ಡಾ. ಸದಾಶಿವ ಶೆಟ್ಟಿ ಪ್ರಾಯೋಜಕತ್ವದ ಉಚಿತ ವಿಮೆ ಪಾಲಿಸಿ ವಿತರಣಾ ಕಾರ್ಯಕ್ರಮ:

ಮಂಜೇಶ್ವರ : ತನ್ನ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸಬೇಕು, ಆ ನಿಟ್ಟಿನಲ್ಲಿ ಸಮಾಜದಲ್ಲಿರುವ ಅಶಕ್ತರ ಪಾಲಿಗೆ ಬೆಳಕಾಗಬೇಕೆಂದು ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿಯವರ ಕನಸಿನ ಕೂಸಾದ ಉಚಿತ ಆರೋಗ್ಯ ವಿಮೆ/ ಅಪಘಾತ ವಿಮೆಯ ಯೋಜನೆಯು ಈಗಾಗಲೇ ಕೈಗೂಡಿದ್ದು ಇದರ ಅಪಘಾತ ವಿಮಾ ಪಾಲಿಸಿ ವಿತರಣೆ ಚಿಗುರುಪಾದೆಯಲ್ಲಿರುವ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ಕಚೇರಿಯಲ್ಲಿ ಜರಗಿತು. ಕುಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ…

Read More

ಕೊಂಡೆವೂರು ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ.ಶಾಸ್ತ್ರ ಮತ್ತು ಶಸ್ತ್ರ ಕ್ಕೆ ಅವಿನಾಭಾವ ಸಂಬಂಧ ಇದೆ :ಅಜಿತ್ ಹನುಮಕ್ಕ ನವರ್

ಉಪ್ಪಳ :ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ವನ್ನು ಆಚರಿಸಲಾಯಿತು . ಕಾರ್ಯಕ್ರಮವನ್ನು ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿ ಆಶೀರ್ವಚನ ನೀಡಿದರು.ಈ ಸಂಧರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕ ನವರು ಮುಖ್ಯ ಭಾಷಣ ಮಾಡುತ್ತಾ ಭಾರತೀಯ ಸೇನೆ ಪ್ರಪಂಚದ ಅತ್ಯುನ್ನತ ನೈತಿಕತೆಯ ಸೇನೆಯಾಗಿದ್ದು ನಾವೆಲ್ಲಾ ಸುರಕ್ಷಿತ ವಾಗಿರುವುದಕ್ಕೆ ಭಾರತೀಯ ಯೋಧರ ನಿಷ್ಕಳಂಕ ಸೇವೆಯೇ ಕಾರಣವೆಂದರು. ನಮ್ಮ…

Read More

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ- ಕಾಂಗ್ರೆಸ್ ಆಶಾವಾದ

ವಾರ್ಡ್ ಮರು ನಿರ್ಣಯದಲ್ಲಿ ಸಿಪಿಎಂ ಯಾವ ಕೀಳು ರಾಜಕೀಯ ಆಟವಾಡಿದರೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಾಜ್ಯದಾದ್ಯಂತ ಉತ್ತಮ ಸಾಧನೆಗೈಯಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಎಡರಂಗದ ದುರಾಡಳಿತದಿಂದ ಬೇಸತ್ತ ಜನಸಾಮಾನ್ಯರು ಸಿಪಿಎಂಗೆ ಸರಿಯಾದ ಉತ್ತರ ಕೊಡುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಜನತೆಯ ರೋಷ ಈ ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ಅವರು ಹೇಳಿದ್ದಾರೆ. ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಉದ್ಘಾಟಿಸಿ ಅವರು…

Read More

ಪ್ರಶಾಂತಿ ವಿದ್ಯಾಕೇಂದ್ರ, ಬಾಯಾರು: ಕಾರ್ಗಿಲ್ ವಿಜಯ ದಿವಸ ಆಚರಣೆ

ಭಾರತೀಯ ಸೇನೆಯ ವೀರಯೋಧರ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸಿ ಅವರನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯನ್ನರ್ಪಿಸಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಮನೋಭಾವನೆ ಬೆಳೆಸುವ ಉದ್ದೇಶದಿಂದ ಪ್ರಶಾಂತಿ ವಿದ್ಯಾಕೇಂದ್ರ, ಬಾಯಾರು ಮತ್ತು ಇಲ್ಲಿನ ಸಮಾಜ ವಿಜ್ಞಾನ ಸಂಘ ‘ಸಮಷ್ಟಿ’ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಶ್ರೀ ಸುರೇಶ್ ಕೆ. ಸೇನೆಯಲ್ಲಿನ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ, ರಾಷ್ಟ್ರ ಸೇವೆಯ ಮಹತ್ತ್ವವನ್ನು ವಿವರಿಸಿದರು. ಪ್ರತಿಯೊಬ್ಬರು…

Read More

ನಮ್ಮ ಮೀಡಿಯಾ 24×7 ವರದಿಗೆ ಫಲ ಶ್ರುತಿ. ಮಂಜೇಶ್ವರ ಸರ್ವಿಸ್ ರಸ್ತೆ ಬಳಿ ಇದ್ದ ಬಸ್ ನಿಲ್ದಾಣದ ಸಮೀಪವಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ತಡೆ ಬೇಲಿ ನಿರ್ಮಿಸಿದ ವಿದ್ಯುತ್ ಇಲಾಖೆ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಎದುರು ರಾಗಂ ಜಂಕ್ಷನ್ ರಾಷ್ಟ್ರೀಯ ಷಟ್ಪಥ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ತಡಬೇಲಿ ಇಲ್ಲದೆ ಸ್ಥಾಪಿಸಲಾಗಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಾರ್ವಜನಿಕರಲ್ಲಿ ಭೀತಿಯ ವಾತಾವರಣಕ್ಕೆ ಕಾರಣವಾಗಿತ್ತು. ಈ ಸುದ್ದಿ ನಮ್ಮ ಮೀಡಿಯಾ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಬಳಿಕ, ವಿದ್ಯುತ್ ಇಲಾಖೆ ತಕ್ಷಣ ಸ್ಪಂಧಿಸಿ ಶನಿವಾರದಂದು ಬೆಳಿಗ್ಗೆ ತಾತ್ಕಾಲಿಕ ತಡೆಬೇಲಿ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದೆ. ನಮ್ಮ ಮೀಡಿಯಾ ದೃಶ್ಯ ಮಾಧ್ಯಮದಲ್ಲಿ ಈ ಬಗ್ಗೆ ವರದಿ…

Read More

ಧರೆಗುರುಳಿದ ಶತಾಯುಷಿ ಬೃಹತ್ ಮರ.ತಪ್ಪಿದ ಭಾರೀ ಅನಾಹುತ

ಕಾಸರಗೋಡು:ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ ಬರುವ ಚಾಮುಂಡಿಕುನ್ನು ಪರಿಸರದಲ್ಲಿ ವ್ಯಾಪಕವಾಗಿ ಸುರಿದ ಮಳೆ ಹಾಗೂ ಬಲವಾಗಿ ಬೀಸಿದ ಗಾಳಿಯ ಪರಿಣಾಮ ಚಿತ್ತಾರಿ ವಿಲೇಜ್ ಆಫೀಸ್ ಬಳಿಯ ಬೃಹತ್ ತ್ತಾದ ಮರವೊಂದು ಧರೆಗೆ ಉರುಳಿದೆ . ಪರಿಣಾಮ ಕಾರೊಂದು ಜಕ್ಕಮ್ ಆಗಿದೆ ಜೊತೆಗೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ರೆಂಬೆ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರೋಡ್ ಗೆ ಬಿದ್ದಿದೆ . ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು . ಕೆಲ ದಿನಗಳ ಹಿಂದೆ ಈ ಮರವನ್ನು…

Read More

ಮಂಜೇಶ್ವರದ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ಧಾರಾಶಾಯಿ.ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸರಿಪಡಿಸಿದ ವಾರ್ಡ್ ಸದಸ್ಯೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 7ನೇ ವಾರ್ಡ್ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ರಸ್ತೆಗೆ ಬಿದ್ದು ಸುಮಾರು ವಾರಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದಿನನಿತ್ಯದ ಓಡಾಟದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯರಿಗೆ ಬಹಳ ಅಡಚಣೆಯಾಗಿತ್ತು. ರಸ್ತೆಗೆ ಅಡ್ಡವಾಗಿ ಬಿದ್ದ ಈ ಮರ, ಸ್ಥಳೀಯ ನಿವಾಸಿಗಳ ಮತ್ತು ವಾಹನ ಸವಾರರ ಸಂಚಾರಿ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತ್ತು. ಸಂಬಂಧಿತ ಇಲಾಖೆಗಳಿಂದ ನಿರೀಕ್ಷಿಸಿದ ನೆರವು ತಡವಾಗುತ್ತಿದ್ದ ಸಂದರ್ಭದಲ್ಲಿ 7ನೇ ವಾರ್ಡ್‌ನ ಸದಸ್ಯೆ ಶ್ರೀಮತಿ ರುಬೀನಾ ಅವರು ಮುಂದಾಗಿದ್ದು, ಊರಿನ ಯುವಕರು ಹಾಗೂ…

Read More

ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಾಳೆ

ಉಪ್ಪಳ :ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಾಳೆ ನಡೆಯಲಿದೆ.ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿ ಆಶೀರ್ವಚನ ನೀಡುವರು.ಈ ಸಂಧರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕ ನವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಗಿಲ್ ಯುದ್ಧ ವೀರ ಹವಲ್ದಾರ್ ಜಾನಿ ಮಾಥು ರಾಜಪುರಂ ಉಪಸ್ಥಿತರಿರುವರು, ಬ್ರಿಗೇಡಿಯರ್ ಐ.ಎನ್.ರೈ ಕುಂಬಳೆ, ಕಮಾಂಡರ್…

Read More

ತ್ರಿಸ್ತರ ಸ್ಥಳೀಯಾಡಳಿತ ಚುನಾವಣೆ : ಅಗೋಸ್ಟ್ 30 ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಕಾಸರಗೋಡು: ಮುಂಬರುವ ಸ್ಥಳೀಯಾಡಳಿತ ಚುನಾವಣೆಯ ಮತದಾರರ ಅಂತಿಮ ಪಟ್ಟಿ ಅಗೋಸ್ಟ್ 30 ಕ್ಕೆ ಪ್ರಕಟಗೊಳ್ಳಲಿದೆ.ಈಗಾಗಲೇ ಪೂರ್ವ ಭಾವಿ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದೆ. 1034 ಸ್ಥಳೀಯಾಡಳಿತ ಸಂಸ್ಥೆಗಳ 20,998 ವಾರ್ಡುಗಳಲ್ಲಿ ಒಟ್ಟು 2,66,78,256 ಮತದಾರರಿದ್ದಾರೆ. ಈಪೈಕಿ 1,26,32,186 ಮಂದಿ ಪುರುಷರು , 1,40,45,837ಮಂದಿ ಮಹಿಳೆಯರಾಗಿದ್ದಾರೆ. 233ಮಂದಿ ಟ್ರಾನ್ಸ್ಜೆಂಡರ್ಸ್ ಇದ್ದಾರೆ. ಆಗಸ್ಟ್ 7ರ ತನಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇದೆ. 2025 ಜನವರಿ 1ರೊಳಗೆ 18ವಯಸ್ಸು ಪೂರ್ಣಗೊಂಡವರನ್ನು ಮತದಾರರ ಯಾದಿಗೆ ಸೇರಿಸಲಾಗುತ್ತಿದೆ. ಅಂತಿಮ ಮತದಾರರ ಪಟ್ಟಿ…

Read More

ಮಂಜೇಶ್ವರ ರಾಗಂ ಜಂಕ್ಷನ್ ಸಮೀಪದ ವಸತಿ ಸಮುಚ್ಚಯದ ಮಾಲಿನ್ಯ ನೀರು ರಸ್ತೆಗೆ . ಸ್ಥಳೀಯರಲ್ಲಿ ಆತಂಕ

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ಸಮೀಪವಿರುವ ಕ್ವಾರ್ಟರ್ಸ್, ಶೌಚಾಲಯ, ಕುನ್ನಿಲ್ ಜುಮಾ ಮಸೀದಿಯ ಪರಿಸರದಲ್ಲಿನ ಕೆಲವೊಂದು ಮನೆಗಳು, ಕೆ.ಜೆ.ಎಂ. ರಸ್ತೆ, ಕುನಿಲ್ ಶಾಲಾ ರಸ್ತೆ, ಬಡಾಜ್ ಚೌಕಿ ಮುಂತಾದ ಪ್ರದೇಶಗಳಲ್ಲಿನ ಕ್ವಾರ್ಟರ್ಸ್‌ ಹಾಗೂ ಮನೆಗಳಿಂದ ಅಡಿಗೆಮನೆ ಹಾಗೂ ಶೌಚಾಲಯಗಳ ಕೊಳಕು ನೀರು ನೇರವಾಗಿ ಸಾರ್ವಜನಿಕ ಸ್ಥಳಗಳಿಗೆ ಹರಿಯುತ್ತಿರುವ ದೃಶ್ಯಗಳು ಸ್ಥಳೀಯ ನಿವಾಸಿಗಳಲ್ಲಿ ತೀವೃ ಆತಂಕ ಸೃಷ್ಟಿಸಿದೆ. ಸಾರ್ವಜನಿಕರು ನಡೆದಾಡುವ ಸ್ಥಳಗಳಲ್ಲಿ ಶೌಚಾಲಯದ ಕೊಳಕು ನೀರು ಹರಿವಿನಿಂದ ದುರ್ನಾತ, ಮಣ್ಣಿನ ಮಾಲಿನ್ಯ ಮತ್ತು ನೀರಿನ ಮಾಲಿನ್ಯ ಹೆಚ್ಚಾಗಿದೆ. ಇದು…

Read More
error: Content is protected !!