ಅಡ್ಯಾರ್ ಗಾರ್ಡನ್ನಲ್ಲಿ ‘ಪಟ್ಲ ಸಂಭ್ರಮ-2026’ ವೈಭವ; ವಿದ್ಯಾರ್ಥಿವೇತನ, ಸನ್ಮಾನ ಸಮಾರಂಭಕ್ಕೆ ಮೆರುಗು
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ಪಟ್ಲ ಸಂಭ್ರಮ-2026’, ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ನಗರದ ಅಡ್ಯಾರ್ ಗಾರ್ಡನ್ನಲ್ಲಿ ವೈಭವದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಉದ್ಘಾಟಿಸಿ ಮಾತನಾಡಿ, ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂರು ಸಾವಿರ ರೂ ವಿದ್ಯಾರ್ಥಿವೇತನ, ಕಲಾವಿದರಿಗಾಗಿ ವಿಮಾ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಯಕ್ಷಧ್ರುವ ಫೌಂಡೇಶನ್ ಯಶಸ್ವಿಯಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. “ದಾನ ಮಾಡುವ ಸಂಕಲ್ಪ ಇದ್ದರೆ ದೇವರ…