ಅಶ್ರಫ್ ಪರ ಭಾರೀ ಬೆಂಬಲ: ಯುಡಿಎಫ್ ಸಮಾವೇಶದಲ್ಲಿ ಜನಸಾಗರ
ಮಂಜೇಶ್ವರ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರ ಗೆಲುವಿಗಾಗಿ ಆಯೋಜಿಸಲಾದ ‘ಯುಡಿಎಫ್ ಮಂಡಲ ಕನ್ವೆನ್ಷನ್’ ಮಂಗಳವಾರ ಭರ್ಜರಿಯಾಗಿ ನಡೆಯಿತು. ನಯಾಬಜಾರ್ನ ಫೆರೋ ಆಡಿಟೋರಿಯಂನಲ್ಲಿ ನಡೆದ ಈ ಬೃಹತ್ ಸಮಾವೇಶವು ಸಾವಿರಾರು ಕಾರ್ಯಕರ್ತರನ್ನು ಆಕರ್ಷಿಸಿ, ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಿಸಿದೆ. ಸಂಜೆ 3 ಗಂಟೆಗೆ ಆರಂಭವಾದ ಸಮಾವೇಶವನ್ನು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಂಜೇಶ್ವರವು ಸೌಹಾರ್ದತೆಯ ನೆಲೆಬೀಡು. ಎ.ಕೆ.ಎಂ. ಅಶ್ರಫ್ ಅವರ ಗೆಲುವು ಕ್ಷೇತ್ರದ…