Avatar

Shramitha bejja

4ನೇ ವರ್ಷದ “ದುಬೈ ಗಡಿನಾಡ ಉತ್ಸವ-2025”

ದುಬೈ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೇ ವರ್ಷದ “ದುಬೈ ಗಡಿನಾಡ ಉತ್ಸವ-2025” ಕಾರ್ಯಕ್ರಮವು ಇತ್ತೀಚೆಗೆ ನಗರದ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಜಾನಪದ ಪರಿಷತ್ ಮಂಗಳೂರಿನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್ ರವರು ಯಕ್ಷಗಾನದ ಚೆಂಡೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ…

Read More

ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮದಿಂದ ಶೃಂಗೇರಿ ಗುರುಪಾದಪೂಜೆ -ಅನುಗ್ರಹ ಪ್ರಾಪ್ತಿ

ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಗುರುದೇವ ಶ್ರೀ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಗಳವರಿಂದ ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿನ ನಾಗರಕಟ್ಟೆ ಯಲ್ಲಿ ಸಮಾಜದ ಏಳಿಗೆಗಾಗಿ ಸ್ಥಾಪಿಸಿದ “ಶ್ರೀ ಶಾರದಾ ಭಜನಾಶ್ರಮ ” ಇದರ ಜೀರ್ಣೋದ್ದಾರ, ನೂತನ ನಾಗರಕಟ್ಟೆ, ರಕ್ತೇಶ್ವರಿ ಕಟ್ಟೆ ಪುನರ್ ನಿರ್ಮಾಣ ಹಾಗೂ ಡಿಸೆಂಬರ್ ತಿಂಗಳ ನಾಲ್ಕು, ಐದನೇ ತಾರೀಕಿಗೆ ನಡೆಯುವ ಬ್ರಹ್ಮ ಕಲಶ ಪ್ರಯುಕ್ತ, ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ಗಳಿಗೆ ಪಾದಪೂಜೆ, ವಸ್ತ್ರ ಸಂಹಿತೆಯೊಂದಿಗೆ ನೀಡಿ ಪರಮ…

Read More

ಇತಿಹಾಸ ಪ್ರಸಿದ್ಧ ಮಂಜೇಶ್ವರ ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕೊಡುಗೈ ದಾನಿ ಅಸ್ತ್ರ ಗ್ರೂಪ್ CEO ಕೆ.ಎಸ್ ಲಂಚುಲಾಲ್ .

ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಇಂದು ಕೊಡುಗೈ ದಾನಿ , ಬಡವರ ಬಂಧು ಅಸ್ತ್ರ ಗ್ರೂಪ್ ನ ಸಿ ಇ ಓ ಲಂಚುಲಾಲ್ ಕೆ. ಎಸ್ ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟರು. ಬರದಿಂದ ಸಾಗುವ ಜೀರ್ಣೋದ್ದಾರ ಕೆಲಸವನ್ನು ವೀಕ್ಷಿಸಿ ರೂಪುರೇಷೆ ನೋಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಹಾಗೂ ಆಡಳಿತ ಸಮಿತಿಯಿಂದ ಲಂಚುಲಾಲ್ ರವರಿಗೆ ಕಿರು ಗೌರವಾರ್ಪಣೆಯನ್ನು ಸಮರ್ಪಿಸಿದರು. ಈ ಸಂದರ್ಭ ಮಾತನಾಡಿದ ಲಂಚುಲಾಲ್ ರವರು ..ಮೊದಲು…

Read More

ಮಂಜೇಶ್ವರದ ದಿವ್ಯಾಂಗಿ ಲಾಟರಿ ವ್ಯಾಪಾರಿಗೆ ದ್ವಿಚಕ್ರ ವಾಹನ ಹಸ್ತಾಂತರಿಸಿದ ಅಸ್ತ್ರ ಗ್ರೂಪಿನ ಸಿ ಇ ಓ ಲಂಚುಲಾಲ್.

ಮಂಜೇಶ್ವರದ ಹೊಸಂಗಡಿಯಲ್ಲಿ ಲಾಟರಿ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿರುವ ದಿವ್ಯಾಂಗಿ ರೋಹಿತ್ ಹೊಸಂಗಡಿ ಯವರಿಗೆ ಲಂಚುಲಾಲ್ ಅವರು ತಮ್ಮ ಪ್ರಾಣಾಸ್ತ್ರ ಚಾರಿಟೇಬಲ್ ಟ್ರಸ್ಟ್ ಮೂಲಕ ದ್ವಿಚಕ್ರ ವಾಹನವನ್ನು ಕನಿಲ ಶ್ರೀ ಭಗವತಿ ಕ್ಷೇತ್ರದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಕಾರ್ನವರ ಮೂಲಕ ನೀಡಿದರು. ಮಂಜೇಶ್ವರ ಪಿಲಿಗೊಬ್ಬು ನಡೆಯುವ ಸಂದರ್ಭದಲ್ಲಿ ರೋಹಿತ್ ಅವರ ಬಗ್ಗೆ ಲಂಚುಲಾಲ್ ಅವರಿಗೆ ತಿಳಿಸಲಾಗಿತ್ತು. ಅಂದೇ ನೀಡಿದ ವಾಗ್ದಾನದಂತೆ ಇಂದು ಈ ದ್ವಿಚಕ್ರ ವಾಹನವನ್ನು ಹಸ್ತಾಂತರಿಸಲಾಗಿದೆ. ಮಂಜೇಶ್ವರ ಪಿಲಿಗೊಬ್ಬು ವೇದಿಕೆಯಲ್ಲಿ ಸಾಂಕೇತಿಕವಾಗಿ…

Read More

ಮಂಜೇಶ್ವರ ವಾಮಂಜೂರು ಶ್ರೀ ಶಾಸ್ತವೇಶ್ವರ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಿದ್ಧತೆ .

ಇತಿಹಾಸ ಪಸಿದ್ದ ಮಂಜೇಶ್ವರ ವಾಮಂಜೂರು ಶ್ರೀ ಶಾಸ್ತವೇಶ್ವರ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಿದ್ಧತೆ ನಡೆಯುತ್ತಿದ್ದು ,ಸರಿ ಸುಮಾರು 17 ವರ್ಷಗಳ ಹಿಂದೆ ಕ್ಷೇತ್ರ ಜೀರ್ಣೋದ್ದಾರ ನಡೆದು ಬ್ರಹ್ಮ ಕಲಶ ನಡೆದಿತ್ತು . ಇದೀಗ ಕ್ಷೇತ್ರ ಎದುರಿನಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಗೊಂಡ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬೇಟಿಕೊಡುವವರಿಗೆ ಅವ್ಯವಸ್ಥೆ ಉಂಟಾಗಿದ್ದು ಮುಂದೆ ರಾಷ್ಟ್ರೀಯ ಹೆದ್ದಾರಿಯ ಸಮಾನ ಎತ್ತರಕ್ಕೆ ಏರಿಸಿ ಕ್ಷೇತ್ರವನ್ನು ಪುನರ್ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿದ್ದು ಈ ಬಗ್ಗೆ ಜೀರ್ಣೋದ್ದಾರ ಸಮಿತಿಯನ್ನು ರಚಿಸುವ ಸಲುವಾಗಿ ಊರ ಪರವೂರ ಭಕ್ತಾದಿಗಳನ್ನು…

Read More

ಅಪೂರ್ಣವಾಗಿಯೇ ಉಳಿದಿರುವ ಬೆಂದೂರ್ವೆಲ್ ನ ಕಾಂಕ್ರೀಟಿ ರಸ್ತೆ … !

ಸಂತ ಥೆರೆಸಾ ಶಾಲೆಯ ಮುಂದಿನ ಬೆಂದೂರ್ವೆಲ್ ರಸ್ತೆಯು ಸಂಪೂರ್ಣ ಕಾಂಕ್ರೀಟಿಕರಣವಾಗದೆ ಹಾಗೆಯೇ ಉಳಿದು ಕೊಂಡಿದೆ . ಇದು ಯಾವಾಗ ಪೂರ್ತಿಯಾಗುತ್ತೋ ಎನ್ನುವ ಯಕ್ಷ ಪ್ರಶ್ನೆಯೊಂದು ಉದ್ಭವಿಸಿದೆ . ಕಳೆದ ಕೆಲವಾರು ದಿನಗಳಿಂದ ರಸ್ತೆಯ ಕಾಂಕ್ರೀಟಿಕರಣ ಸಂಪೂರ್ಣ ಆಗದ ಕಾರಣ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನಗಳಿಗೆ ತೊಂದರೆ ಯಾಗಿದೆ. ದಿನ ನಿತ್ಯವೂ ಈ ಮಾರ್ಗವಾಗಿ ಹಲವು ವಾಹನಗಳು ಸಂಚಾರ ನಡೆಸುತ್ತದೆ . ಈ ಮಾರ್ಗದ ಕಾಂಕ್ರೀಟಿಕರಣವನ್ನು ಆದಷ್ಟು ಬೇಗನೇ ಪೂರ್ಣಮಾಡಿ ವಾಹನ ಸವಾರರ ಸಂಚಾರಕ್ಕೆ ಅನುವುವಾಗುವಂತೆ ಸ್ಥಳೀಯ…

Read More

ಕರಾವಳಿ ಮೀನುಗಾರರಿಗೆ ತಟ್ಟಿದ ಮೊಂತಾ ಚಂಡಮಾರುತದ ಎಫೆಕ್ಟ್ …. !

ಉಡುಪಿ: ಲಕ್ಷದ್ವೀಪದ ಸುತ್ತಮುತ್ತ ವಾಯುಭಾರ ಕುಸಿತವಾಗಿದ್ದು ಚಂಡಮಾರುತದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೂರ್ನಾಲ್ಕು ದಿನ ಭಾರಿ ಗಾಳಿಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದೆ. ಉಡುಪಿ ಜಿಲ್ಲೆಯ ಮಲ್ಪೆ ಸರ್ವ ಋತು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಬೋಟುಗಳು ವಾಪಸ್ ಆಗಿವೆ. ರಾಜ್ಯದ ಗಡಿ ದಾಟಿ ಗೋವಾ, ಮಹಾರಾಷ್ಟ್ರ ಗುಜರಾತ್ ಬಾರ್ಡರ್ ನಲ್ಲಿ ಇರುವ ಬೋಟ್ ಗಳಿಗೆ ಹತ್ತಿರದ ಬಂದರುಗಳನ್ನು ಆಶ್ರಯಿಸುವಂತೆ ಸೂಚನೆ ನೀಡಲಾಗಿದೆ.ಸರ್ವಋತು ಬಂದರು…

Read More

ರೂ.60 ಕೋಟಿಯಲ್ಲಿ ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ. ಪ್ರಥಮ ಸಭೆಯಲ್ಲೇ ರೂ.13.75 ಕೋಟಿ ದೇಣಿಗೆ ವಾಗ್ದಾನ. ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಖ್ಯಾತ ಉದ್ಯಮಿಗಳಾದ ‘ಬಂಜಾರ’ ಪ್ರಕಾಶ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ ಆಯ್ಕೆ.

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಮಾಸ್ಟರ್ ಪ್ಲಾನ್ ಬಗ್ಗೆ ಜೀರ್ಣೋದ್ದಾರ, ಅಭಿವೃದ್ಧಿ ಸಮಿತಿಯ ಮೊದಲ ಸಭೆಯಲ್ಲಿಯೇ ಚರ್ಚೆ ಮಾಡಲಾಯಿತು.ಈಗಾಗಲೇ ಉದ್ಯಮಿಗಳಿಂದ 13.75 ಕೋಟಿ ರೂ.ದೇಣಿಗೆಯ ವಾಗ್ದಾನವಾಗಿದೆ ಎಂದು ಶಾಸಕ ಅಶೋಕ್‌ ಕುಮಾ‌ರ್ ರೈ ಹೇಳಿದರು. ದೇವಳದ ಜೀರ್ಣೋದ್ದಾರ ಮತ್ತು ಅಭಿವೃದ್ಧಿಯ ಕುರಿತು 25 ಮಂದಿ ಪ್ರಮುಖರನ್ನೊಳಗೊಂಡ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ದೇವಳದ ಕಚೇರಿ ಸಭಾಂಗಣದಲ್ಲಿ ಅ.25ರಂದು ಸಂಜೆ ನಡೆದ ಪ್ರಥಮ ಸಭೆಯ ಕೊನೆಯಲ್ಲಿ ಅವರು ಪತ್ರಿಕಾ ಮಾಧ್ಯಮದವರ ಜೊತೆ…

Read More

ಮಂಗಳೂರಿನ ಪತ್ರಿಕಾಭವನದಲ್ಲಿ ‘ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ .

ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಈ ಭಾರಿ ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಯವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ಸ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಕಾವೇರಿ ಎಂಬ ಕನ್ನಡ ಕೃತಿಯನ್ನು ಮಂಗಳೂರು ಕೊಡವ ಸಮಾಜದ ಉಪಾಧ್ಯಕ್ಷೆ ಬೊಳ್ಳಿಯಂಡ ಕೃತಿ ಸೋಮಯ್ಯ ನಗರದ ಪತ್ರಿಕಾ…

Read More

ಮಂಜೇಶ್ವರ, ಹೊಸಬೆಟ್ಟು ಹಿಂದೂ ರುದ್ರಭೂಮಿ ಲೋಕಾರ್ಪಣೆ .

ಮಂಜೇಶ್ವರ: ಇಲ್ಲಿನ ಹೊಸ ಬೆಟ್ಟು ಗುಡ್ಡೆ ರುದ್ರ ಭೂಮಿಯ ನೂತನ ಕಟ್ಟಡಗಳು ಹಾಗೂ ಮೂಲಭೂತ ಸೌಕರ್ಯಗಳ ಲೋಕಾರ್ಪಣೆ ಕಾರ್ಯಕ್ರಮ ಜರಗಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗುಡ್ಡೆ ಹಿಂದೂ ರುದ್ರಭೂಮಿ ಪರಿಪಾಲನ ಸಮಿತಿಯ ಅಧ್ಯಕ್ಷರಾದ ಯಾದವ್ ಬಡಾಜೆ ವಹಿಸಿದ್ದರು. ಸುಸಜ್ಜಿತ ಕಟ್ಟಡಗಳು, ಸಿಲಿಕಾನ್ ಪೆಟ್ಟಿಗೆ ವ್ಯವಸ್ಥೆ, ಕೊಳವೆಬಾವಿ, ಅಶ್ವತ ಕಟ್ಟೆ ಸೇರಿದಂತೆ ಸುಮಾರು 28 ಲಕ್ಷ ರೂಪಾಯಿ ವೆಚ್ಚದ ರುದ್ರಭೂಮಿ ಅಭಿವೃದ್ಧಿ ಯೋಜನೆಗಳನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾ ಎಂ. ಶಿಲಾ ಫಲಕವನ್ನು…

Read More
error: Content is protected !!