ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಹಾಗೂ ಗುಳಿಗ ಸಾನಿಧ್ಯಗಳ ಆಡಳಿತ ಸಮಿತಿ ರೂಪೀಕರಣ

ವರ್ಕಾಡಿ ::ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಹಾಗೂ ಗುಳಿಗ ಸಾನಿಧ್ಯಗಳ ಆಡಳಿತ ಸಮಿತಿಯನ್ನು ದೈವಸ್ಥಾನದ ವಠಾರದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಸೀನ ಬೋಳದ ಪದವು ಇವರ ಘನ ಅಧ್ಯಕ್ಷತೆಯಲ್ಲಿ ರೂಪೀಕರಣ ಗೊಳಿಸಲಾಯಿತು. ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ರೈ ಅಡ್ಕ, ಉಪಾಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ರವಿ ಮುಡಿಮಾರು, ಕೋಶಾಧಿಕಾರಿಯಾಗಿ ಮನೋಜ್ ಶೆಟ್ಟಿ ಭಂಡಾರ ಮನೆ ವರ್ಕಾಡಿ, ಪ್ರಧಾನ ಸಂಚಾಲಕರಾಗಿ ನವೀನ್ ಶೆಟ್ಟಿ ಮಂಗಲ್ಪಾಡಿ, ಆಯ್ಕೆಯಾದರು. ಹಾಗೂ ಗೌರವ ಸಲಹೆಗಾರರು ಅಲ್ಲದೆ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರದ ಮುಂದಿನ ಅಭಿವೃದ್ಧಿಯ ಕೆಲಸಗಳಿಗೂ ಹಾಗೂ ತಾರೀಕು 05/೦4/ 26ರಂದು ನಡೆಯಲಿರುವ ನೇಮೋತ್ಸವವನ್ನು ಅದ್ದೂರಿಯಾಗಿ ಮಾಡುವ ಬಗ್ಗೆ ಚರ್ಚಿಸಲಾಯಿತು

ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ರೈ ಅಡ್ಕ ಆಯ್ಕೆಯಾದರು .

ಉಪಾಧ್ಯಕ್ಷರಾಗಿ ಆಯ್ಕೆಯಾದ ಐತ್ತಪ್ಪಶೆಟ್ಟಿ ದೇವಂದ ಪಡ್ಪು

ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ರವಿಮುಡಿಮಾರು

ಕೋಶಾಧಿಕಾರಿಯಾಗಿ ಆಯ್ಕೆಯಾದ ಮನೋಜ್ ಶೆಟ್ಟಿ ನೀರೊಳಿಕೆ

SHARE
Loading spinner

Leave a Reply

Your email address will not be published. Required fields are marked *

error: Content is protected !!