ಕುಲವನ್ ಐತಿಹ್ಯ

ಉತ್ತರ ಕೇರಳ ಭಾಗವು ಕಲೆ, ಸಂಸ್ಕೃತಿ, ಧಾರ್ಮಿಕ ಆಚಾರ ವಿಚಾರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುವ ತಾಣವಾಗಿದೆ . ತಲತಲಾಂತರದ ಕಾಲದ ಹಿಂದಿನಿಂದಲೂ ಇಲ್ಲಿ ಆಚಾರಗಳು ಶ್ರೀಮಂತವಾಗಿತ್ತು , ಸಂಪ್ರದಾಯಗಳು ಹಾಸುಹೊಕ್ಕಾಗಿತ್ತು , ಧಾರ್ಮಿಕತೆಯ ಸಾರವು ಅಗಾಧವಾಗಿ ಬೇರೂರಿತ್ತು . ಮಲಬಾರ್ ಭಾಗ ಎಂದ ಕೂಡಲೇ ತಟ್ಟನೆ ನೆನಪಿಗೆ ಬರುವುದು ದೈವಾರಾಧನೆ . ಕರಾವಳಿಯದಾದಂತ್ಯ ಗುಡಿ , ದೈವಸ್ಥಾನ , ಕುಲಂ , ಕಳಗಂ , ಕಾವು ಈ ರೀತಿಯ ನಾನಾ ಕಡೆಗಳಲ್ಲಿ ದೈವಗಳು ತನ್ನ…

Read More

ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ನಂಬಿಕೆಯ ಶಿಖರ ಮಣಿಯಂತೆ ಶೋಭಿಸುತ್ತಿರುವ ತುಳುನಾಡಿನ “ಕುಲೆ ಮದಿಮೆ”

ಧಾರ್ಮಿಕ ನಂಬಿಕೆಗಳು ಸನಾತನ ಧರ್ಮದ ಜೀವಾಳ. ಪ್ರಕೃತಿಯ ಚರಾಚರ ವಸ್ತುವಿನಲ್ಲೂ ದೈವ ದೇವರಿದ್ದಾರೆ ಎಂಬ ಅಚಲವಾದ ನಂಬಿಕೆ ನಮ್ಮದು .ಉದಾಹರಣೆಗೆ ಒಂದು ವೃಕ್ಷವನ್ನು ನಾವು ದೇವರು ಎಂಬ ಅಪಾರವಾದ ನಂಬಿಕೆಯಿಂದ ಪೂಜಿಸುತ್ತೇವೆ .ಅಂದರೆ ಆ ವೃಕ್ಷವನ್ನು ಕೇವಲ ಒಂದು ಮರವೆಂದು ಭಾವಿಸದೆ ಅದರಲ್ಲೂ ದೇವರಿದ್ದಾನೆ ಎಂಬ ನಂಬಿಕೆ ನಮ್ಮದು .ಅದನ್ನೇ ನಾವು ‘ಮೂಲತೋ ಬ್ರಹ್ಮರೂಪಾಯ ,ಮಧ್ಯತೋ ವಿಷ್ಣುರೂಪಾಯ ,ಅಗ್ರತೋ ಶಿವ ರೂಪಾಯ ವೃಕ್ಷ ರಾಜಾಯತೇ ನಮೋ ನಮಃ ‘ಎಂಬ ನಂಬಿಕೆ ನಮ್ಮದು . ಈ ಎಲ್ಲಾ ನಂಬಿಕೆಗಳ…

Read More

ಮಧೂರು ಶ್ರೀ ಕ್ಷೇತ್ರ ವಿಶೇಷ

ತುಳುನಾಡ ನೆಲೆಯಲ್ಲಿ ನೆಲೆಯಾಗಿರುವ , ಸಪ್ತ ಭಾಷಾ ಸಂಗಮ ಭುವಿಯಲ್ಲಿ ಸಿಂಗರಿಸುವ , ಮದರಿಗೆ ಒಲಿದು ಎಲ್ಲರ ಸತ್ಕರಿಸುವ , ಮಧುವಾಹಿನಿ ದಿವ್ಯ ತಟದಿ ವಿರಾಜಮಾನವಾಗಿರುವ , ಭವ್ಯ ವಾಸ್ತು ಶೈಲಿಯಲ್ಲಿ ದಿವ್ಯತೆಯ ಅನುಭೂತಿಯಿಂದ ಪಸರಿಸುವ , ಕುಂಬಳೆ ಅರಸರ ಆಡಳಿತ ಕಾಲದಿ ಜೀರ್ಣೋದ್ಧಾರಗೊಂಡಿರುವ , ಮುದದಿಂದ ಒಲಿಯುವ ಮದವೂರ ವಿಘ್ನೇಶನು ನೆಲೆಸಿರುವ , ಕಾರ್ಣಿಕದ ಪರಮೇಶ್ವರನು ಪಾಪವ ಕಳೆಯುತ್ತಿರುವ, ಭಕ್ತರ ನೆಚ್ಚಿನ ತಾಣ, ಸಾಹಿತ್ಯ ತಿರುಳಲ್ಲಿದೆ ಕ್ಷೇತ್ರ ಪುರಾಣ , ಜಯಸಿಂಹನ ಇತಿಹಾಸ ಭವ್ಯ ಕಿರಣ…

Read More

ನಟನೆಯ ಬದುಕೇಕೆ……..!?

ಮೂಗರನ್ನು ಪ್ರೀತಿಸಬಹುದು ಆದರೆ ಮೂಗರ ತರ ನಟನೆ ಮಾಡುವವರನ್ನು ಪ್ರೀತಿಸಿದರೆ ವ್ಯರ್ಥ, ಅಂಧರನ್ನು ಪ್ರೀತಿಸ ಬಹುದು ಆದ್ರೆ ಅಂಧಕಾರದಲ್ಲಿ ತೇಲಾಡುವವರು ಮೋಹಿಸಿದರೆ ಕಷ್ಟ, ಕಿವುಡರನ್ನು ಸ್ನೇಹಿಸಬಹುದು ಆದರೆ ನಾವಾಡುವ ಮಾತಿಗೆ ಕಿವಿಯಾಗದವರನ್ನು ಇಷ್ಟಪಟ್ಟು ಫಲ ಇಲ್ಲ. ಹೌದು ಸ್ನೇಹಿತರೆ ನಾವು ಒಬ್ಬರನ್ನು ಇಷ್ಟಪಡಲು ಶುರು ಮಾಡುತ್ತೇವೆ . ಅವರ ಜೊತೆ ಬಾಳಿನಲ್ಲಿ ಹೆಜ್ಜೆ ಹಾಕಬೇಕೆಂಬ ಕನಸು ಕಾಣ್ತಾ ಇರ್ತೇವೆ . ಆದರೆ ನಮ್ಮ ಕನಸುಗಳು ಕನಸಾಗಿ ಉಳಿಯುವ ಕಾಲ ದೂರವೇನು ಉಳಿದಿರುವುದಿಲ್ಲ. ಎಷ್ಟೇ ಕಷ್ಟ ಬಂದರೂ ಸ್ನೇಹವನ್ನು…

Read More

ಕೇರಳ ಸ್ಥಳೀಯಾಡಳಿತ ಚುನಾವಣಾ ಸನ್ನಿಹಿತ : ಎಡರಂಗ ಸರಕಾರಕ್ಕೆ ಸವಾಲುಗಳ ಸರಮಾಲೆ

ತಿರುವನಂತಪುರಂ : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ತ್ರಿಸ್ತರ ಪಂಚಾಯತ್ ನ ಸ್ಥಳೀಯಾಡಳಿತ ಚುನಾವಣೆಗಳು ಬಹುತೇಕ ಸೆಪ್ಟೆಂಬರ್ ಒಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಇದಕ್ಕೆ ಬೇಕಾಗಿ ಚುನಾವಣಾ ಆಯೋಗವು ವಾರ್ಡ್ ವಿಭಜನೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ಮಗ್ನವಾಗಿದೆ. 2026 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿರುವ ಎಡರಂಗ ಸರಕಾರಕ್ಕೆ ಸ್ಥಳೀಯಾಡಳಿತ ಚುನಾವಣೆಯ ಸಮಯ ಸನ್ನಿಹಿತವಾಗುವ ಸಮಯದಲ್ಲೇ ಒಂದೊಂದೇ ಸವಾಲುಗಳು ಎದುರಾಗುತ್ತಿದೆ. ಇದು ಆಡಳಿತ ಪಕ್ಷದ…

Read More

ಕುಟ್ಟಿ ತೆಯ್ಯಂ-ಆದಿ ಮತ್ತು ವೇಡನ್ ತೆಯ್ಯಂ

ಆಟಿ ಮಾಸವನ್ನು ‘ಕರ್ಕಟಕ’ ಮಾಸವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಉತ್ತರ ಮಲಬಾರ್ ಭಾಗದಲ್ಲಿ ಅದರಲ್ಲೂ ಪ್ರಮುಖವಾಗಿ ಕಾಸರಗೋಡು ಮತ್ತು ಕಣ್ಣೂರ್ ಈ ಭಾಗದಲ್ಲಿ ದೈವಾರಾಧನೆಗಳು ದೇವಾಲಯಗಳಲ್ಲಿ ನಡೆಯುವುದು ಬಹುತೇಕ ವಿರಳವಾಗಿರುತ್ತದೆ. ಶೂನ್ಯ ಮಾಸದಲ್ಲಿ ಕೋಲಗಳನ್ನು ಕಟ್ಟಿ ಆಡಿಸುವ ಸಂಪ್ರದಾಯ ತುಂಬಾ ಕಡಿಮೆ. ಕಲಶ ಮಹೋತ್ಸವದ ಬಳಿಕ ಯಾವುದೇ ಕಳಿಯಾಟಗಳು, ದೈವಕಟ್ಟುಗಳು ನಡೆಯುವುದಿಲ್ಲ ಮುಂದಿನ ತುಲಾ ಹತ್ತು ಬರುವ ತನಕ. ಆದರೆ ಈ ನಡುವೆಯೂ ಕೂಡ ಒಂದು ವೈಶಿಷ್ಟವಾದ ದೈವರಾಧನೆಗಳು ನಡೆಯುತ್ತದೆ. ಆದರೆ ಇದು ವಯಸ್ಕರ ಕಟ್ಟಿ ಆಡುವ…

Read More

ಇಹಲೋಕ ತ್ಯಜಿಸಿದ ಬಾಕ್ರಬೈಲಿನ ಮಹಾನ್ ಚೇತನ

ಭಜನೆಯ ಗುರಿಕಾರ…ಕಂಬಳದ ನೇಕಾರ.. ಕೃಷಿಯ ಹರಿಕಾರ…RSS ಹಾಗೂ ಬಿಜೆಪಿ ನೇತಾರ…ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಮಾಜಿ ಅಧ್ಯಕ್ಷರು, ಪ್ರಗತಿಪರ ಕೃಷಿಕ, ಸಂಘಟನಾ ಚತುರ… ಎಲ್ಲಾ ಕ್ಷೇತ್ರಗಳ ಸಾಹುಕಾರ… ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಹುಟ್ಟಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವಸಂತ ಭಂಡಾರಿ ಕಯ್ಯ (78) ವಿಧಿವಶ . ಸಣ್ಣ ಪ್ರಾಯದಿಂದಲೇ ಎಲ್ಲರೊಂದಿಗೆ ಬೆರೆತು ಮುಂದೆ ಬಾಕ್ರಬೈಲಿನಲ್ಲಿ ಎಲ್ಲರನ್ನೂ ಸಂಘಟಿಸುವ ಜೊತೆಗೆ ಪ್ರಗತಿಪರ ಕೃಷಿಕರಾಗಿ ಹಾಗೂ ಕಂಬಳ ಕೋಣದ ಮಾಲಕರು ಮತ್ತು ಓಟಗಾರ, ಕೂಡ ಪ್ರಸಿದ್ದಿಯನ್ನು ಪಡೆದ ಪ್ರಗತಿಪರ…

Read More

ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಹೊಸ ಸಹಾಯವಾಣಿ ಆರಂಭಿಸಿದ ನಟ ಮಮ್ಮುಟ್ಟಿ .

ತಿರುವನಂತಪುರಂ : ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಮಲಯಾಳಂ ಸ್ಟಾರ್ ‘ಟಾಕ್ ಟು ಮಮ್ಮುಕ್ಕ’ ಎಂಬ ನೂತನ ಸಹಾಯವಾಣಿ ಆರಂಭಿಸಿದ್ದಾರೆ.ಈ ಯೋಜನೆಯು ಕೇರಳ ಅಬಕಾರಿ ಇಲಾಖೆ ಹಾಗೂ ಸ್ಥಳೀಯ ಸ್ವ ಸಹಾಯ ಇಲಾಖೆಗಳೊಂದಿಗೆ ಕುಟುಂಬಶ್ರೀ ಮಿಷನ್ ನ ಬೆಂಬಲದೊಂದಿಗೆ ಈ ಸಹಾಯವಾಣಿ ಕಾರ್ಯಾಚರಿಸಲಿದೆ. 2025 ರ ಜೂನ್ 25 ರಂದು ಫೇಸ್ಬುಕ್ ಮೂಲಕ ಈ ಯೋಜನೆಯನ್ನು ಘೋಷಿಸಲಾಯಿತು.ಈ ಯೋಜನೆಯ ಮೂಲಕ ಮಾದಕ ವ್ಯಸನದಿಂದ ಚೇತರಿಸಿಕೊಳ್ಳಲು ಕರೆ ಮಾಡುವವರು 6238877369 ಈ ನಂಬರ್ ಗೆ…

Read More

ಶೀಘ್ರ ಕಲ್ಯಾಣ ಪ್ರಾಪ್ತಿ ಗೆ ಸ್ವಯಂವರ ಪಾರ್ವತಿ ಯಾಗ.ಜುಲೈ 5 ರಂದು ಅಂಬಾರು ಸದಾಶಿವ ಕ್ಷೇತ್ರ ದಲ್ಲಿ.

“‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎಂಬ ಮಾತಿನಂತೆ ಯಾವುದೇ ತಂದೆ ತಾಯಿಗಳಿಗೆ ತನ್ನ ಮಕ್ಕಳನ್ನು ಉನ್ನತ ಭವಿಷ್ಯಕ್ಕೆ ಹೊಂದಿಕೊಳ್ಳುವಂತೆ ಯೋಗ್ಯವಾದ ವಧು ವರರನ್ನು ತನ್ನ ಮಕ್ಕಳಿಗೆ ಅನ್ವೇಶಿಸಿ ಮದುವೆಯ ಭಾಗ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗೆ ಶೀಘ್ರವಾಗಿ ಯೋಗ್ಯವಾದ ಸಂಬಂಧಗಳನ್ನು ಅನ್ವೇಷಣೆ ಮಾಡಿ ಬದುಕು ಕಟ್ಟಿಕೊಳ್ಳುವಂತೆ ಹೆತ್ತವರು ಅದೆಷ್ಟು ಕನಸುಗಳನ್ನು ಕಾಣುತ್ತಾರೆ. ಆದರೆ ಸ್ತ್ರೀಯರಿಗೆ ವಿವಾಹ ಭಾಗ್ಯವು ಮಂದಗತಿಯಲ್ಲಿ ಸಾಗುತ್ತಿದ್ದರೆ, ತಾನು ಅಂದುಕೊಂಡಂತಹ ವರ ಲಭಿಸದೆ ವಿವಾಹ ಭಾಗ್ಯವು ಮಟಕುಗೊಳ್ಳುತ್ತಿದ್ದರೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲು ಸ್ವಯಂವರ…

Read More

ದುಬಾಯಿಯಲ್ಲಿ ಜೂನ್ 29 ರಂದು ಸಾಧಕರಿಗೆ ಸನ್ಮಾನದ ಜೊತೆ ದಶಮಾನದ ಸಂಭ್ರಮ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಇದೇ ಬರುವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ನಗರದ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಜರಗಲಿರುವುದು ಎಂದು ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತ ಜೂನ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ದಶಮ ಸಂಭ್ರಮದ ಪ್ರಯುಕ್ತ ಯುಎಇಯ…

Read More
error: Content is protected !!