ಮಂಜೇಶ್ವರಾದ್ಯಂತ ಭಕ್ತಿ ಹಾಗೂ ಭಾವನಾಪೂರ್ಣವಾಗಿ ಆಚರಿಸಿದ ಸ್ವಾತಂತ್ರ್ಯ ದಿನಾಚರಣೆ.

ಮಂಜೇಶ್ವರ : 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಜೇಶ್ವರಾದ್ಯಂತ ಭಕ್ತಿ ಹಾಗೂ ಭಾವನಾಪೂರ್ಣವಾಗಿ ಆಚರಿಸಲಾಯಿತು. 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿಯಾದ ನೆನಪಿನಲ್ಲಿ, ಈ ದಿನವನ್ನು ವಿವಿಧೆಡೆ ಸಂಭ್ರಮ ಹಾಗೂ ಘನತೆಯಿಂದ ಆಚರಿಸಲಾಯಿತು.ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಪಂಚಾಯತು ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಧ್ವಜಾರೋಹಣಗೈದರು. ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ ಕೆ ಧ್ವಜಾರೋಹಣಗೈದರು. ಅದೇ ರೀತಿ ಪೀಸ್ ಕ್ರಿಯೇಟಿವ್ ಹೊಸಂಗಡಿ ಶಾಲೆಯಲ್ಲಿ ಶಾಲಾ ಚೇಯರ್ಮ್ಯಾನ್ ಅಬ್ದುಲ್ ರಹ್ಮಾನ್ ಅರಿಮಲ ಹಾಗೂ ಕುಂಜತ್ತೂರು ಪೀಸ್…

Read More

ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆ.

ಮಂಜೇಶ್ವರ :ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಪಾವೂರುಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಮುಟ್ಲ ದೋಜಾರೋಹಣ ಮಾಡಿದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು ಕಾರ್ಯಕ್ರಮದಲ್ಲಿ ತ್ಯಂಪಣ್ಣ ರೈ ಮುಟ್ಲ ಸುಧಾಕರ ಶೆಟ್ಟಿ ಪಾವೂರು ಅಶೋಕ ಪಾವೂರು ತನಿಸ್ಕಾದಯಾನಂದ ಪಾವೂರು ಜಾಫರ್ ಪಾವೂರು ಶಾಪಿ ಪಾವೂರು ಪಾರೂಕ್ ಪಾವೂರು ಖಾದರ್ ಪಾವೂರು ಪುನೀತ್ ರೈ ಪಾವೂರು ಭದ್ರು ಕುಂಡಾಪು ಅಬೂಬಕ್ಕರ್ ಕೊಂಬಗುರಿ ಹಾಗೂ…

Read More

ರಿಧಂ ಕಲ್ಚರಲ್ ವಿಂಗ್ ಮಂಜೇಶ್ವರ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ವಿಡಿಯೋ ಆಲ್ಬಮ್ ‘ಮಾ ತುಜೆ ಸಲಾಂ’ ಬಿಡುಗಡೆ:

ರಿಧಂ ಕಲ್ಚರಲ್ ವಿಂಗ್ ಮಂಜೇಶ್ವರದ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ವಿಡಿಯೋ ಆಲ್ಬಮ್ ‘ಮಾ ತುಜೆ ಸಲಾಂ’ ಬಿಡುಗಡೆ ನಮ್ಮ ಮೀಡಿಯಾ ಕಚೇರಿಯಲ್ಲಿ ಖ್ಯಾತ ಚಲನಚಿತ್ರ ,ನಾಟಕ ಹಾಸ್ಯ ನಟ ಸು ಫ್ರಮ್ ಸೋ ಚಿತ್ರದ ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಬಿಡುಗಡೆಗೊಳಿಸಿದರು ಈ ಹಾಡಿಗೆ ಸಬಿ ತೆಕ್ಕೆಪುರಂ ,ಅಬ್ದುಲ್ ರಾಫಿ ,ಸತೀಶ್ ಕಯ್ಯಾರ್ ,ನಜೀರ ಎಂ.ಪಿ ಸಾಹಿತ್ಯವನ್ನು ನೀಡಿದ್ದು , ಧ್ವನಿ ಮುದ್ರಣವನ್ನು ರಾಜು ಉಪ್ಪಳ , ದಸ್ತಕೀರ್ ನಿರ್ವಾಹಿದ್ದಾರೆ , ಗಫೂರ್ ಪೆರ್ವಾಡ್ ಛಾಯಾಗ್ರಹಣದಲ್ಲಿ…

Read More

ಶಾರದಾ ಆರ್ಟ್ಸ್ ಕಲಾವಿದರು (ರಿ) ಮಂಜೇಶ್ವರ: ಹೊಚ್ಚ ಹೊಸ ನಾಟಕ “ಜೈ ಭಜರಂಗ ಬಲಿ” ನಾಟಕ ಪ್ರದರ್ಶನ. ಆ.16ರಂದು.

ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಐಸಿರಿ ತಂಡದ ಈ ವರ್ಷದ ಹೊಚ್ಚ ಹೊಸ ನಾಟಕ ಜೈ ಭಜರಂಗ ಬಲಿ ಆಗಸ್ಟ್ 16 ರ ಶನಿವಾರದಂದು ರಾತ್ರಿ 8 ಗಂಟೆಗೆ ಶ್ರೀ ಪಾಂಡುರಂಗ ಭಜನಾ ಮಂದಿರ ಮುದಂಗಾರು ಕಟ್ಟೆಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ. ‘ಸು ಫ್ರಮ್ ಸೊ’ ಚಿತ್ರದ ಭಾವ ಬಂದರು ಖ್ಯಾತಿಯ ಪ್ರಬುದ್ಧ ಕಲಾವಿದ ಪುಷ್ಪರಾಜ್ ಬೊಳ್ಳಾರ್ ,’ತುಳುನಾಡ ರಂಗ ಬೊಳ್ಳಿ’ ರವಿ ರಾಮ ಕುಂಜ ,’ಗಡಿನಾಡ ಅಭಿನಯ ರತ್ನ’ ಅನಿಲ್ ರಾಜ್ ಉಪ್ಪಳ ,’ರಂಗ ಚತುರ’…

Read More

ಮೂತ್ರ ವಿಸರ್ಜನೆ ವೇಳೆ ರಸ್ತೆ ಬದಿಯ ಮರದ ರೆಂಬೆ ತಲೆಗೆ ಬಿದ್ದು ಲಾರಿ ಚಾಲಕ ದಾರುಣ ಮೃತ್ಯು

ಪೆರ್ಲ: ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಮರದಡಿಗೆ ತೆರಳಿದ ಚಾಲಕ ಮರದ ರೆಂಬೆ ಮುರಿದು ಬಿದ್ದು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ದ. ಕ. ಜಿಲ್ಲೆಯ ಬಂಟ್ವಾಳ ಪೆರಾಜೆ ಬಳಿಯ ಕುಡೇಲು ನಿವಾಸಿ ಕಾಂತಪ್ಪ ಗೌಡ – ಗೀತಮ್ಮ ದಂಪತಿ ಯ ಪುತ್ರ ಕೆ. ಜಗದೀಶ ಗೌಡ (50) ಮೃತ ವ್ಯಕ್ತಿಯಾಗಿದ್ದಾರೆ.ಬುಧವಾರ ಮುಂಜಾನೆ ಆರೂಕಾಲರ ವೇಳೆಗೆ ಪೆರ್ಲ- ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಈ ಘಟನೆ ನಡೆಯಿತು. ಮೂಡಬಿದಿರೆಯಿಂದ ಕಾಸರಗೋಡಿಗೆ ಪಶು ಆಹಾರ ಸಾಗಿಸುತ್ತಿದ್ದ…

Read More

ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಿ ಬಸ್ ಸಂಚಾರ ಆರಂಭಕಾಞಂಗಾಡು -ಮೂನಾಂಕಡವ್ – ಸುಳ್ಯ ರೂಟ್

ಕಾಸರಗೋಡು : ಬಂದಡ್ಕ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಕಾಞಂಗಾಡು -ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಸಿ ಯ ಲಿಮಿಟೆಡ್ ಸ್ಟಾಪ್ ಆ. 14ರಂದು ಸಂಚಾರ ಆರಂಭಿಸಿತು‌. ಕಾಞಂಗಾಡು, ಪೆರಿಯ, ಮೂನಾಂಕಡವ್, ಕುಂಡಾಂಗುಳಿ, ಬಂದಡ್ಕ ದಾರಿಯಾಗಿ ಸುಳ್ಯಕ್ಕೆ ಸರ್ವೀಸ್ ನಡೆಸುವ ಬಸ್ ಸಂಚಾರವನ್ನು ಶಾಸಕ ಸಿ. ಎಚ್. ಕುಂಞಂಬು ಇಂದು ಬೆಳಿಗ್ಗೆ ಕುತ್ತಿಕ್ಕೋಲ್ ನಲ್ಲಿ ಸಂಚಾರ ಉದ್ಘಾಟಿಸಿದರು.ಮಲೆನಾಡು ಪ್ರದೇಶವಾದ ಕುತ್ತಿಕೋಲ್, ಬೇಡಗಂ ಪಂಚಿಯತಿನ ಜನತೆಗೆ ಈ ಬಸ್ ಸಂಚಾರದ ಮೂಲಕ ಅತಿ ಸುಲಭದಲ್ಲಿ ಸುಳ್ಯವನ್ನು ಸಂಪರ್ಕಿಸಬಹುದಾಗಿದೆ. ಚಿಕಿತ್ಸೆ, ಉನ್ನತಶಿಕ್ಷಣ,…

Read More

ರಾಮಾಯಣ ಮಾಸಾಚರಣೆಯ ಭಕ್ತಿಪೂರ್ಣ ಸಮಾರೋಪ – ವರದಿ

ಮಂಜೇಶ್ವರ ಪ್ರಖಂಡದ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃ ಶಕ್ತಿ, ದುರ್ಗಾ ವಾಹಿನೀ ಸಂಘಟನೆಗಳು ಸಂಯುಕ್ತವಾಗಿ, ಭಕ್ತಿ ಮತ್ತು ಉತ್ಸಾಹದ ವಾತಾವರಣದಲ್ಲಿ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಆಯೋಜಿಸಿತು. ಕಾರ್ಯಕ್ರಮವು ಕುಂಜತ್ತೂರು ಶ್ರೀ ಶಿವಶಕ್ತಿ ಸೀತಾರಾಮ ಭಜನಾ ಮಂದಿರದಲ್ಲಿ ಭವ್ಯವಾಗಿ ನಡೆಯಿತು. ಆರಂಭದಲ್ಲಿ ನಡೆದ ಭಜನಾ ಸತ್ಸಂಗದಲ್ಲಿ ಭಕ್ತರು ಶ್ರೀರಾಮ, ಸೀತಾ ದೇವಿ ಮತ್ತು ಇತರ ದೈವಗಳನ್ನು ಸ್ತುತಿಸಿ ಭಜನೆಯನ್ನು ಆಲಾಪಿಸಿದರು. ಭಾವಪೂರ್ಣ ಗಾನವು ಶಾಂತಿ ಮತ್ತು ಆಧ್ಯಾತ್ಮಿಕೋತ್ಸಾಹ ತುಂಬಿದ ವಾತಾವರಣವನ್ನು ನಿರ್ಮಿಸಿತು. ಸಭೆಯಲ್ಲಿ ಸ್ಥಳೀಯ…

Read More

ಅಮೇರಿಕದೊಂದಿಗಿನ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿ,ಕರ್ಷಕ ಸಂಘದ ಪ್ರತಿಭಟನೆ.

ಅಮೇರಿಕದೊಂದಿಗಿನ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿ,ಅಮೇರಿಕ ಅಧ್ಯಕ್ಷರು ಮತ್ತು ಭಾರತ ಪ್ರಧಾನಿ ವಿರುದ್ಧ ಎಡರಂಗ ಕರ್ಷಕ ಸಂಘಟನೆಗಳ ನೇತೃತ್ವದಲ್ಲಿ ಮಂಜೇಶ್ವರ ಹೊಸಂಗಡಿ ಪೇಟೆ ಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕರ್ಷಕ ಸಂಘದ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದ ಪ್ರತಿಭಟನಾ ಮೆರವಣಿಗೆ ಯನ್ನು ಕಿಸಾನ್ ಸಭಾ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕೆ. ಕುಂಞಿಕಣ್ಣನ್ ಉದ್ಘಾಟಿಸಿ ಮಾತನಾಡಿದರು. ಸಿ. ಪಿ. ಐ ನೇತಾರ ರಾದ ಜಯರಾಮ ಬಳ್ಳಂಗು ಡೇಲು ಸ್ವಾಗತಿಸಿ, ನಾಯಕರಾದ ಕೆ. ಕಮಲಾಕ್ಷ, ಎಂ.ರಾಮಚಂದ್ರ,…

Read More

ದೇಶದ ಸ್ವಾತಂತ್ರ್ಯ ಸಂರಕ್ಷಣೆ ದೇಶ ಪ್ರೇಮಿಗಳ ಕರ್ತವ್ಯ – ನಿವೃತ್ತ ಸೇನಾನಿ ನಾರಾಯಣ ಶೆಟ್ಟಿ.

ಪೈವಳಿಕೆ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ, ದೇಶದ ಸೈನಿಕ ಶಕ್ತಿ ಓಪರೇಶನ್ ಸಿಂಧೂರ ಮೂಲಕ ಜಗತ್ತು ಕಂಡಿದೆ. ಉತ್ತರ ನೀಡಲು ಹೊರಟರೆ ಭಾರತದ ಶಕ್ತಿಯನ್ನು ಮನಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯರ್ ನಾರಾಯಣ ಶೆಟ್ಟಿ ಹೇಳಿದರು. ಬಾಯಿಕಟ್ಟೆ ಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವ ದಲ್ಲಿ ನಡೆದ ತಿರಂಗ ಯಾತ್ರೆ ಯನ್ನು ನಿವೃತ್ತ ಸೈನಿಕ ರಾದ ವಸಂತ್ ಕೃಷ್ಣ ಶರ್ಮ ಬಿಜೆಪಿ ಮಂಜೇಶ್ವರ ಮಂಡಲ…

Read More

ಕರ್ನಾಟಕದಿಂದ ಕೇರಳಕ್ಕೆ ಅನಧಿಕೃತವಾಗಿ ಸಾಗಾಟ ಮಾಡುತಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸೆರೆ ಹಿಡಿದ ಅಬಕಾರಿ ಪೊಲೀಸರು.ಇಬ್ಬರ ಬಂಧನ .

ಮಂಜೇಶ್ವರ : ಮಂಜೇಶ್ವರ ಅಬಕಾರಿ ಇಲಾಖೆ ಕರ್ನಾಟಕದಿಂದ ಕೇರಳಕ್ಕೆ ಅನಧಿಕೃತವಾಗಿ ಸಾಗಾಟ ಮಾಡುತಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆಫ್ಸಲ್ (32) ಹಾಗೂ ಅಶ್ರಫ್ (30) ಎಂಬ ಇಬ್ಬರನ್ನು ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ವಾಮಂಜೂರು ಚೆಕ್‌ಪೋಸ್ಟ್ ನಲ್ಲಿ ಕಾರು ತಪಾಸಣೆ ವೇಳೆ ಸೆರೆ ಹಿಡಿಯಲಾಗಿದೆ.. ಸಾಗಾಟ ಮಾಡುತ್ತಿದ್ದ ಕಾರಿನಿಂದ 214 ಕಿಲೋ ತೂಕದ ನಿಷಿದ್ಧ ತಂಬಾಕು ಉತ್ಪನ್ನಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ ಸುಮಾರು ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ.ಇದೇ ರೀತಿ…

Read More
error: Content is protected !!