ಬಾಕುಡ ಸಮುದಾಯ ಕುರಿತು ತಪ್ಪು ಮಾಹಿತಿ ಹರಡಿದ ಆರೋಪ: ನವೀನ್ ಸೂರಿಂಜೆ ವಿರುದ್ಧ ಖಂಡನೆ:ಬಾಲಕೃಷ್ಣ ವಿ.ಎನ್.(ಬಾಕುಡ ಪ್ರತಿನಿಧಿ)
ಕಾಸರಗೋಡು: ಬಾಕುಡ ಸಮುದಾಯದ ದೈವದಪಾತ್ರಿ–ಕಾರ್ನವರ ಒಕ್ಕೂಟದ ಇತ್ತೀಚಿನ ವಾರ್ಷಿಕ ಸಭೆಯಲ್ಲಿ ಮುಖ್ಯ ಧಾರ್ಮಿಕ ಭಾಷಣಗಾರರಾಗಿ ಭಾಗವಹಿಸಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರು ತಮ್ಮ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಹಂಚಿಕೊಂಡ ಭಾಷಣದ ಕೆಲವು ಭಾಗಗಳು ವಿವಾದಕ್ಕೆ ಕಾರಣವಾಗಿವೆ. ಕರಾವಳಿಯ ನಾಗಬನಗಳ ಮೇಲಿನ ಅಧಿಕಾರ ಬಾಕುಡರಿಗೆ ಮಾತ್ರ ಇದ್ದು, ಕೋಟಿಗಟ್ಟಲೆ ಆದಾಯದ ವ್ಯವಹಾರವನ್ನು ಬ್ರಾಹ್ಮಣರು ಕಸಿದುಕೊಂಡಿದ್ದಾರೆ, ಬಾಕುಡರ ಹಕ್ಕಿನ ನಾಗಾರಾಧನೆಯಿಂದ ಅವರನ್ನು ಹೊರಹಾಕಲಾಗಿದೆ, ಬಾಕುಡರ ಜಮೀನನ್ನು ಬ್ರಾಹ್ಮಣರು ಕಬಳಿಸಿದ್ದಾರೆ ಎಂಬ ರೀತಿಯ ಅಕ್ಷರಶಃ ಸುಳ್ಳು ಮಾಹಿತಿಯನ್ನು ಅವರು ಹರಡಿದ್ದಾರೆ ಎಂದು…
