜಿ.ವಿ.ಎಚ್.ಎಸ್.ಎಸ್‌ನಲ್ಲಿ ನಡೆದ ಕಾಸರಗೋಡು ಜಿಲ್ಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತ ವಿದ್ಯಾರ್ಥಿಗಳ ವಿವರ: ಕುಮಾರಿ ಶ್ರಾವ್ಯ ಬಿ.: ಕೊಲಾಜ್ (Collage) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕುಮಾರಿ ಅನುಶ್ರೀ ಬಿ.: ಕನ್ನಡ ಕಥಾ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಪವನ್ ರಾಮ್ ಎನ್.: ಕನ್ನಡ…

Read More

ಕುಡ್ಲದ ಪೋರನಿಗೆ “ಐಕಾನ್ ಆಫ್ ಇಂಡಿಯಾ 2025” ಪಟ್ಟ … !

ಮಂಗಳೂರು : ಶಿವಮೊಗ್ಗದ ಶಿರಳಕೊಪ್ಪದಲ್ಲಿ ಎಸ್.ಜಿ.ಪ್ಯಾಷನ್ ದಿವಾ ಸ್ಮಾರ್ ಸಂಸ್ಥೆ ಆಯೋಜಿಸಿದ್ದ ಪ್ಯಾಶನ್ ಶೋ ಐಕಾನ್ ಆಫ್ ಇಂಡಿಯಾ 2025 ರಲ್ಲಿ ಪೊಲೀಸ್ ಲೈನ್ ಪಾಂಡೇಶ್ವರ ಮಂಗಳೂರಿನ ಶೌರ್ಯಾ ಎಂ ಚಂದ್ರ sub junior kid ವಿಭಾಗದಲ್ಲಿ ಐಕಾನ್ ಆಫ್ ಇಂಡಿಯಾ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾನೆ . ಈತ ಮಂಗಳೂರು ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ನ ಯು.ಕೆ.ಜಿ ವಿದ್ಯಾರ್ಥಿ ಹಾಗೂ Pathway modling ballabhag ನಲ್ಲಿ ವಿದ್ಯಾರ್ಥಿ ಆಗಿದ್ದಾರೆ. ಇವರು ಮುಖೇಶ್ ಚಂದ್ರ ಹಾಗೂ ಅಖಿಲ.ಕೆ…

Read More

ಜ. 4ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ‘ಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮ .. !

ಮಂಗಳೂರು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದ.ಕ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಮಂಗಳೂರು ಸಹಯೋಗದಲ್ಲಿ ‘ಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಅದ್ಧೂರಿ ಕಾರ್ಯಕ್ರಮವು ಜ. 4ರಂದು ಮಂಗಳೂರು ಕುದ್ಮಲ್ ರಂಗರಾವ್ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷರಾದ ಲ| ಅನಿಲ್‌ ದಾಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ…

Read More

“37 ವರ್ಷಗಳ ಆದರ್ಶ ಶಿಕ್ಷಕ ಸೇವೆ ಸಲ್ಲಿಸಿದ ಕಾಡುಮಠ ಶಾಲೆಯ ಕುಸುಮ ಎನ್. ಅವರಿಗೆ ಬೀಳ್ಕೊಡುಗೆ”

ಬಂಟ್ವಾಳ: ಬಂಟ್ವಾಳ ತಾಲೂಕಿನ ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಡುಮಠ,ಕೊಳ್ನಾಡು ಇಲ್ಲಿನ ಶಿಕ್ಷಕಿಗೆ ಬಿಳ್ಕೋಡುಗೆ ಸಮಾರಂಭವು ದಿನಾಂಕ 31/12/2025 ರಂದು ಶಾಲೆಯಲ್ಲಿ ನಡೆಯಿತು. “ಶಿಕ್ಷಣಕ್ಕೆ ಬದುಕನ್ನೇ ಅರ್ಪಿಸಿದ ಆದರ್ಶ ಶಿಕ್ಷಕಿ” – ಆಶಾ ನಾಯಕ್ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರದ ದೈಹಿಕ ಶಿಕ್ಷಣಾಧಿಕಾರಿಯೂ,ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಒಬ್ಬ ಉತ್ತಮ ಶಿಕ್ಷಕಿ ನಿವೃತ್ತಿಯಾಗುತ್ತಿರುವುದು ಹೆಮ್ಮೆಯ ಜೊತೆಗೆ ನೋವಿನ ಕ್ಷಣವೂ ಹೌದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ ಕುಸುಮ ಎನ್….

Read More
error: Content is protected !!