ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಮೊದಲ ದಿನವೇ ಕಣ್ತುಂಬಿಕೊಂಡ 1.36 ಲಕ್ಷ ಭಕ್ತರು…. !

ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ ಯಾತ್ರೆ ಸೋಮವಾರದಿಂದ ವಿಧ್ಯುಕ್ತ ವಾಗಿ ಆರಂಭವಾಯಿತು. ಮೊದಲ ದಿನವೇ 1.36 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದರು. ಸೋಮವಾರ ಶಬರಿಮಲೆ ಋತುವಿನ ಆರಂಭದ ದಿನವಾದ್ದರಿಂದ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಭಾನುವಾರ ಸಂಜೆಯೇ ದೇಗುಲದ ಬಾಗಿಲು ತೆರೆಯಲಾಗಿದ್ದು, ಸೋಮವಾರದಿಂದ 41 ದಿನಗಳ ಮಂಡಲ ಯಾತ್ರೆಗೆ ಚಾಲನೆ ನೀಡಲಾಯಿತು.ಈ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಮಂದಿ ಯಾತ್ರೆ ಕೈಗೊಂಡು…

Read More

ರಾಜ್ಯಮಟ್ಟದ‌ ಆಟೋಟ ಸ್ಪರ್ಧೆಯಲ್ಲಿ ಮಿಂಚಿದ ಪೃಥ್ವಿನ್ ಪ್ರಭು

ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯ ವಿದ್ಯಾರ್ಥಿ ಪೃಥ್ವಿನ್ ಪ್ರಭು ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ 600ಮೀಟರ್ ಓಟದಲ್ಲಿ ಐದನೇ ಸ್ಥಾನವನ್ನು ಪಡೆದು ಶಾಲೆ ಕೀರ್ತಿ ತಂದಿದ್ದಾನೆ. ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಮಾತ್ರವಲ್ಲ ಕಾಸರಗೋಡು ತಂಡ ರನ್ನರ್ಸ್ ಆಗಿ ಹೊರ ಹೊಮ್ಮಿದೆ.ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ, ಅಭಿನಂದನೆಗಳನ್ನು ಸಲ್ಲಿಸಿದರು.

Read More

ರಾಜ್ಯಮಟ್ಟದ ಗಣಿತ ಶಾಸ್ತ್ರೋತ್ಸವದಲ್ಲಿ ದ್ವಿತೀಯ ರನ್ನರಪ್ ಪ್ರಶಸ್ತಿ ಮುಡಿಗೇರಿಸಿದ ಎಸ್ ಎ ಟಿ ವಿದ್ಯಾಸಂಸ್ಥೆ

ಮಂಜೇಶ್ವರ: ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯ ಪ್ರೌಢ ಶಾಲಾ‌ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಗಣಿತ ಶಾಸ್ತ್ರೋತ್ಸವದಲ್ಲಿ ಭಾಗವಹಿಸಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ರಾಜ್ಯ ಮಟ್ಟದ ಗಣಿತ ಪಝಲ್ ವಿಭಾಗದಲ್ಲಿ ಧನ್ಯ ಸಿ ಐಲ್ ದ್ವಿತೀಯ ಸ್ಥಾನದೊಂದಿಗೆ ಎ ಗ್ರೇಡ್, ನಂಬರ್ ಚಾರ್ಟ್ ವಿಭಾಗದಲ್ಲಿ ಚೈತ್ರಿಕಾ ಎಮ್ ಎ ಗ್ರೇಡ್, ಗ್ರೂಪ್ ಪ್ರೊಜೆಕ್ಟ್ ನಲ್ಲಿ ಅನುಶ್ರೀ ಮತ್ತು ಶೃಷ್ಠಿ ಶೆಟ್ಟಿ ಎ ಗ್ರೇಡ್, ಅದರ್ ಚಾರ್ಟ್ ವಿಭಾಗದಲ್ಲಿ ವರ್ಷ ಜಿ.ಕೆ ಎ ಗ್ರೇಡ್,…

Read More

ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಎಸ್ ಎ ಟಿ ಶಾಲಾ ವಿದ್ಯಾರ್ಥಿಗಳು

ತಿರುವನಂತಪುರದಲ್ಲಿ ಜರಗಿದ ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್ ಎ ಟಿ ಪ್ರೌಢಶಾಲೆಯ ಅದ್ವೈತ್ ಮತ್ತು ದೈವಿಕ್ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಕರಿಸಿ ಉತ್ತಮ ಪ್ರದರ್ಶನವನ್ನು ನೀಡಿದರು. ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಗಳನ್ನು ಸಲ್ಲಿಸಿದರು.

Read More

ಎಲ್ ಡಿ ಎಫ್ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಾವೇಶ

ಮ0ಜೇಶ್ವರ : ಎಲ್ ಡಿ ಎಫ್ ಮಂಜೇಶ್ವರ ಪಂಚಾಯತ್ ಸಮಾವೇಶ ಟಿವಿ ತೋಮಸ್ ಹಾಲ್ ನಲ್ಲಿ ನಡೆಯಿತು. ಸಮಾವೇಶವನ್ನು ಸಿಪಿಐ ಎಂ ರಾಜ್ಯ ಸಮಿತಿ ಸದಸ್ಯ ಕೆ ಆರ್ ಜಯಾನಂದ ಉದ್ಘಾಟಿಸಿದರು.ಸಿಪಿಐ ನೇತಾರ ದಯಾಕರ ಮಾಡ ಅಧ್ಯಕ್ಷತೆ ವಹಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್, ಜೆ ಡಿ ಎಸ್ ನೇತಾರ ಡಾ. ಖಾದರ್, ಸಿಪಿಐ ನೇತಾರರಾದ ಎಸ್ ರಾಮಚಂದ್ರ ಬಡಾಜೆ, ಶ್ರೀಧರ್ ಮಾಡ,ಸಿಪಿಐ ಎಂ ನೇತಾರರಾದ ಅಶ್ರಫ್ ಕುಂಜತ್ತೂರ್, ಕರುಣಾಕರ ಶೆಟ್ಟಿ ಮೊದಲಾದವರು ಸಮಾವೇಶ…

Read More

ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಾವೇಶ :

ಮೀಯಪದವು : ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಾವೇಶವು ಮೀಯಪದವು ನಾರಾಯಣ ಅಡ್ಯಾಂತ್ತಾಯ.ಸ್ಮಾರಕ ಮಂದಿರದಲ್ಲಿ ನಡೆಯಿತು. ಸಿಪಿಎಂ ಹಿರಿಯ ನೇತಾರ ಕಾಂ : ಬಾಳಪ್ಪ ಬಂಗೇರರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಂ : ಬೇಬಿ ಬಾಲಕೃಷ್ಣನ್ ಸಮಾವೇಶವನ್ನು ಉದ್ಘಾಟಿಸಿದರು. ಸಿಪಿಐ ದೇಶೀಯ ಸಮಿತಿ ಸದಸ್ಯರಾದ ಕಾಂ : ಗೋವಿಂದನ್ ಪಳ್ಳಿಕಾಪಿಲ್, ಎಲ್ ಡಿ ಎಫ್ ಮಂಜೇಶ್ವರ ಮಂಡಲ ಸಮಿತಿ ಕನ್ವೀನರ್ ಕಾಂ : ಜಯರಾಮ ಬಲ್ಲoಗುಡೆಲ್, ಸಿಪಿಎಂ ನೇತಾರೆ, ಕಡoಬಾರ್ ಬ್ಲಾಕ್ ಡಿವಿಷನ್…

Read More

ಭಾಷೆ ಬಳಕೆಯಿಂದ ಬೆಳೆಯುತ್ತದೆ – ಡಾ. ಇಂಚರ ನಾರಾಯಣ ಸ್ವಾಮಿ

ಕಾಸರಗೋಡು : ಗಡಿನಾಡಿನ ಕನ್ನಡಿಗರ ಭಾಂದವ್ಯವು ಪರಸ್ಪರ ಚಿರಕಾಲದ ಅನುಬಂಧವಾಗಬೇಕು. ನಮ್ಮ ಮಕ್ಕಳಿಗೆ ಅಂಕ ಶಿಕ್ಷಣದ ಜತೆಗೆ ಕನ್ನಡ ಸಂಸ್ಕೃತಿಯ ಶಿಕ್ಷಣವನ್ನೂ ನೀಡಬೇಕು. ಕನ್ನಡ ಭಾಷೆಯ ಬಳಕೆ ಹೆಚ್ಚಾದಾಗ ಭಾಷೆಯು ಸ್ವಯಂ ಜಾಗೃತಿಯಾಗಿ ಬೆಳೆಯುತ್ತದೆ’ ಎಂದು ಕೋಲಾರದ ರಂಗ ಇಂಚರ ಟ್ರಸ್ಟಿನ ಅಧ್ಯಕ್ಷ ಡಾ. ಇಂಚರ ನಾರಾಯಣ ಸ್ವಾಮಿ ಹೇಳಿದರು. ಅವರು ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಶನಿವಾರ ಕಾಸರಗೋಡಿನ ಕನ್ನಡ ಭವನ, ಕನ್ನಡ ಭವನ…

Read More

ಬಂದ್ಯೋಡ್ ರಾ.ಹೆದ್ದಾರಿಯಲ್ಲಿ ಕಾರುಗಳ ಮಧ್ಯೆ ಡಿಕ್ಕಿ : ಮಹಿಳೆ ಸಾವು : ನಾಲ್ಕು ಮಂದಿಗೆ ಗಾಯ

ಮಂಜೇಶ್ವರ : ಬಂದ್ಯೋಡ್ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾರ್ ಕಾರಿನ ಹಿಂಬಾಗಕ್ಕೆ ಆಲ್ಟೋ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಐದು ಮಂದಿ ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕಾಸರಗೋಡು ಭಾಗದಿಂದ ತಲಪಾಡಿ ಭಾಗಕ್ಕೆ ಆಗಮಿಸುತ್ತಿದ್ದ ಎರಡೂ ವಾಹನಗಳು ಬಂದ್ಯೋಡ್ ಮುಟ್ಟಂ ನಲ್ಲಿ ಬಾನುವಾರ ರಾತ್ರಿ 7.45 ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಮಚ್ಚಂಪ್ಪಾಡಿ ನಿವಾಸಿ ಹುಸೈನ್ ಸಹದಿಯವರ ಪತ್ನಿ ಮಿರ್ಜಾನ (28) ಸಾವನ್ನಪ್ಪಿದ್ದಾರೆ. ಜೊತೆಯಾಗಿದ್ದ ಹುಸೈನ್ ಸಹದಿ(34)…

Read More

ಕನ್ನಡ ಭವನದಲ್ಲಿ ಕೋಲಾರ – ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ ನ.15ರಂದು

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಮತ್ತು ಬಿ ಶಿವಕುಮಾರ ನೇತೃತ್ವದ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿ ಆಶ್ರಯದಲ್ಲಿ ನ.15ರಂದು ಬೆಳಗ್ಗೆ 10ರಿಂದ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ವೇದಿಕೆಯಲ್ಲಿ ಕೋಲಾರ-ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಸಂಭ್ರಮ-2025 ನಡೆಯಲಿದೆ. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ದೀಪ ಬೆಳಗಿಸಿ, ಪ್ರಾಸ್ತಾವಿಕವಾಗಿ ಮಾತನಾಡುವರು. ಕೋಲಾರದ ಪಿ. ನಾರಾಯಣಪ್ಪ ಕನ್ನಡ ಧ್ವಜಾರೋಹಣದೊಂದಿಗೆ…

Read More

ಕುಲಾಲ ವೇದಿಕೆ ಮಂಜೇಶ್ವರ-ಉಚಿತ ವೈದ್ಯಕೀಯ, ಶಿಬಿರ ಹೃದಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

ಮಂಜೇಶ್ವರ: ಕುಲಾಲ ವೇದಿಕೆ ಮಂಜೇಶ್ವರ ಹೊಸಬೆಟ್ಟು ಮಂಜೇಶ್ವರ ಇದರ ವತಿಯಿಂದ ಕುಲಾಲ ವೇದಿಕೆಯ ಹಿರಿಯ ಮಾರ್ಗದರ್ಶಕರಾಗಿದ್ದ ದಿ. ಜಯಂತಮಾಸ್ಟರ್ ಮೀಯಪದವು ಹಾಗೂ ದಿ.ಸೋಮಶೇಖರ ಬಡಾಜೆ ಇವರ ಸ್ಮರಣಾರ್ಥದಲ್ಲಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಹಾಗು ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ , ಹೃದಯ ತಪಾಸಣಾ ಶಿಬಿರ ಬಿಪಿ , ಶುಗರ್ ಹೃದಯ ತಪಾಸಣೆ, ಇಸಿಜಿ , ಸಾಮಾನ್ಯ ಔಷದಿಯ ವಿಭಾಗ ಅರೋಗ್ಯ ಕಾರ್ಡ್ ಹಾಗು ಬಡ ರೋಗಿಗಳ…

Read More
error: Content is protected !!