ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿದೆಯಾ ಅವ್ಯವಹಾರ …… !
ಮಂಗಳೂರು: ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ-ಕರ್ನಾಟಕ ಮತ್ತು ನಾಗರಿಕ ಸೇವಾ ಟ್ರಸ್ಟ್ ನ ವತಿಯಿಂದ ಚಿಂತಕರು, ಸಾಹಿತಿಗಳಾದ ಲಕ್ಷ್ಮೀಶ ತೋಳ್ವಾಡಿ ನೇತ್ರಿತ್ವದಲ್ಲಿ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯು ನಡೆಯಿತು . ಈ ಕುರಿತು ಮಾತನಾಡಿದ ಅವರು , ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಕುಟುಂಬ ಮತ್ತು ಹೆಗ್ಗಡೆಯವರು ಅಧ್ಯಕ್ಷರೂ ಫಲಾನುಭವಿಗಳೂ ಆಗಿರುವ ಅವರ ಸಂಸ್ಥೆಗಳು ದಶಕಗಳಿಂದ ಅವ್ಯಾಹತವಾಗಿ ನಡೆಸಿಕೊಂಡು ಬಂದಿರುವ ಮತ್ತು ನಡೆಸಿಕೊಂಡು ಬರುತ್ತಿರುವ ರಾಶಿ ರಾಶಿ ಅಪರಾಧಗಳ ಕುರಿತು ಸರ್ವಾಂಗೀಣವಾದ ತನಿಖೆಯೊಂದು ನಡೆಯಲೇಬೇಕಾದ ತುರ್ತು ಅಗತ್ಯವಿದೆ. ಮುಖ್ಯಮಂತ್ರಿಗಳು…