ಮನೆ ಬೀಗ ಒಡೆದು ನುಗ್ಗಿದ ಕಳ್ಳರು: ಕಾಸರಗೋಡಿನಲ್ಲಿ ವಕೀಲೆಯ ಮನೆಯಲ್ಲಿ ಲಕ್ಷಾಂತರ ನಷ್ಟ
ಕಾಸರಗೋಡು: ಕುಂಬಳ ನೈಕಾಪ್ಪಿ ನಲ್ಲಿ ಪ್ರದೇಶದಲ್ಲಿ ವಕೀಲೆಯೊಬ್ಬರ ಮನೆಗೆ ಕಳ್ಳರು ನುಗ್ಗಿ ಭಾರೀ ದೋಚಾಟ ನಡೆಸಿದ್ದಾರೆ. ಮನೆಯ ಹಿಂಭಾಗದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿ ಇಡಲಾಗಿದ್ದ 29 ಪವನ್ ಚಿನ್ನಾಭರಣಗಳು, ಸುಮಾರು ₹2.5 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ₹5,000 ನಗದು ದೋಚಿ ಪರಾರಿಯಾಗಿದ್ದಾರೆ. ನೆಕ್ಲೆಸ್, ಬಳೆಗಳು, ಉಂಗುರಗಳು, ಬ್ರೇಸ್ಲೆಟ್, ದೊಡ್ಡ ಹಾರ, ಕಿವಿಯೋಲೆಗಳು, ಮಕ್ಕಳ ಹಾರ, ಮಕ್ಕಳ ಚಿನ್ನದ ಬಳೆ, ಕಲ್ಲು ಅಳವಡಿಸಿದ ಹಾರ ಸೇರಿದಂತೆ ವಿವಿಧ ಚಿನ್ನಾಭರಣಗಳು ಕಳವಾಗಿವೆ. ಒಟ್ಟು ಸುಮಾರು…