ರೇಣುಕಾಸ್ವಾಮಿ ಹತ್ಯೆ ಕೇಸ್ – ಎಲ್ಲಾ ಜೈಲುಗಳಿಗೂ ಸುಪ್ರೀಂ ಎಚ್ಚರಿಕೆ
ನವದೆಹಲಿ, ಆ. 15 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪರಿಗಣಿಸುವಲ್ಲಿ ಗಂಭೀರ ಹಗರಣವಾಗಿದೆ ಎಂಬ ಕಾರಣದಿಂದ, ಸುಪ್ರೀಂಕೋರ್ಟ್ ಇಂದು ಗಂಭೀರ ತೀರ್ಪು ಪ್ರಕಟಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ ಮತ್ತು ಇತರರು ಜಾಮೀನಿನ ಹಿನ್ನಲೆಯಲ್ಲಿ ಹೊರಗಿದ್ದರೂ, ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜಾಮೀನನ್ನು ರದ್ದುಗೊಳಿಸಿ ತೀರ್ಪು ನೀಡಿದೆ. “ಯಾರೂ ಕಾನೂನಿಗಿಂತ ಮೇಲಲ್ಲ. ಆರೋಪಿ ಎಷ್ಟೇ ಪ್ರಸಿದ್ಧ ವ್ಯಕ್ತಿಯಾದರೂ ಕೂಡ ಕಾನೂನಿನ ಮುಂದೆ ಎಲ್ಲರೂ ಸಮಾನರು,” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ….