ಮತಗಳ ಲೂಟಿ ವಿಚಾರ ಪುತ್ತಿಗೆ ಮಂಡಲ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಾಗೂ ಚುನಾವಣಾ ಆಯೋಗಕ್ಕೆ ಪತ್ರ.

ಮತಗಳ ಲೂಟಿ ವಿಷಯದಲ್ಲಿ ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಕೋರಿ ಲೋಕಸಭೆಯ ವಿರೋಧ ಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿ ಅವರು ಎತ್ತಿದ ಐದು ಪ್ರಶ್ನೆಗಳಿಗೆ ಉತ್ತರಗಳನ್ನು ಕೋರಿ ಪುತ್ತಿಗೆ ಮಂಡಲಂ ಯುವ ಕಾಂಗ್ರೆಸ್ ಚುನಾವಣಾ ಆಯುಕ್ತರಿಗೆ ಪುತ್ತಿಗೆ ಅಂಚೆ ಕಛೇರಿಯಿಂದ ಪತ್ರ ಕಳುಹಿಸಿ ಪ್ರತಿಭಟನೆ ಮಾಡಿದರು . ಯುವ ಕಾಂಗ್ರೆಸ್ ಪುತ್ತಿಗೆ ಮಂಡಲ ಅಧ್ಯಕ್ಷ ದಯಾನಂದ ಬಾಡೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಕೇಶವ SR ಉದ್ಘಾಟಿಸಿದರು.ನೇತಾರರಾದ ಮಂಜೇಶ್ವರ ಮಂಡಲ ಅಧ್ಯಕ್ಷ ಜುನೈದ್ ಉರ್ಮಿ,…

Read More

ಕುಂಬಳೆ ರೈಲ್ವೆ ನಿಲ್ದಾಣ ಪರಿಸರ ಸ್ವಚ್ಛಗೊಳಿಸಿದ ಮೂಹಿಮತ್ ಶಾಲಾ ವಿದ್ಯಾರ್ಥಿಗಳು.

ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪವಿದ್ದ ಕಾಡು, ಪೊದೆಗಳನ್ನು ಪುತ್ತಿಗೆ ಮೂಹಿಮತ್ ಹೈಯರ್ ಸೆಕೆಂಡರಿ ಶಾಲೆಯ ಲ್ಯಾಂಗ್ವೇಜ್ ಕ್ಲಬ್ ನ ವಿದ್ಯಾರ್ಥಿಗಳು ಸಂಪೂರ್ಣ ಸ್ವಚ್ಛಗೊಳಿಸಿದರು. ನಿಲ್ದಾಣ ಪರಿಸರದಲ್ಲಿ ಸುತ್ತಲೂ ಕಾಡು ಪೊದೆ ಅವರಿಸಿದ ಕಾರಣ ಪ್ರಯಾಣಿಕರಿಗೆ ನಿಲ್ಲಲು ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಈ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯವನ್ನು ರೈಲ್ವೆ ಅಧಿಕಾರಿಗಳು ಮತ್ತು ಪ್ರಯಾಣಿಕರು ಶ್ಲಾಗಿಸಿದರು. ವಿದ್ಯಾರ್ಥಿಗಳ ಜೊತೆ ಶಿಕ್ಷಕರಾದ ದೇವರಾಜ್, ಆಶಾಲತಾ, ರಾಜೇಶ್ವರಿ ಜೊತೆಗಿದ್ದರು.

Read More

ಸ್ಥಳೀಯಾಡಳಿತ ಚುನಾವಣೆ ವಾರ್ಡ್ ವಿಭಜನೆ ಪೂರ್ಣ -ಕಾಸರಗೋಡಿನಲ್ಲಿ ವಾರ್ಡುಗಳ ಸಂಖ್ಯೆ 725ಕ್ಕೆ ಏರಿಕೆ

ಕಾಸರಗೋಡು : ಸ್ಥಳೀಯಾಡಳಿತ ಚುನಾವಣಾ ಪೂರ್ವಭಾವಿ ವಾರ್ಡು ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ವಾರ್ಡುಗಳ ಸಂಖ್ಯೆ 725ಕ್ಕೇರಿದೆ. ಈ ಹಿಂದೆ ಜಿಲ್ಲೆಯಲ್ಲಿ 664 ವಾರ್ಡುಗಳಿದ್ದುವು. ವಾರ್ಡು ವಿಭಜನೆಯ ಬಳಿಕ ನೂತನವಾಗಿ 61ವಾರ್ಡುಗಳು ಹೆಚ್ಚಳಗೊಂಡಿವೆ. ನೂತನ ವಾರ್ಡುಗಳ ಡಿಜಿಟಲ್ ಭೂಪಟವನ್ನೂ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿದ್ದ 83 ಬ್ಲಾಕ್ ಪಂ. ವಾರ್ಡುಗಳ ಸಂಖ್ಯೆ 92ಕ್ಕೇರಿದೆ. 113ನಗರಸಭಾ ವಾರ್ಡುಗಳು 120ಕ್ಕೇರಿವೆ. 17ಜಿ.ಪಂ.ವಾರಡುಗಳು 18 ಆಗಿವೆ. ಒಟ್ಟು ಜಿಲ್ಲೆಯ ತ್ರಿಸ್ತರ ಪಂಚಾಯತಿನಲ್ಲಿ ಹಿಂದೆ 877ವಾರ್ಡುಗಳಿದ್ದುವು. ಈಗ ಇದು 955ಕ್ಕೇರಿದೆ. ಒಟ್ಟು ಕೇರಳದಲ್ಲಿ…

Read More

ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ (ರಿ) ಪಾವೂರು.ಮೊಸರು ಕುಡಿಕೆ ಉತ್ಸವ 15 ರಂದು.

ಪಾವೂರು: ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ (ರಿ) ಬಜಾಲ್, ಪಾವೂರು ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ತಾರೀಕು 15/೦8/25ರಂದು ಶುಕ್ರವಾರ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿರುವುದು. ಬೆಳಿಗ್ಗೆ 10 ಗಂಟೆಗೆ ಮೊಸರು ಕುಡಿಕೆ ಕಾರ್ಯಕ್ರಮವನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಮನೋಹರ್ ಶೆಟ್ಟಿ ಕೆದುಂಬಾಡಿ ಉದ್ಘಾಟಿಸಲಿರುವರು. ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು. ಸಂಜೆ 5ಕ್ಕೆ ಸಮರೋಪ ಸಭಾ ಕಾರ್ಯಕ್ರಮದಲ್ಲಿ…

Read More

‘ಅಪ್ಪೆ ಪಾಷಣಮೂರ್ತಿಗ್ ಸುಗಿಪುದ ತುಡರ ಬೊಲ್ಪು’ ತುಳು ಭಕ್ತಿಗೀತೆ ಶೀಘ್ರದಲ್ಲಿ ಬಿಡುಗಡೆ

‘ಸು ಫ್ರಮ್ ಸೊ’ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಅಭಿನಯದ ಶಿವಂ ಕ್ರಿಯೇಷನ್ಸ್ ಅರ್ಪಣೆ ಮಾಡುವ, ಶೆಟ್ಟಿ ಅಜಯ್ ರಾಜ್ ಸಾಹಿತ್ಯದ,ಭರತ್ ಗಟ್ಟಿ ಗಾಯನದ,ಉದಯ್ ಕುಮಾರ್ ಬೇಕೂರು ನಿರ್ದೇಶನದ ‘ಅಪ್ಪೆ ಪಾಷಣಮೂರ್ತಿಗ್ ಸುಗಿಪುದ ತುಡರ ಬೊಲ್ಪು’ ತುಳು ಭಕ್ತಿಗೀತೆ ಶೀಘ್ರದಲ್ಲಿ ಬಿಡುಗಡೆ ಗೊಳ್ಳಲಿದೆ.ರಕ್ಷಿತ್ ಇದರ ಸಂಕಲನ ಮತ್ತು ಛಾಯಾಗ್ರಹಣ ಮಾಡಿದ್ದಾರೆ.

Read More

ಮಂಜೇಶ್ವರ-ವಾಮಂಜೂರು ಹೆದ್ದಾರಿ: ಚೆಕ್‌ಪೋಸ್ಟ್ ಬಳಿ ಸೇತುವೆ ಭಾಗದಲ್ಲಿ ಧ್ವಿಪಥ ಮಾತ್ರ – ಸಾರ್ವಜನಿಕರ ಆಕ್ರೋಶ

ಮಂಜೇಶ್ವರ – ನೂತನವಾಗಿ ನಿರ್ಮಾಣಗೊಂಡ ತಲಪಾಡಿ–ಕಾಲಿಕಡವ್ ರಾಷ್ಟ್ರೀಯ ಹೆದ್ದಾರಿ (ಷಟ್ಪಥ ರಸ್ತೆ)ಯ ಮಂಜೇಶ್ವರ ವಾಮಂಜೂರು ಚೆಕ್‌ಪೋಸ್ಟ್ ಸಮೀಪದ ಸೇತುವೆ ಭಾಗವನ್ನು ಮಾತ್ರ ಧ್ವಿಪಥ ರಸ್ತೆಗೆ ಸೀಮಿತಗೊಳಿಸಿ ನಿರ್ಮಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸರ್ವೀಸ್ ರಸ್ತೆ ಕೂಡಾ ಅಳವಡಿಕೆ ಮಾಡದೇ ಇರುವ ನಿರ್ಲಕ್ಷ್ಯ ಕಾಮಗಾರಿ ಜನರ ದಿನನಿತ್ಯದ ಸಂಚಾರಕ್ಕೆ ಭಾರೀ ತೊಂದರೆಯನ್ನು ಉಂಟುಮಾಡಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಶ್ರೇಣಿಯೊಳಗೆ ಹೆಚ್ಚಿನ ಭಾಗಗಳನ್ನು ಷಟ್ಪಥ ರೀತಿಯಲ್ಲಿ ರೂಪಿಸಲಾಗಿದ್ದು, ಆದರೆ ಮಂಜೇಶ್ವರ ಚೆಕ್‌ಪೋಸ್ಟ್ ಸಮೀಪದ ಸೇತುವೆ ಪ್ರದೇಶದಲ್ಲಿ…

Read More

ಕಣ್ವತೀರ್ಥ ಶ್ರೀ ಆಂಜನೇಯ ಫ್ರೆಂಡ್ಸ್ ಕ್ಲಬ್ ನ ನೂತನ ಪಧಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಕಣ್ವತೀರ್ಥ ಶ್ರೀ ಆಂಜನೇಯ ಫ್ರೆಂಡ್ಸ್ ಕ್ಲಬ್ ನ 2025 -26 ನೇ ಸಾಲಿನ ನೂತನ ಪಧಾಧಿಕಾರಿಗಳನ್ನು ಆರಿಸಲಾಯಿತು. ಗೌರವ ಅಧ್ಯಕ್ಷರಾಗಿ ಗಣೇಶ್ ಅಪ್ಪಿ , ಗೌರವ ಸಲಹೆಗಾರರಾಗಿ ಹರೀಶ್ ಕೊಳಕೆ , ಅಧ್ಯಕ್ಷರಾಗಿ ಸುನಿಲ್ ಕಣ್ವತೀರ್ಥ , ಉಪಾಧ್ಯಕ್ಷರಾಗಿ ಧನರಾಜ್ ಮಂಜೇಶ್ವರ ಪ್ರ. ಕಾರ್ಯದರ್ಶಿಯಾಗಿ ಲತೀಶ್ , ಜೊತೆ ಕಾರ್ಯದರ್ಶಿಯಾಗಿ ನಿಖಿಲ್ , ಕೋಶಾಧಿಕಾರಿಯಾಗಿ ಅಶ್ವಿನ್ , ಲೆಕ್ಕ ಪರಿಶೋಧಕರಾಗಿ ಧೀರಜ್ , ಕ್ರೀಡಾ ಕಾರ್ಯದರ್ಶಿಯಾಗಿ ಸೂರಜ್ , ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಕಿಶೋರ್ ,…

Read More

ಮಂಜೇಶ್ವರದ ಹಲವೆಡೆ ಬೀದಿ ನಾಯಿಗಳ ಹಾವಳಿ-ಸಾರ್ವಜನಿಕರಲ್ಲಿ ಆತಂಕ

ಮಂಜೇಶ್ವರ : ಮಂಜೇಶ್ವರದ ಹಲವೆಡೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜಕರಲ್ಲಿ ವಿಶೇಷವಾಗಿ ಪೋಷಕರಲ್ಲಿ ಭಾರೀ ಆತಂಕ ಹುಟ್ಟಿಸಿದೆ. ಮನೆಯಿಂದ ಮಕ್ಕಳನ್ನು ಶಾಲೆಗೆ ಅದೇ ರೀತಿ ಮದ್ರಸ ಅದೇ ರೀತಿ ಇನ್ನಿತರ ಅವಶ್ಯಕತೆಗೆ ಹೊರಗೆ ಕಳಿಸಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಶಾಲೆಗೆ ಹೋಗುವ ವೇಳೆ ಅಥವಾ ಆಟವಾಡಲು ಹೊರ ಹೋಗುವ ವೇಳೆ, ಶಾಲಾ ಮದ್ರಸಗಳಿಗೆ ತೆರಳುತ್ತಿರುವಾಗ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುವುದು ನಿತ್ಯ ದರ್ಶನವಾಗಿದೆ. ಬಾನುವಾರದಂದು ಮಂಜೇಶ್ವರದಲ್ಲಿ ಎರಡು…

Read More

ಕುಬಣೂರು ಸೇತುವೆ ಬಳಿ ರಸ್ತೆಯ ಶೋಚನೀಯಾವಸ್ಥೆ .,ಸೇತುವೆ ಇಕ್ಕೆಡೆಗಳಲ್ಲಿ ಕುಸಿತದ ಭೀತಿ

ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತಿನ ಕುಬಣೂರು ಸೇತುವೆ ಸಮೀಪದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸೇತುವೆಯ ಎರಡು ಬದಿಗಳು ಕುಸಿಯುವ ಭೀತಿಯಲ್ಲಿದೆ. ಈ ರಸ್ತೆಯಿಂದ ರಾತ್ರಿ ಸಮಯಗಳಲ್ಲಿ ಮರಳು ತುಂಬಿದ ಘನ ಗಾತ್ರದ ಲಾರಿಗಳು ಇಲ್ಲಿಂದ ಸಂಚರಿಸುವ ಕಾರಣ ರಸ್ತೆಗಳು ಸಂಪೂರ್ಣ ಹದ ಗೆಟ್ಟಿರಬಹುದೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಬೇಕೂರು ಶಾಂತಿಗುರಿಯಿಂದ ಪಚ್ಚoಬಲ ಸಂಪರ್ಕಿಸುವ ಸೇತುವೆ ಇದಾಗಿದ್ದು , ಕುಬಣೂರು ಪರಿಸರದಲ್ಲಿ ವಿದ್ಯಾಸಂಸ್ಥೆಗಳು ಮತ್ತು ಗ್ರಾಮಾಧಿಕಾರಿ ಕಚೇರಿ , ಅಂಗನವಾಡಿ ವಿವಿಧ ಆರಾಧನಾ ಮಂದಿರಗಳು ಕಾರ್ಯಾಚರಿಸುತ್ತಿದ್ದು ವಿದ್ಯಾರ್ಥಿಗಳನ್ನು ಹೊತ್ತ ಶಾಲಾ…

Read More

ಮಹಾವಿಷ್ಣು ಮೂರ್ತಿ ದೇವಸ್ಥಾನ ಸುಳ್ಯಮೆ ವರ್ಕಾಡಿಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ

ಮಹಾವಿಷ್ಣು ಮೂರ್ತಿ ದೇವಸ್ಥಾನ ಸುಳ್ಯಮೆ ವರ್ಕಾಡಿ ದೇವಸ್ಥಾನದಲ್ಲಿ ದೇವರಿಗೆ ಪೂಜೆಯ ನಂತರ ದೇವಸ್ಥಾನದ ವಠಾರದಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ಮಹಾವಿಷ್ಣು ಮೂರ್ತಿ ಯುವಕ ಮಂಡಳಿ ಹಾಗೂ ಊರಿನ ಮಹಿಳಾ ಹಾಗೂ ಭಕ್ತರ ಸಹಕಾರದೊಂದಿಗೆ ನಡೆಯಿತು. ಊರಿನ ಮಹಿಳೆಯರು ಬಗೆ ಬಗೆಯ ತಿಂಡಿ ತಿನಿಸು ತಯಾರಿಸಿ ತಂದು ಭಕ್ತರಿಗೆ ಉಣಬಡಿಸಿದರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತ ಸಾಮಾನಿ ಸುಳ್ಯಮೆ ಅವರು ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು…

Read More
error: Content is protected !!