“ಭಾವೈಕ್ಯತೆಯ ಕೊಂಡಿಯ0ತಿರುವ ಉದ್ಯಾವರ ಜಾತ್ರೆಗೆ ಇಂದು ಕೊಡಿ”
ಕಾಸರಗೋಡು ಜಿಲ್ಲೆಯ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಹಿಂದೂ ಮುಸ್ಲಿಂ ಭಾವೈಕತೆಗೆ ದೇಶದಲ್ಲೇ ಗಮನ ಸೆಳೆದ ಶೃದ್ಧಾ ಕೇಂದ್ರವಾಗಿದೆ. ಇಲ್ಲಿನ ಮಹಿಮೆಯ ರೋಚಕ ಕಥೆಗಳು ಭಾವುಕರನ್ನು ತಲೆತೂಗಿಸುವಷ್ಟು ಆಕರ್ಷಿತವಾಗಿದೆ.ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಠರನ್ನು ರಕ್ಷಿಸಲು ಶ್ರೀಮನ್ ನಾರಾಯಣ ದೇವರು ದೇವಲೋಕದಿಂದ ಅಣ್ಣ ಮತ್ತು ತಮ್ಮ ದೈವರನ್ನು ಕೊರಳು ತುಂಬ ಮಲ್ಲಿಗೆಯನ್ನು ಸೊಂಟ ತುಂಬಾ ಕೇದಗೆ ಹೂವಿನಲ್ಲೂ ಏಳೇಳು ಕಡಲ ಮಧ್ಯೆ ಇರುವ ಹಾಲಿನ ಕಡಲಿನಲ್ಲಿ ಸೃಷ್ಟಿಸಿ ಮಾಯದ ಹಡಗಿನಲ್ಲಿ ವೇಣೂರಿಗೆ…