Avatar

NAMMA MEDIA 24X7

ಬಿಜೈ ವಾರ್ಡ್‌ನಲ್ಲಿ ರಾಜ್ಯ ಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ ರೂ.30 ಲಕ್ಷ: ಐವನ್ ಡಿ’ಸೋಜಾ ಸ್ಥಳ ಪರಿಶೀಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 31ನೇ ಬಿಜೈ ವಾರ್ಡ್‌ನ ಆನೆಗುಂಡಿ ಆಶ್ರಯ ರಸ್ತೆಯ ಬಳಿ ಹಾಗೂ ನಂದಗೋಕುಲ ಅಪಾರ್ಟ್‌ಮೆಂಟ್ ಸಮೀಪದ ರಾಜ್ಯ ಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗಾಗಿ ರೂ.30 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಅವರು ಇಂದು ಪಾಲಿಕೆಯ ಅಧಿಕಾರಿಗಳು ಹಾಗೂ ಪಕ್ಷದ ನಾಯಕರೊಂದಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಓವರ್‌ಟೇಕ್ ವೇಳೆ ಅಪಘಾತ: ಅಡ್ಯಾರು ನಿವಾಸಿ ಜಯರಾಮ ಮೃತ್ಯು

ಬಂಟ್ವಾಳ: ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ. ಅಡ್ಯಾರು ನಿವಾಸಿ ಜಯರಾಮ (65) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಬಡಗುಂಡಿ ಎಂಬಲ್ಲಿ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಸವಾರನಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ‌ಸ್ಕೂಟರ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟ ಬಗ್ಗೆ…

Read More

ಮಂಗಳೂರು ವಿಮಾನ ಪ್ರಯಾಣಿಕರಿಗೆ ಶಾಕ್: ಗಲ್ಫ್ ಸಂಪರ್ಕ ತಾತ್ಕಾಲಿಕ ಸ್ಥಗಿತ

ಮಂಗಳೂರು : ಇಸ್ರೇಲ್-ಇರಾನ್ ಸಂಘರ್ಷದ ಕಾರಣ ಮಾ. 4ರ ವರೆಗೆ ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಣ ವಿಮಾನ ಸಂಚಾರವನ್ನು ರದ್ದು ಮಾಡಲಾಗಿದೆ. ಮಾ. 3ರ ಮಂಗಳೂರು-ದೋಹಾ (ಐಎಕ್ಸ್ 821), ದೋಹಾ-ಮಂಗಳೂರು (ಐಎಕ್ಸ್ 822), ಮಂಗಳೂರು-ದುಬೈ (ಐಎಕ್ಸ್813), ಮಾ.4ರ ದುಬೈ-ಮಂಗಳೂರು(ಐಎಕ್ಸ್ 814), ಮಾ.3ರ ಮಂಗಳೂರು-ಕುವೈಟ್ (ಐಎಕ್ಸ್ 851), ಮಾ.4ರ ಕುವೈಟ್-ಮಂಗಳೂರು (ಐಎಕ್ಸ್ 852), ಮಾ.3ರ ಮಂಗಳೂರು-ದಮ್ಮಾಮ್ (ಐಎಕ್ಸ್ 847), ಮಾ.4ರ ದಮ್ಮಾಮ್-ಮಂಗಳೂರು (ಐಎಕ್ಸ್ 848), ಮಾ.3ರ ಮಂಗಳೂರು-ಅಬುಧಾಬಿ, ಮಾ.4ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ…

Read More

ಹೋಳಿ ಹಬ್ಬದ ವೇಳೆ ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ ಕಟುಕ ಕುಡುಕರ ತಂಡ

ಹರಿಯಾಣ : ದೇಶಾದ್ಯಂತ ಜನರು ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವಾಗ ಹರಿಯಾಣದಲ್ಲಿ ಮದ್ಯದ ಅಮಲಿನಲ್ಲಿದ್ದ ಕೆಲವು ಯುವಕರ ತಂಡವೊಂದು ಮೃಗೀಯ ರೀತಿಯಲ್ಲಿ ವರ್ತಿಸಿದ ಘಟನೆ ನಡೆದಿದೆ, ಗೋಮಾತೆಯ ಬಾಯಿಯನ್ನು ಬಲವಂತವಾಗಿ ತೆರೆದು ಬಲವಂತವಾಗಿ ಮದ್ಯವನ್ನು ಸುರಿಯುತ್ತಿರುವುದು ಕಂಡುಬಂದಿದೆ. ಮದ್ಯದ ನಶೆಯಿಂದ ಹಸು ತತ್ತರಿಸುತ್ತಿದ್ದರೂ ಬಿಡದ ಕಿಡಿಗೇಡಿಗಳು, ಬಳಿಕ ಆ ಹಸುವನ್ನು ಎತ್ತಿನ ಬಂಡಿಗೆ ಕಟ್ಟಿ ಬಲವಂತವಾಗಿ ಓಡಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ ಗೋವಿಗೆ ಮದ್ಯ ಕುಡಿಸಿದ ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಆ ಹಸುವಿಗೆ ಗಾಡಿಯನ್ನು ಎಳೆಯುವಂತೆ…

Read More

ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವಕ್ಕೆ ಭವ್ಯ ಚಾಲನೆ

ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಬಲ್ಲಂಗುಡೇಲು ಶ್ರೀ ಪಾಡಾoಗರೆ ಭಗವತೀ ಕ್ಷೇತ್ರ ಪಟ್ಟತ್ತೂರುವಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಳಿಯಾಟ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಾರ್ಚ್ 1ರಿಂದ ಪ್ರಾರಂಭವಾಗುವ ಕಳಿಯಾಟ ಉತ್ಸವವು ಮಾರ್ಚ್ 08ರ ವರೆಗೆ ನಡೆಯಲಿದೆ . ತರುವಾಯ ನಿನ್ನೆ ಬೆಳಗ್ಗೆ 5:30ಕ್ಕೆ ಕೆಂಡಸೇವೆ , ಬಲಿ ಮೂರ್ತಿದರ್ಶನ, 9:00ಕ್ಕೆ ಧ್ವಜಾರೋಹಣ ಮದ್ಯಾಹ್ನ 12:00ರಿಂದ ಕ್ಷೇತ್ರದ ವತಿಯಿಂದ ಅನ್ನದಾನ ಸೇವೆ ನಡೆಯಿತು,ಮಧ್ಯಾಹ್ನ 2:00ಗೆ “ಚೀರುoಭ ಭಗವತಿ ” ಭಜನಾ ತಂಡ ಉಳ್ಳಾಲ ಇವರಿಂದ ಭಜನೆ…

Read More

ಬ್ರಹ್ಮರಕೋಟ್ಲು ಟೋಲ್ ಗೇಟ್ ಮುಚ್ಚಲು ಬಂಟ್ವಾಳದಲ್ಲಿ ಭಾರೀ ಧರಣಿ

ಬಂಟ್ವಾಳ: ಕಳೆದ 23 ವರ್ಷಗಳಿಂದ ಟೋಲ್ ಸಂಗ್ರಹಿಸುತ್ತಿರುವ ,ಅಂತರದ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ,ಮಾಜಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿ ನಡೆಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ನಿಯಮಬಾಹಿರವಾದ ,ಕಾನೂನು ಬಾಹಿರವಾದ ಸುಲಿಗೆಯ ಕೇಂದ್ರವಾಗಿರುವ ಬ್ರಹ್ಮರಕೋಟ್ಲು ಟೋಲ್ ತೆರವು ಹೋರಾಟಕ್ಕೆ ಎಲ್ಲರ ಸಹಮತವಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.ಟೋಲ್ ತೆರವು ಮಾಡಿ ಎಂಬುದು ನಮ್ಮ ಪೂರ್ಣಪ್ರಮಾಣದ ನ್ಯಾಯಯುತವಾದ ಬೇಡಿಕೆಯಾಗಿದೆ….

Read More

ಮಂಜೇಶ್ವರದಲ್ಲಿ ಕೆಂಪುಕಲ್ಲು–ಮರ ಕಳ್ಳಸಾಗಣೆ ಮುಂದುವರಿಕೆ: ಕೇಶವನಾಯಕ್ ಚುನಾವಣೆಗೆ

ಕುಂಬಳೆ : ನಿರಂತರವಾಗಿ ವಿನಂತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಮಂಜೇಶ್ವರ ಕ್ಷೇತ್ರದ ವಿವಿಧ ಭಾಗಗಳಿಂದ ಕೆಂಪುಕಲ್ಲು ಹಾಗೂ ಮರದ ಕಳ್ಳಸಾಗಣೆ ತಡೆಯಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಹೋರಾಟದ ಭಾಗವಾಗಿ, ಕುಂಬಳೆ ಆರ್‌ಟಿಐ ಕಾರ್ಯಕರ್ತ ಕೇಶವನಾಯಕ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವರು ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ನೈಸರ್ಗಿಕ ಶೋಷಣೆಗಳ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅನಂತಪುರಂ, ಬಾಯಾರ್ ಹಾಗೂ ಪಾದಕಲ್ಲುವಿನ ವಿವಿಧ ಸ್ಥಳಗಳಿಂದ ಕೆಂಪುಕಲ್ಲು ಹಾಗೂ ಮರಗಳನ್ನು ಕರ್ನಾಟಕ ಹಾಗೂ ತಮಿಳುನಾಡಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅವರು…

Read More

ಮಾರ್ಚ್ 6 ಕ್ಕೆ ನಿಟ್ಟೆ ಉಷಾ ನರ್ಸಿಂಗ್ ಸೈನ್ಸಸ್ ಸಂಸ್ಥೆಯಿಂದ “ಸಮನ್ವಯ 2026” ಸಂಭ್ರಮ …. !

ಮಂಗಳೂರು:ನಿಟ್ಟೆ ಉಷಾ ನರ್ಸಿಂಗ್ ಸೈನ್ಸಸ್ ಸಂಸ್ಥೆಯು ತನ್ನ 33ನೇ ವಾರ್ಷಿಕೋತ್ಸವವನ್ನು ಮಾರ್ಚ್ 6 ಕ್ಕೆ ಕೆಎಸ್‌ ಹೆಗ್ಡೆ ಮೆಡಿಕಲ್ ಅಕಾಡೆಮಿ ಅಡಿಟೋರಿಯಂನಲ್ಲಿ “ಸಮನ್ವಯ 2026” ಎಂಬ ಶೀರ್ಷಿಕೆಯಲ್ಲಿ ಆಚರಿಸುತ್ತಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಫಾತಿಮಾ ಡಿಸಿಲ್ವಾ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನವದೆಹಲಿ ಟೈನ್‌ ನರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿಯಾದ ಎವ್ಲಿನ್ ಪಿ. ಕಣ್ಣನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಡೀಮ್ಸ್ ಟು…

Read More

ಪಶ್ಚಿಮ ಕರಾವಳಿಯಲ್ಲಿಯೇ ಪ್ರಪ್ರಥಮ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ 2026 ಮಂಗಳೂರಿನಲ್ಲಿ

ಮಂಗಳೂರು:ಪಶ್ಚಿಮ ಕರಾವಳಿಯಲ್ಲಿಯೇ ಪ್ರಪ್ರಥಮ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ 2026 ಸ್ಪರ್ಧೆಯು ಮಾರ್ಚ್ 6 ರಿಂದ 8 ರ ತನಕ ತಣ್ಣೀರಭಾವಿಯ ಬ್ಲೂ ಬೇ ಬೀಚ್ನಲ್ಲಿ ನಡೆಯಲಿದ್ದು ಇದರಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 25 ತಂಡಗಳು ಭಾಗವಹಿಸಲಿದೆ ಎಂದು ಕರ್ನಾಟಕ ಅಲ್ಟಿಮೇಟ್ ಆಟಗಾರರ ಸಂಘದ ಅಧ್ಯಕ್ಷರಾದ ಅಭಿಜಿತ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಪದ್ಯಕೂಟಕ್ಕೆ ಶ್ರೇಷ್ಠ ತಂಡಗಳು ಓಪನ್ ಮತ್ತು ಮಹಿಳಾ ವಿಭಾಗಗಳಲ್ಲಿ ಭಾಗವಹಿಸಲಿವೆ.ಒಂದು ತಂಡದಲ್ಲಿ 2೦ ಮಂದಿ…

Read More

ಮಾತೃತ್ವದ ಹಾದಿಯಲ್ಲಿ ವಿದ್ಯಾರ್ಥಿಗಳ ಹೆಜ್ಜೆ: ಕುಂಜತ್ತೂರು-ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆ ವತಿಯಿಂದ ರಂಜಾನ್ ಕಿಟ್ ವಿತರಣೆ

ಮಂಜೇಶ್ವರ : ಪವಿತ್ರ ರಂಜಾನ್ ತಿಂಗಳು ಕೇವಲ ಉಪವಾಸಕ್ಕಷ್ಟೇ ಸೀಮಿತವಲ್ಲ, ಅದು ದಾನ-ಧರ್ಮ ಹಾಗೂ ಪರಸ್ಪರ ಸಹಕಾರದ ಸಂಕೇತವೂ ಹೌದು ಎಂಬುದನ್ನು ಕುಂಜತ್ತೂರು ಹಾಗು ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಪವಿತ್ರ ಮಾಸದ ಹಿನ್ನೆಲೆಯಲ್ಲಿ ಸಮಾಜದ ದುರ್ಬಲ ವರ್ಗದವರ ಕಣ್ಣೀರು ಒರೆಸುವ ಮಹತ್ತರ ಉದ್ದೇಶದೊಂದಿಗೆ, ಶಾಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹಸಿದವರಿಗೆ ಅನ್ನ, ಬಟ್ಟೆ ಹಾಗೂ ಧಾರ್ಮಿಕ ಮಾರ್ಗದರ್ಶನದ ಹರಿಕಾರರಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳು ಶ್ರಮವಹಿಸಿ ಸಂಗ್ರಹಿಸಿದ ಹಾಗು ಸಿದ್ಧಪಡಿಸಲಾದ ದಿನಬಳಕೆಯ ಅಗತ್ಯ ದಿನಸಿ ಪದಾರ್ಥಗಳನ್ನೊಳಗೊಂಡ…

Read More
error: Content is protected !!