Avatar

NAMMA MEDIA 24X7

ಆನೆಕಲ್ಲು ಶಾಲೆಯಲ್ಲಿ ವೈವಿಧ್ಯ ಬೇಸಿಗೆ ಶಿಬಿರ ಸಂಪನ್ನ

ಆನೆಕಲ್ಲು: ಎಸ್. ಎಸ್. ಕೆ ಕಾಸರಗೋಡು ಹಾಗೂ ಬಿ. ಆರ್. ಸಿ ಮಂಜೇಶ್ವರ ಆಶ್ರಯದಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರವು ಆನೆಕಲ್ಲು ಶಾಲೆಯಲ್ಲಿ ಜರಗಿತು. ಶಿಬಿರದಲ್ಲಿ ಮೂರು ದಿನಗಳಳ್ಳಾಗಿ ಪೇಪರ್ ಕ್ರಾಪ್ಟ್, ಥಿಯೇಟರ್ ಗೇಮ್, ವಿವಿಧ ಆಟಗಳು,ಸಿನಿಮಾ,ಅಭಿನಯ ಮುಂತಾದ ವಿಚಾರಗಳಲ್ಲಿ ಸರೋಜ ಟೀಚರ್,ರಾಜೇಶ್ವರಿ ಟೀಚರ್, ರಶ್ಮಿ ಟೀಚರ್,ಮೊಯ್ದಿನ್ ಮಾಸ್ಟರ್,ಸದಾಶಿವ ಮಾಸ್ಟರ್, ಪ್ರಕಾಶ್ ಮಾಸ್ಟರ್,ರಾಜು ಮಾಸ್ಟರ್,ಚಂದ್ರಿಕಾ ಟೀಚರ್,ಶ್ಯಾಮಲ ಟೀಚರ್ ವಿವಿಧ ಚಟುವಟಿಕೆಗಳನ್ನು ಮಾಡಿದರು. ಸಮಾರೋಪ ಸಮಾರಂಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ…

Read More

ಕೇರಳ ಇತಿಹಾಸದಲ್ಲಿ ಬಿಜೆಪಿ ಮೈಲಿಗಲ್ಲು: ಮೊದಲ ಬಾರಿಗೆ 3 ಸ್ಥಾನಗಳ ಗೆಲುವು

ತಿರುವನಂತಪುರಂ, ಮೇ 4: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಇತಿಹಾಸ ನಿರ್ಮಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ 3 ಸ್ಥಾನಗಳನ್ನು ಗೆಲ್ಲುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಚತಾನ್ನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಬಿ. ಗೋಪಕುಮಾರ್ ಸುಮಾರು 4,000 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.ಇದೇ ವೇಳೆ ನೇಮಮ್ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸುಮಾರು 3,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳಕುಟಮ್ ಬಿಜೆಪಿ ಅಭ್ಯರ್ಥಿ ಮುರಳೀಧರನ್ 300 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದರಿಂದ…

Read More

ಕಾಸರಗೋಡಿನಲ್ಲಿ ಯುಡಿಎಫ್ ಅಲೆ: ಮಂಜೇಶ್ವರ–ಕಾಸರಗೋಡಿನಲ್ಲಿ ಭರ್ಜರಿ ಗೆಲುವು, ಎಲ್‌ಡಿಎಫ್ ಕುಸಿತ

​ಮಂಜೇಶ್ವರ/ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಿರೀಕ್ಷಿತ ಆಡಳಿತ ವಿರೋಧಿ ಅಲೆ ಅಪ್ಪಳಿಸಿದ್ದು, ಆಡಳಿತಾರೂಢ ಎಲ್‌ಡಿಎಫ್ ಹೀನಾಯ ಸೋಲು ಕಂಡಿದೆ. ಕಾಸರಗೋಡು ಜಿಲ್ಲೆಯಲ್ಲೂ ಈ ಅಲೆ ಸ್ಪಷ್ಟವಾಗಿ ಪ್ರತಿಫಲಿಸಿದ್ದು, ಎಡರಂಗದ ಭದ್ರಕೋಟೆಗಳಾದ ತ್ರಿಕರಿಪುರ ಮತ್ತು ಉದುಮಾದಲ್ಲೂ ಯುಡಿಎಫ್ ಬಿರುಕು ಮೂಡಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದೆ.​​ದೇಶವೇ ಕುತೂಹಲದಿಂದ ಗಮನಿಸುತ್ತಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕಣವಾಗಿದ್ದ ಇಲ್ಲಿ, ಯುಡಿಎಫ್ ಅಭ್ಯರ್ಥಿ 26,093 ಮತಗಳ…

Read More

ಕೇರಳದಲ್ಲಿ ಯುಡಿಎಫ್ ಭರ್ಜರಿ ಗೆಲುವು ಸಾಧಿಸಲಿದೆ: ರಾಜ್‌ಮೋಹನ್ ಉಣ್ಣಿತ್ತಾನ್ ಭವಿಷ್ಯವಾಣಿ

ಮಂಜೇಶ್ವರ: ಕೇರಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ (LDF) ಸರ್ಕಾರ ಧೂಳಿಪಟವಾಗಲಿದ್ದು, ಯುಡಿಎಫ್ (UDF) 111ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಅಧಿಕಾರಕ್ಕೆ ಬರಲಿದೆ ಎಂದು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಭವಿಷ್ಯ ನುಡಿದಿದ್ದಾರೆ. ​ಕೇರಳದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಹೇಳಿಕೆಯು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎಷ್ಟರಮಟ್ಟಿಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ​1977ರ ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಉಂಟಾದ ರಾಜಕೀಯ ಧ್ರುವೀಕರಣವನ್ನು ನೆನಪಿಸಿರುವ ಉಣ್ಣಿತ್ತಾನ್, ಅಂದು…

Read More

ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಚಾಲನೆ: ಶ್ರಮದಾನದಲ್ಲಿ 3000 ಕೆಜಿ ತ್ಯಾಜ್ಯ ತೆರವು

ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಮೇ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ರೋಸಾರಿಯೋ ಚರ್ಚ್ ಮುಖ್ಯಸ್ಥರಾದ ಫಾ. ವಲೇರಿಯನ್ ಡಿ’ಸೋಜಾ ಹಾಗೂ ಎಂ.ಆರ್.ಪಿ.ಎಲ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಎಚ್.ವಿ. ಪ್ರಸಾದ್ ಅವರು ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಕೇಶವ ಪಟ್ಟಾಳಿ, ನಿವೃತ್ತ ಸೇನಾನಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ದನೇಶ್ ಕುಮಾರ್, ಕಮಲಾಕ್ಷ ಪೈ, ದಿಲ್‌ರಾಜ್ ಆಳ್ವ ಹಾಗೂ ಶ್ರೀ ರಂಜನ್ ಬೆಳ್ಳರ್ಪಾಡಿ ಉಪಸ್ಥಿತರಿದ್ದು, ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು….

Read More

ಸಂಘಟನಾ ಶಕ್ತಿ ಮತ್ತು ಪರಂಪರೆಯ ಆತಿಥ್ಯ: ಒಂದು ಅಂತಃಕರಣದ ಅವಲೋಕನ

ಸಂಘಟನೆಯೆನ್ನುವುದು ಬರೀ ವ್ಯಕ್ತಿಗಳ ಸಮೂಹವಲ್ಲ; ಅದೊಂದು ಉದಾತ್ತ ಭಾವನೆಗಳ ಸುಂದರ ಸಂಗಮ. ‘ಸಮಿತಿ’ ಎನ್ನುವುದು ಕೇವಲ ಕಾಗದದ ಮೇಲೆ ಗೀಚಿದ ಹೆಸರುಗಳ ಪಟ್ಟಿಯಲ್ಲ, ಅದು ಹತ್ತಾರು ಭಿನ್ನ ಮನಸ್ಸುಗಳು ಒಂದು ಸದಾಶಯದ ಗುರಿಯೆಡೆಗೆ ನಡೆಸುವ ಸಮಾನಾಂತರ ಪಯಣ. ಒಂದು ಸುಂದರ ಕಾರ್ಯಕ್ರಮವು ಸುಲಲಿತವಾಗಿ ಅರಳಬೇಕಾದರೆ, ಅಲ್ಲಿ ವೈಯಕ್ತಿಕ ಪ್ರತಿಷ್ಠೆಯ ಕಾರ್ಮೋಡಗಳಿಗಿಂತ ‘ಸಮಷ್ಠಿ ಪ್ರಜ್ಞೆ’ಯ ಬೆಳಕು ಪ್ರಖರವಾಗಬೇಕು.​ ಸಮನ್ವಯದ ಸೂತ್ರ ಮತ್ತು ಉಪಸಮಿತಿಗಳ ಪಾತ್ರ ​ಸಮಿತಿಯೊಳಗಿನ ಪರಸ್ಪರತೆ ಹಾಲಿನಲ್ಲಿ ಜೇನು ಬೆರೆತಂತೆ ಇರಬೇಕು; ಎಲ್ಲಿಯೂ ವ್ಯತ್ಯಾಸ ಕಾಣದಂತೆ ಸವಿಯಷ್ಟೇ…

Read More

ಮತ ಸೌಹಾರ್ದದ ವಿಭಿನ್ನ ಮುಖ: ಜಲೀಲ್ ಕೊಡಿಯಮ್ಮಗೆ ಸನ್ಮಾನ

ಕೊಡಿಯಮ್ಮ: ಇಂದಿನ ಕಾಲದಲ್ಲಿ ಧರ್ಮವು ಮನುಷ್ಯರ ನಡುವೆ ಗಡಿಗಳನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲೇ, ಕೊಡಿಯಮ್ಮದ ಜಲೀಲ್ ಧರ್ಮಸೌಹಾರ್ದದ ಹೊಸ ಮಾದರಿಯಾಗಿದ್ದಾರೆ.ತಮ್ಮ ಹೆಸರಿನಲ್ಲಿದ್ದ 7 ಸೆಂಟ್ ಜಾಗವನ್ನು ತಮ್ಮ ಮನೆಯ ಬಳಿಯ ಬನಕ್ಕಾಗಿ ಉಚಿತವಾಗಿ ನೀಡಿದ ಜಲೀಲ್ ಅವರ ಮಾನವೀಯ ಕೃತ್ಯಕ್ಕೆ ಬನಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ದಾಸ್ ಕುಟುಂಬದ ನಿರ್ವಾಹಕರು ಸನ್ಮಾನ ಸಲ್ಲಿಸಿದರು. ಕಾವು ಸಮಿತಿ ಸದಸ್ಯರು ಜಲೀಲ್ ಅವರಿಗೆ ಉಡುಗೊರೆಯನ್ನೂ ನೀಡಿ ಗೌರವಿಸಿದರು. ಈ ವೇಳೆ, ಜಲೀಲ್ ಕೊಡಿಯಮ್ಮ ಜಮಾಅತ್ ಸಮಿತಿ ಸದಸ್ಯರಾಗಿಯೂ, ಯು.ಎಚ್ ಕ್ಲಬ್ ಅಧ್ಯಕ್ಷರಾಗಿಯೂ ಸೇವೆ…

Read More

ಹಾವುಗಳ ಭಯದ ಕನಸು; ಜನರ ರಕ್ಷಕ ಲೆಂಕಿನಡಕ್ಕದ ಉಬೈದ್ ಮುಸ್ಲಿಯಾರ್

ಪೈವಳಿಕ: ಹಾವುಗಳನ್ನು ಕಂಡರೆ ಹೆದರದವರು ಅಪರೂಪ. ಆದರೆ ಪೈವಳಿಕ ಪಂಚಾಯಿತಿಯ ಲೆಂಕಿನಡಕ್ಕದ ನಿವಾಸಿ ಉಬೈದ್ ಮುಸ್ಲಿಯಾರ್ ಅವರಿಗೆ ಹಾವುಗಳು ಭಯದ ಕನಸಲ್ಲ, ಬದಲಾಗಿ ಅವರೇ ಹಾವುಗಳಿಗೆ ಭಯದ ಕನಸು. ಪ್ರತಿ ದಿನ ಕನಿಷ್ಠ ಹತ್ತು ಕರೆಗಳು ಹಾವು ಹಿಡಿಯಲು ಅವರ ಬಳಿ ಬರುತ್ತವೆ. ಮನೆ ಒಳಗಾಗಲಿ, ಬಾವಿಯೊಳಗಾಗಲಿ ಹಾವು ಕಾಣಿಸಿಕೊಂಡರೆ, ಸ್ಥಳೀಯರಿಗೆ ಮೊದಲು ನೆನಪಾಗುವುದು ಉಬೈದ್ ಮುಸ್ಲಿಯಾರ್ ಅವರೇ. ಯಾವ ಸಮಯದಲ್ಲಾದರೂ ಕರೆ ಮಾಡಿದರೂ “ಇಲ್ಲ” ಎನ್ನುವುದು ಅವರ ಪದಕೋಶದಲ್ಲೇ ಇಲ್ಲ. ಕರೆ ಬಂದ ಕೆಲವೇ ನಿಮಿಷಗಳಲ್ಲಿ…

Read More

ಮಂಜೇಶ್ವರದಲ್ಲಿ ಯುಡಿಎಫ್ ಭರ್ಜರಿ ಮುನ್ನಡೆ: ಅಶ್ರಫ್ 10 ಸಾವಿರ ಮತಗಳ ಅಂತರದ ಜಿಗಿತ

ಮಂಜೇಶ್ವರ: ಹತ್ತು ಸಾವಿರದ ಗಡಿ ದಾಟಿದ ಯುಡಿಎಫ್ ಮುನ್ನಡೆ; ಎ.ಕೆ.ಎಂ. ಅಶ್ರಫ್ ನಾಗಾಲೋಟ!​ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಎದುರಾಳಿಗಳಿಗೆ ಭಾರೀ ಪೈಪೋಟಿ ನೀಡುತ್ತಿದ್ದಾರೆ. ಎ.ಕೆ.ಎಂ. ಅಶ್ರಫ್ ಯುಡಿಎಫ್ (UDF) 26,478 10,288ಕೆ. ಸುರೇಂದ್ರನ್ ಎನ್ ಡಿಎ (NDA) 16,190 —ಕೆ.ಆರ್. ಜಯಾನಂದ ಎಲ್ ಡಿಎಫ್ (LDF) 4,778 ದಶಸಹಸ್ರ ಜಿಗಿತ: ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ…

Read More

​ಕೇರಳ ಚುನಾವಣಾ ಫಲಿತಾಂಶ: ಎಡಕೋಟೆ ನಡುಗಿಸಿದ ಯುಡಿಎಫ್ ಸುನಾಮಿ: ಕಮಲ ಪಾಳಯದಲ್ಲಿ ಹೊಸ ಸಂಚಲನ

​ ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಇಡೀ ರಾಜ್ಯದಲ್ಲಿ ಯುಡಿಎಫ್ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಭದ್ರವಾಗಿದ್ದ ಎಡರಂಗದ ಕೋಟೆ ಈ ಬಾರಿ ಧರಾಶಾಯಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.​ ಬೆಳಿಗ್ಗೆ 10:20ರ ವೇಳೆಗೆ​ಯುಡಿಎಫ್: 91 ಸ್ಥಾನಗಳಲ್ಲಿ ಮುನ್ನಡೆ​ಎಲ್ ಡಿ ಎಫ್: 46 ಸ್ಥಾನಗಳಲ್ಲಿ ಮುನ್ನಡೆ​ಎನ್ ಡಿಎ: 02 ಸ್ಥಾನಗಳಲ್ಲಿ ಮುನ್ನಡೆ​ ​ ಕಣ್ಣೂರಿನ ಧರ್ಮಡಂ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಆರಂಭಿಕ ಹಿನ್ನಡೆ ಅನುಭವಿಸಿರುವುದು…

Read More
error: Content is protected !!