ಬಿಸಿ ರೋಡ್ KSRTC ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಳ ಹತ್ಯೆ ಅತ್ಯಂತ ದುರದೃಷ್ಟಕರ : ಮಹಿಳೆಯರಿಗೆ ರಕ್ಷಣೆ ನೀಡಿ – ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ರಮಿತಾ ಸೂರ್ಯವಂಶಿ

ಹಾಡು ಹಗಲೇ ಕರಾವಳಿಯನ್ನು ಬೆಚ್ಚಿ ಬಿಳಿಸುವ ಘಟನೆ ಬಿಸಿ ರೋಡ್ KSRTC ಬಸ್ ನಿಲ್ದಾಣದಲ್ಲಿ ನಡೆದಿದ್ದು ಬಸ್ ಗೆ ಕಾಯುತ್ತಿದ್ದ ಲಾವಣ್ಯ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಮಾಡಿರುವಂತದ್ದು ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಇದು ಮಹಿಳೆಯರಲ್ಲಿ ಆತಂಕ ಮೂಡಿಸುವಂತೆ ಆಗಿದ್ದು ಈ ಹಿಂದೆಯೂ ಈ ರೀತಿಯ ಘಟನೆ ನಡೆದಿದ್ದು ಕಾನೂನು ವ್ಯವಸ್ಥೆ ಸಡಿಲ ಇರುವ ಕಾರಣ ಈ ರೀತಿಯ ಘಟನೆ ಪುನರವರ್ತನೆ ಆಗುತ್ತಿದೆ ಹಾಗಾಗಿ ಯಾವುದೇ ಧರ್ಮವಾಗಲಿ ಯಾವುದೇ ಜಾತಿಯಾಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಆ ಶಿಕ್ಷೆ ಇನ್ನು ಯಾರು ತಪ್ಪು ಮಾಡದಂತೆ ಮುನ್ನೆಚ್ಚರಿಕೆ ಕೊಡುವಂತೆ ಇರಬೇಕು.

ಕರ್ನಾಟಕದಲ್ಲೂ ಬುಲ್ಡೋಜರ್ ನಿಯಮವನ್ನು ಜಾರಿಗೊಳಿಸಿ ಹೆಣ್ಣಿಗೆ ಆಗುವ ದೌರ್ಜನ್ಯವನ್ನು ತಡೆಹಿಡಿ ಯಲು ಕಠಿಣ ಕಾನೂನು ವ್ಯವಸ್ಥೆಗಳನ್ನು ತನ್ನಿ, ಲಾವಣ್ಯನ ಎನ್ನುವ ಅಮಾಯಕಳ ಸಾವಿಗೆ ನ್ಯಾಯ ಕೊಡಿಸುವಂತದ್ದು ಆದಷ್ಟು ತೀರ್ವಗತಿಯಲ್ಲಿ ನಡೆಯಲಿ ಎಂದು ಅಗ್ರಹಿಸುತ್ತೆನೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!