ಉಪ್ಪಳ ಪಚ್ಲಂಪಾರೆಯ ಮೊಸರು ಕುಡಿಕೆ ಉತ್ಸವದ ಆಶ್ರಯದಲ್ಲಿ ನಡೆಯಲಿರುವ 40 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಉಮಾ ಭಗವತಿ ಭಜನಾ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಅಗೋಸ್ಟ್ 17 ರ ಆದಿತ್ಯವಾರ ಪಚ್ಲಂಪರೆ ಉಮಾ ಭಗವತಿ ಭಜನಾ ಮಂದಿರ ವಠಾರದಲ್ಲಿ ಮೊಸರುಕುಡಿಕೆ ಉತ್ಸವ ನಡೆಯಲಿದೆ. ಮಂದಿರದ ಅರ್ಚಕರಾದ ರಾಮಚಂದ್ರ ಐತಾಳ್ ನೇತೃತ್ವದಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಮಂದಿರದ ಪದಾಧಿಕಾರಿಗಳು, ಸ್ಥಳೀಯರು ಹಾಜರಿದ್ದರು.