Avatar

NAMMA MEDIA 24X7

ಗದಗ ಜಿಲ್ಲೆಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಗೋವಿನಾಳ ಮಠ ಲಕ್ಷ್ಮೇಶ್ವರ ಇವರಿಗೆ ಕಾಸರಗೋಡು ಕನ್ನಡ ಭವನದಿಂದ ವಿಶೇಷ ಸನ್ಮಾನ -ಗೌರವಾರ್ಪಣೆ

ಕಾಸರಗೋಡು : ಕನ್ನಡ ಭವನದಿಂದ ಪ್ರಯೋಜಿತ ಕಾಸರಗೋಡು -ಕರ್ನಾಟಕ ಸಾಹಿತ್ಯ ಸಮ್ಮೇಳನ 2026.ಕಾರ್ಯಕ್ರಮ ಕ್ಕೆ ಸಾಹಿತ್ಯ ಆಶೀರ್ವಚನಕ್ಕೆ ವಿಶೇಷ ಆಹ್ವಾನಿತಾರಾಗಿ ಆಗಮಿಸಿದ ಶ್ರೀ ಶ್ರಿ ರಮೇಶ ಮಹಾಸ್ವಾಮಿಗಳು ಗೋವಿನಾಳ ಲಕ್ಷ್ಮೇಶ್ವರ ಇವರೀಗೆ ಗೌರವ ಆಥಿತ್ಯ ನೀಡಿ ಅನುಗ್ರಹ ಗಿಟ್ಟಿಸಿಕೊಂಡ ಕನ್ನಡ ಭವನ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್, ಎಡನೀರು ಶ್ರೀಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ನೇತೃತ್ವದಲ್ಲಿ ಫಲ ಪುಷ್ಪ ಉತ್ತರೀಯ, ಹಾರಾರ್ಪಣೆ, ಸ್ಮರಣಿಕೆ, ಹಾಗೂ ಗೌರವ ಫಲಕ ಗಳೊಂದಿಗೆ…

Read More

ಮಂಗಳೂರು ಸರಸ್ ಮೇಳಕ್ಕೆ ನೀರಸ ಸ್ಪಂದನೆ: ಮಹಿಳಾ ವ್ಯಾಪಾರಿಗಳಲ್ಲಿ ನಿರಾಸೆ

ಮಂಗಳೂರು: ರಾಷ್ಟ್ರ ಮಟ್ಟದ ಸರಸ್ ಮೇಳಕ್ಕೆ ಭಾರಿ ಸಂಖ್ಯೆಯಲ್ಲಿ ಜನರ ಪ್ರತಿಕ್ರಿಯೆ ನಿರೀಕ್ಷೆ ಮಾಡಿದ್ದ ಆಯೋಜಕರಿಗೆ ಕರಾವಳಿಯ ಮಂಗಳೂರಿನಲ್ಲಿ ನಿರಾಶೆಯ ಛಾಯೆ ಮೂಡಿದೆ. ಕಳೆದ 8 ದಿನಗಳಿಂದ ನಡೆಯುತ್ತಿರುವ ಸರಸ್ ಮೇಳಕ್ಕೆ ಮುಗಿ ಬೀಳಬೇಕಿದ್ದ ಜನರಿಂದ ನೀರಸ ಪ್ರತಿಕ್ರಿಯೆ ಉಂಟಾಗಿದೆ. ಇನ್ನು ಕೆಲ ಸ್ವಸಹಾಯ ಗುಂಪಿನ ಮಹಿಳಾ ವ್ಯಾಪಾರಿಗಳು ಕೈತುಂಬ ವ್ಯಾಪಾರ ಆಗದೇ ಕೈ ಸುಟ್ಟುಕೊಂಡಿದ್ದಾರೆ. ಕೆಲ ವ್ಯಾಪಾರಿಗಳು ಇಡೀ ದಿನ ವ್ಯಾಪಾರ ಮಾಡಿದರೂ ಆಹಾರ, ತಿಂಡಿ ತಿನಿಸುಗಳು ಮಾರಾಟ ಆಗದೇ ಇರುವುರಿಂದ ಬಿಸಾಡುವಂತಹ ಅಪರೂಪದ ಘಟನೆಗಳು…

Read More

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಅಭಾವ: ಕಾಂಗ್ರೆಸ್ ಆಡಳಿತದ ನಿರ್ಲಕ್ಷ್ಯಕ್ಕೆ ವೇದವ್ಯಾಸ ಕಾಮತ್ ಕಿಡಿ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಲಭ್ಯತೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ರೋಗಿಗಳನ್ನು ಪರದಾಡುವ ಸ್ಥಿತಿಗೆ ತಂದಿಟ್ಟ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತೊಮ್ಮೆ ಬಟಾಬಯಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಔಷಧಗಳ ಕೃತಕ ಕೊರತೆ ಸೃಷ್ಟಿಸಿ ಬಡ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಡ ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ನಮ್ಮ ಜಿಲ್ಲೆಯಲ್ಲಿಯೂ ಅನೇಕರು ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದು ಸ್ಪಂದನೆ ನೀಡಬೇಕಾಗಿದ್ದ ಆರೋಗ್ಯ…

Read More

ಪುತ್ತೂರು ಮಹಿಳಾ ಕಾಲೇಜು ಪ್ರಾಂಶುಪಾಲರ ವರ್ಗಾವಣೆ: ಶಾಸಕರ ಸೇಡಿನ ಕ್ರಮ – ಸಂಜೀವ ಮಠಂದೂರು ಆರೋಪ

ಪುತ್ತೂರು: ಮಹಿಳಾ ಕಾಲೇಜಿನ ಪ್ರಾಂಶುಪಾಲರ ವರ್ಗಾವಣೆಯ ವಿಚಾರ ಮಾದ್ಯಮದಲ್ಲಿ ನೋಡಿದ್ದೇನೆ. ಇದೊಂದು ಶಾಸಕರ ಸೇಡಿನ ಕ್ರಮದಂತೆ ಕಾಣುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಮಾಧ್ಯಮದೊಂದಿಗೆ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡಲು ಹಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಅನುಮತಿ ಪಡೆದೇ ಪ್ರತಿಭಟನೆ ಮಾಡಬೇಕೆಂದು ಏನು ಇಲ್ಲ. ವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಪ್ರತಿಭಟನೆಯಿಂದ ಸಾರ್ವನಿಕರಿಗೆ ಅಡ್ಡಿಯಾಗುತ್ತಿದೆಯಾ? ಎಂಬುದು ಮಾತ್ರ ನೋಡಬೇಕಿದ್ದು. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಾರ್ವಜನಿಕರಿಗೆ, ವಾಹನಗಳಿಗೆ ಅಡ್ಡಿಯಾಗಿಲ್ಲ. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು 18 ವರ್ಷ ಪ್ರಾಯದ…

Read More

ಮಂಗಲ್ಪಾಡಿ ಪಂಚಾಯತಿನಲ್ಲಿ ಸೂರ್ಯನಿಗೂ ಸವಾಲೆಸೆಯುವ ಹಗಲು ದೀಪಗಳ ವೈಭವ : ಸಾರ್ವಜನಿಕರ ಹಣ ವಿದ್ಯುತ್ ರೂಪದಲ್ಲಿ ಪೋಲು: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ

​ಮಂಜೇಶ್ವರ: ಸೂರ್ಯನ ಬೆಳಕು ಸಾಲದೋ ಏನೋ ಎಂಬಂತೆ ಮಂಗಲ್ಪಾಡಿ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲೂ ಬೀದಿ ದೀಪಗಳನ್ನು ಉರಿಸಿ ‘ಹೊಸ ಇತಿಹಾಸ’ ಬರೆಯುತ್ತಿದೆ.ಪೆರಿಂಗಡಿ ರಸ್ತೆಯ ಜನಪ್ರಿಯ ಸರ್ವೀಸ್ ರಸ್ತೆ ಹಾಗೂ ಕುಬಣೂರು ಪುಳಿಕುತ್ತಿ ಸ್ಮಶಾನದ ಬಳಿಯ ಹೈಮಾಸ್ಟ್ ದೀಪಗಳು ಕಳೆದ ಒಂದು ತಿಂಗಳಿನಿಂದ ವಿರಾಮವಿಲ್ಲದೆ ರಾತ್ರಿ-ಹಗಲು ಸತತವಾಗಿ ಉರಿಯುತ್ತಿವೆ. ​ಬಹುಶಃ ಪಂಚಾಯತ್‌ಗೆ ಹಗಲು ಹೊತ್ತಿನ ಕತ್ತಲೆಯನ್ನು ಓಡಿಸುವ ಅತೀಂದ್ರಿಯ ಶಕ್ತಿ ಬಂದಿರಬೇಕು ಅಥವಾ ಕೆಎಸ್‌ಇಬಿ ಬಿಲ್ ಹೆಚ್ಚಾದಷ್ಟೂ ಪಂಚಾಯತ್ ಖಜಾನೆ ತುಂಬುತ್ತದೆ ಎಂಬ ನಂಬಿಕೆ ಇರಬಹುದು….

Read More

ಪುತ್ತೂರು ಮಹಿಳಾ ಕಾಲೇಜು: ಮೂಲಭೂತ ಸಮಸ್ಯೆ ಬಗೆಹರಿಸಲಾಗದ ಶಾಸಕ ಅಶೋಕ್ ರೈ ಅವರಿಂದ ಪ್ರಾಂಶುಪಾಲರ ಅಮಾನತಿನ ‘ಒಣ ಪ್ರತಿಷ್ಠೆ’ – ವಿಧಾನಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ

ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮೂಲಭೂತ ಸೌಕರ್ಯಗಳ ಕೊರತೆ ಮತ್ತು ವಿಪರೀತ ಧೂಳಿನ ಸಮಸ್ಯೆಯಿಂದ ಬೇಸತ್ತು ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ವೇದಶ್ರೀ ನಿಡ್ಯಾ ಅವರನ್ನು ಅಮಾನತು ಮಾಡಿಸಿರುವ ಪುತ್ತೂರು ಶಾಸಕ ಅಶೋಕ್ ರೈ ಅವರ ದ್ವೇಷದ ರಾಜಕಾರಣವನ್ನು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಉಗ್ರವಾಗಿ ಖಂಡಿಸಿದ್ದಾರೆ. ವಿದ್ಯಾರ್ಥಿನಿಯರ ಹಿತಾಸಕ್ತಿಗೆ ಸ್ಪಂದಿಸಿದ ಪ್ರಾಮಾಣಿಕ ಅಧಿಕಾರಿಯನ್ನು ಬಲಿಪಶು ಮಾಡುವ ಬದಲು, ನಿಯಮ…

Read More

ಮಂಗಲ್ಪಾಡಿ ಪಂಚಾಯತ್ 2026–27ರ ಗೋಲ್ಡನ್ ಬಜೆಟ್: ಮಿನಿ ಸಿವಿಲ್ ಸ್ಟೇಷನ್, ಉಪ್ಪಳದಲ್ಲಿ ಆಧುನಿಕ ಬಸ್‌ಸ್ಟ್ಯಾಂಡ್–ಶಾಪಿಂಗ್ ಕಾಂಪ್ಲೆಕ್ಸ್

ಉಪ್ಪಳ: ಮೂಲಸೌಕರ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಮಂಗಲ್ಪಾಡಿ ಗ್ರಾಮಪಂಚಾಯತ್ 2026–27ನೇ ಸಾಲಿನ ಜನಪ್ರಿಯ “ಗೋಲ್ಡನ್ ಬಜೆಟ್” ಅನ್ನು ಉಪಾಧ್ಯಕ್ಷೆ ಶಮೀನಾ ಟೀಚರ್ ಪ್ರಸ್ತುತಪಡಿಸಿದರು. ಗ್ರಾಮಪಂಚಾಯತ್ ಅಧೀನದಲ್ಲಿರುವ ಎಲ್ಲಾ ಘಟಕ ಸಂಸ್ಥೆಗಳನ್ನು ಒಳಗೊಂಡಂತೆ ಮಿನಿ ಸಿವಿಲ್ ಸ್ಟೇಷನ್ ಮಾದರಿಯಲ್ಲಿ ಆಧುನಿಕ ಕಚೇರಿ ಸಮುಚ್ಚಯವನ್ನು ನಿರ್ಮಿಸಲಾಗುತ್ತದೆ. ಉಪ್ಪಳ ಪಟ್ಟಣದಲ್ಲಿ ಬಿಒಟಿ (BOT) ಆಧಾರದ ಮೇಲೆ ಆಧುನಿಕ ಬಸ್‌ಸ್ಟ್ಯಾಂಡ್–ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಉಲ್ಲೇಖವಿದೆ. ಬೀಚ್ ಟೂರಿಸಂ ಉತ್ತೇಜಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತದೆ. ಕ್ಷೇತ್ರವಾರು ಅನುದಾನ ಒಟ್ಟು…

Read More

ಹೈದರಾಬಾದಲ್ಲಿ ಕುಳಿತು ಸೈಬರ್ ವಂಚನೆ ಮಾಡುತ್ತಿದ್ದ ಸೈಬರ್ ವಂಚಕರ ಬಂಧನ

ಹೈದರಾಬಾದಲ್ಲಿ ಕುಳಿತು ಸೈಬರ್ ವಂಚನೆ ಮಾಡುತ್ತಿದ್ದ ಸೈಬರ್ ವಂಚಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣಾ ಅ.ಕ್ರ. 09/2026, ಕಲಂ. 66(ಸಿ), 66(ಡಿ) ಐಟಿ ಕಾಯ್ದೆ & ಕಲಂ. 308(5), 318(4), 319(2),111 ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ-2023ರಂತೆ ಕೇಸ್ ದಾಖಲಾಗಿತ್ತು. ಬಂಧಿತರನ್ನು ಶೇಖ್ ಕರೀಮುಲ್ಲಾ @ ರಸೂಲ್, ಬುಡಿದಿನ್ನೆ ವಂಶಿ @ ಗುರು, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ, ಬಡೆ ಶ್ರೀನಿವಾಸ್, ಉತ್ಪಲ ಸಂತೋಷ್ ಕೃಷ್ಣ ಎಂದು ಗುರುತಿಸಲಾಗಿದೆ. ಈ…

Read More

ಇಚ್ಲಂಗೋಡು ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನದ ನೇಮೋತ್ಸವ:ಆಮಂತ್ರಣ ಪತ್ರಿಕೆ ಬಿಡುಗಡೆ

ಇಚ್ಲಂಗೋಡು:ಬಾಕುಡ ಸಮಾಜದ 18 ದೈವಸ್ಥಾನಗಳಲ್ಲಿ ಒಂದಾದ ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ ಇಚ್ಲಂಗೋಡು ಇಲ್ಲಿಯ ನೇಮೋತ್ಸವ ಮಾರ್ಚ್ ತಿಂಗಳ 19 ರಿಂದ 20 ರ ವರೆಗೆ ಬಹು ವಿಜೃಂಭಣೆಯಿಂದ ಜರಗಲಿದೆ. ಇದರ ಭಾಗವಾಗಿ ಸಮುದಾಯದ ಕಟ್ಟುಪಾಡುಗಳಂತೆ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಹಿರಿಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ದೇರಳಕಟ್ಟೆ ಯಲ್ಲಿ ಶೇಖರಣೆ ಗೊಂಡ ತ್ಯಾಜ್ಯ ನೀರು: ಪ್ರತಿಭಟನೆ

ತುಳು ನಾಡ ರಕ್ಷಣಾ ವೇದಿಕೆ ಹಾಗೂ ಆಟೋರಿಕ್ಷಾ ಚಾಲಕ ಘಟಕದ ಆಶ್ರಯದಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ನಿಂತಿರುವ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಆಡುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಸಭೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಬಳಿ ಇರುವ ರಿಕ್ಷಾ ಪಾರ್ಕ್ ನಲ್ಲಿ ನಡೆಯಿತು. ತುಳು ನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ, ದೇರಳಕಟ್ಟೆ ಪರಿಸರ ದಲ್ಲಿ ನಿರ್ಮಾಣ ಆಗಿರುವ ಬಹು ಮಹಡಿ ಕಟ್ಟಡ ಗಳ…

Read More
error: Content is protected !!