Avatar

NAMMA MEDIA 24X7

ಮನೆ ಬೀಗ ಒಡೆದು ನುಗ್ಗಿದ ಕಳ್ಳರು: ಕಾಸರಗೋಡಿನಲ್ಲಿ ವಕೀಲೆಯ ಮನೆಯಲ್ಲಿ ಲಕ್ಷಾಂತರ ನಷ್ಟ

ಕಾಸರಗೋಡು: ಕುಂಬಳ ನೈಕಾಪ್ಪಿ ನಲ್ಲಿ ಪ್ರದೇಶದಲ್ಲಿ ವಕೀಲೆಯೊಬ್ಬರ ಮನೆಗೆ ಕಳ್ಳರು ನುಗ್ಗಿ ಭಾರೀ ದೋಚಾಟ ನಡೆಸಿದ್ದಾರೆ. ಮನೆಯ ಹಿಂಭಾಗದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿ ಇಡಲಾಗಿದ್ದ 29 ಪವನ್ ಚಿನ್ನಾಭರಣಗಳು, ಸುಮಾರು ₹2.5 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ₹5,000 ನಗದು ದೋಚಿ ಪರಾರಿಯಾಗಿದ್ದಾರೆ. ನೆಕ್ಲೆಸ್, ಬಳೆಗಳು, ಉಂಗುರಗಳು, ಬ್ರೇಸ್ಲೆಟ್, ದೊಡ್ಡ ಹಾರ, ಕಿವಿಯೋಲೆಗಳು, ಮಕ್ಕಳ ಹಾರ, ಮಕ್ಕಳ ಚಿನ್ನದ ಬಳೆ, ಕಲ್ಲು ಅಳವಡಿಸಿದ ಹಾರ ಸೇರಿದಂತೆ ವಿವಿಧ ಚಿನ್ನಾಭರಣಗಳು ಕಳವಾಗಿವೆ. ಒಟ್ಟು ಸುಮಾರು…

Read More

ಹಿಂದೂ ಸಮಾಜ ಸಂಘಟಿತನಾದಾಗಲೇ ಶಾಂತಿ–ಸಾಮರಸ್ಯ ಸಾಧ್ಯ: ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ಅರುಣ್ ಕುಮಾರ್

ಬಂಟ್ವಾಳ: ಹಿಂದೂ ಚೆನ್ನಾಗಿರುವಲ್ಲಿ ಯಾವುದೇ ಸಮಸ್ಯೆ ಇಲ್ಲವಾಗಿದ್ದು, ಹಿಂದೂ ದುರ್ಬಲನಾದಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ಹಿಂದೂ ಸಮಾಜ ಸಂಘಟಿತನಾದಾಗ ಜಗತ್ತಿನಲ್ಲಿ ಶಾಂತಿ- ಸಾಮರಸ್ಯ ನೆಲೆಸುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕ ಅರುಣ್ ಕುಮಾರ್ ಹೇಳಿದರು. ಅವರು ರವಿವಾರ ಸಂಜೆ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ವಠಾರದಲ್ಲಿ ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಫರಂಗಿಪೇಟೆ ಮಂಡಲದ ವತಿಯಿಂದ ನಡೆದ ಹಿಂದೂ ಸಂಗಮ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.ಪ್ರಸ್ತುತ ಜಾಗತಿಕ…

Read More

ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕೂಡಿಬೈಲು ಶ್ರೀ ಮಹಾದೇವಿ ಮಹಮ್ಮಾಯಿ ದೇವಿಯ ಮೂರು ದಿನಗಳ ಜಾತ್ರೋತ್ಸವ ಸಂಪನ್ನ

ಬಂಟ್ವಾಳ:ಕೂಡಿಬೈಲು ಶ್ರೀ ಮಹಾದೇವಿ ಮಹಮ್ಮಾಯಿ ದೇವಿಯ ಮೂರು ದಿನಗಳ ಜಾತ್ರೋತ್ಸವ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.ದಿವ್ಯ ಸನ್ನಿಧಿಯಲ್ಲಿ ದೇವಪ್ರಾರ್ಥನೆ ಹಾಗೂ ಮಹಾಗಣಪತಿ ಹವನದೊಂದಿಗೆ ಪ್ರಾರಂಭಗೊಂಡು, ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿದ ವಾರ್ಷಿಕ ಜಾತ್ರೋತ್ಸವದಲ್ಲಿ ರಕ್ತೇಶ್ವರಿ ದೈವದ ನೇಮೋತ್ಸವ, ಪಾವನ ವಿಧಿಗಳೊಂದಿಗೆ ಸಂಪನ್ನಗೊಂಡಿತು. ಶ್ರೀ ದೇವಿಯ ಸನ್ನಿಧಿಯಲ್ಲಿ ಹೂವಿನ ಪೂಜೆ, ಕುಂಕುಮಾರ್ಚನೆ, ನಿತ್ಯ ಬಲಿ, ಮಹಾರಂಗಪೂಜೆ, ದೀಪಾರಾಧನೆ, ಉತ್ಸವಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಅಗ್ನಿಸೇವೆಯಂತಹ ವಿಧಿವಿಧಾನಗಳು ನೆರವೇರಿದವು.

Read More

ಹೊಸಂಗಡಿಯ ಲಾಡ್ಜ್ ದಾಳಿ ಪ್ರಕರಣ: ಅಶ್ಲೀಲ ಚಿತ್ರ ಬೆದರಿಕೆ ನೀಡಿ ಹಣ-ಮೊಬೈಲ್ ದೋಚಿದ ಆರೋಪಿ ಬಂಧನ

ಮಂಜೇಶ್ವರ: ಹೊಸಂಗಡಿಯ ಲಾಡ್ಜ್‌ನಲ್ಲಿ ಯುವಕ ಮತ್ತು ಅತನ ಮಹಿಳಾ ಸ್ನೇಹಿತೆಯ ಮೇಲೆ ದಾಳಿ ನಡೆಸಿ, ಅವರನ್ನು ಒಟ್ಟಿಗೆ ಕುಳ್ಳಿರಿಸಿ ಅಶ್ಲೀಲ ಚಿತ್ರ ಹಾಗೂ ವೀಡಿಯೊಗಳನ್ನು ತೆಗೆದು ಬೆದರಿಕೆ ಹಾಕಿ ಹಣ ಹಾಗೂ ಮೊಬೈಲ್ ಫೋನ್ ದೋಚಿದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ಪಿರಾರಮೂಲ ನಿವಾಸಿ ಹಾಗೂ ಕಡಂಬಾರು ನಿವಾಸಿಯಾಗಿರುವ ಹಾರಿಸ್ (40) ಬಂಧಿತ ಆರೋಪಿ. ಮಂಜೇಶ್ವರ ಪೊಲೀಸರು ಮಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಮಂಗಳೂರಿನಲ್ಲಿ ಇದ್ದಾರೆಂಬ ಮಾಹಿತಿ ಮೇರೆಗೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ…

Read More

ಮಂಜೇಶ್ವರ: ಒಂಟಿ ವೃದ್ಧೆಯ ಕೊಲೆ ಪ್ರಕರಣ—ಕರಿಮಣಿ ದೋಚಾಟಕ್ಕೆ ಹತ್ಯೆ, ಆರೋಪಿ ಬಂಧನ

ಮಂಜೇಶ್ವರ: ಬದಿಯಡ್ಕ ಸಮೀಪದ ಕುಂದ್ಲಾಜೆ ಪಂಚಾಯತಿನ ಮವ್ವಾರು ಆಜಿಲ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆಯ ಸಾವು ಕೊಲೆಯಾಗಿದೆಂಬ ಮರಣೋತ್ತರ ಪರೀಕ್ಷಾ ವರದಿ ಬಂದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಜಿಲ ನಿವಾಸಿ ಪುಷ್ಪಲತಾ ವಿ. ಶೆಟ್ಟಿ (65) ಗುರುವಾರ ಸಾವನ್ನಪ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವರ ಮುಖದಲ್ಲಿ ಉಗುರಿನಿಂದ ಪರಚಿದ ಗಾಯಗಳಿತ್ತು. ಅಲ್ಲದೇ ಮಹಿಳೆಯನ್ನು ಕತ್ತು ಹಿಡಿದು ಉಸಿರುಗಟ್ಟಿಸಿ ಕೊಲೆ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಸೂಚಿಸಿತ್ತು. ಈ ಸಂಬಂಧ ಬದಿಯಡ್ಕ ಪೊಲೀಸರು…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಹಾಗೂ ಇವರ ಕುಟುಂಬದ ವಿರುದ್ಧ ನಿಂದನೆ ಸೌಜನ್ಯ ಮಾವ ವಿಠಲ ಗೌಡ ಅವರಿಗೆ 30 ದಿನಗಳ ಕಾಲ ನ್ಯಾಯಾಂಗ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಹಾಗೂ ಇವರ ಕುಟುಂಬದ ವಿರುದ್ಧ ನಿಂದನೆ ಮಾಡಬಾರದು ಎಂಬ ಕೋರ್ಟ್ ಆದೇಶವನ್ನು ಪದೇ ಪದೇ ಉಲ್ಲಂಘಿಸಿದ  ಆರೋಪದಡಿಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ಸೌಜನ್ಯ ಮಾವ ವಿಠಲ ಗೌಡ ಅವರಿಗೆ 30 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಆರೋಪಿಯಾಗಿರುವ ಸೌಜನ್ಯಳ ಮಾವ ವಿಠ್ಠಲ ಗೌಡ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರು…

Read More

ಮಂಗಳೂರು ದಕ್ಷಿಣದಲ್ಲಿ ಅಂಗನವಾಡಿ ನಿವೇಶನ ಸಮಸ್ಯೆ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಹತ್ವದ ಸಭೆ

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನ ಗುರುತಿಸುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಯಿತು. ನಮ್ಮ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 59 ಅಂಗನವಾಡಿಗಳಿಗೆ ನಿವೇಶನವಿಲ್ಲ. ಅದರಲ್ಲಿಯೂ 29 ಬಾಡಿಗೆ ಕಟ್ಟಡಗಳಲ್ಲಿವೆ. ಪುಟ್ಟ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸುಸಜ್ಜಿತ ಅಂಗನವಾಡಿ ಕೇಂದ್ರಗಳು ಅತ್ಯಂತ ಬಹು ಮುಖ್ಯವಾಗಿವೆ. ಹೀಗಿರುವಾಗ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನ ಗುರುತಿಸುವ ಕೆಲಸವು ಶೀಘ್ರವಾಗಿ ನಡೆಯಬೇಕು. ಸಂಬಂಧಪಟ್ಟ ಅಧಿಕಾರಿಗಳು…

Read More

ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ SPC ಕ್ಯಾಡೆಟ್‌ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ತರಗತಿ ಮತ್ತು ಜಾಗೃತಿ

ಮಂಜೇಶ್ವರ: ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ SPC ಕ್ಯಾಡೆಟ್‌ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ತರಗತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹೊಸಂಗಡಿಯಲ್ಲಿ ನಡೆಯಿತು . ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ವಾಹನ ಅಪಘಾತಗಳು ಈ ನಡುವೆ ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ .ವಾಹನ ಚಾಲಕರು ಮತ್ತು ಸಂಚಾರಿಗಳು ಕೆಲವೊದು ನಿಯಮವನ್ನು ಪಾಲಿಸಬೇಕಾಗುವುದು,ನಿಯಮ ಮತ್ತು ಕರ್ಥವ್ಯಗಳನ್ನು ತಿಳಿಸುವ ಉದ್ದೇಶದಿಂದ“ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು” ಎಂಬ ವಿಷಯದಡಿ ಹೊಸಂಗಡಿಯಲ್ಲಿ ಆಟೋ ರಿಕ್ಷಾ ಚಾಲಕರು ಹಾಗೂ…

Read More

ಕಳೆದ ದಿನ ಟ್ರೋಲ್‌ಗೆ ಸಂಬಂಧಿಸಿದ ಹೋರಾಟದಲ್ಲಿ ಬಂಧಿತರಿಗೆ ಜಾಮೀನು

ಕಳೆದ ದಿನ ಟ್ರೋಲ್‌ಗೆ ಸಂಬಂಧಿಸಿದಂತೆ ಹೋರಾಟದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸ್‌ರು ಬಂಧಿಸಿದ್ದರು. ಆದರೆ ಸಮರನಾಯಕ ಎಂಎಲ್ ಎ ಸೇರಿದಂತೆ ಸುಬೈರ್, ಎ.ಕೆ. ಆರಿಫ್, ಅಶ್ರಫ್ ಕರ್ಳ್ಳ ಮುಂತಾದವರು ವಕೀಲರೊಂದಿಗೆ ಬೆಳಗ್ಗೆಯಿಂದ ನಡೆಸಿದ ಕಾನೂನು ಹೋರಾಟದ ಫಲವಾಗಿ, ಆ ಇಬ್ಬರಿಗೆ ಜಾಮೀನು ಮಂಜೂರಾಗಿದೆ. ಟ್ರೋಲ್ ಸಮರವು ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲಿ, ಸಮರವನ್ನು ಭಂಗಪಡಿಸಲು ಮಧ್ಯದಲ್ಲಿ ಯಾರು ನುಗ್ಗಿದ್ದಾರೆ? ಕ್ಷೇತ್ರದ ಎಂಎಲ್‌ಎ ಎ.ಕೆ.ಎಂ. ಅಶ್ರಫ್ ಅವರು ಜನರಿಗೆ ನಿಷೇಧಾಜ್ಞೆ ಇದೆ ಕಾರ್ಯಕರ್ತರಿಗೆ ಚದುರಿಹೋಗಲು ಹೇಳಿದರೂ ಅದನ್ನು ಕೇಳದೆ ಮುಂದುವರಿದ್ದಾರೆ ,…

Read More

ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ನ ನೂತನ ಕಾರ್ಯಾಲಯದ ಉದ್ಘಾಟನೆ

ಮಂಜೇಶ್ವರ: ಕಲೆ ಕ್ರೀಡೆ ಜೀವ ಕಾರುಣ್ಯ ಕಾರ್ಯಾಗಾರದಲ್ಲಿ ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ಗೆ 32 ನೇ ವರ್ಷ ಕ್ಕೆ ನೂತನ ಕಾರ್ಯಾಲಯವು 16 -01 -2026 ನೇ ಶನಿವಾರದಂದು ಉದ್ಘಾಟನೆಗೊಂಡಿತು. ಮಂಜೇಶ್ವರ ಪೊಯ್ಯಕಂಡದಲ್ಲಿ ನಿರ್ಮಿಸಲಾದ ನೂತನ ಕಾರ್ಯಾಲಯದ ಕಟ್ಟಡವನ್ನು ಮಂಜೇಶ್ವರದ ಶಾಸಕರಾದ ಎ.ಕೆ .ಎಂ ಅಶ್ರಫ್ ರವರು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಿರ್ಮಾಪಕ , ಅಸ್ತ್ರ ಗ್ರೂಪ್ ನ CEO ಲಂಚುಲಾಲ್ ಉಪಸ್ಥಿತರಿದ್ದರು . ಕಾರ್ಯಕ್ರಮ ಉದ್ಘಾಟಿಸಿ…

Read More
error: Content is protected !!