ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಗೆ ಆಹ್ವಾನ

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಸಾರಥ್ಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕೋಲಾರ -ಕಾಸರಗೋಡು ಗಡಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-2025 ಕಾರ್ಯಕ್ರಮವು ಇದೇ ನವಂಬರ್ 15ರಂದು ಅಪರಾಹ್ನ 1 ಗಂಟೆಯಿಂದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು,ಕಾಸರಗೋಡು ಜಿಲ್ಲಾ ಘಟಕದ ಸಹಕಾರದಲ್ಲಿ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ. ಕವಿಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಆಸಕ್ತರು ತಮ್ಮ…

Read More

ನಾಗರಕಟ್ಟೆ ಡಿಸೆಂಬರ್ 4 , 5 ರ ಬ್ರಹ್ಮಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ.

ಕಾಸರಗೋಡು : ಕಾಸರಗೋಡು ಕೋಟೆಯ ಪೂರ್ವ ಮುಂಭಾಗದಲ್ಲಿ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಶ್ರೀ ಶ್ರೀ ಡಾ. ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಗಳವರಿಂದ ಸ್ಥಾಪಿಸಲ್ಪಟ್ಟ ಶ್ರೀ ಶಾರದಾ ಭಜನಾಶ್ರಮದ ಜೀರ್ಣೋದ್ದಾರ ಹಾಗೂ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ನೂತನ ಕಟ್ಟೆ ಗಳಲ್ಲಿ ವೇದಾಚಾರ್ಯ ಶ್ರೀ ಶ್ರೀ ಉಚ್ಚಿಲ್ಲತಾಯ ಪದ್ಮನಾಭ ತಂತ್ರಿಗಳ ಕಾರ್ಮಿಕತ್ವದಲ್ಲಿ ಡಿಸೆಂಬರ್ 4 ಹಾಗೂ 5.ರಂದು ನಡೆಯಲಿರುವ ಬ್ರಹ್ಮ ಕಲಶ ಮತ್ತು 4ರಂದು ಸಂಜೆ 5ಗಂಟೆಗೆ ಮಾಜಿ ಮಂತ್ರಿ ಕೃಷ್ಣ ಜೆ. ಪಾಲೇಮಾರ್ ಅದ್ಯಕ್ಷತೆಯಲ್ಲಿ, ನಡೆಯುವ ಕ್ಷಾತ್ರ…

Read More

ಡಾ. ವಾಮನ್ ರಾವ್ ಬೇಕಲ್ ಕುರಿತ ಕೃತಿ ಬಿಡುಗಡೆ

ಕಾಂತಾವರ : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಜೀವನ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಚಯಿಸುವ ಕೃತಿಯನ್ನು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಯು. ವಿಶ್ವನಾಥ ಶೆಣೈ ಅವರು ಕಾಂತಾವರ ಕನ್ನಡ ಸಂಘದಲ್ಲಿ ಬಿಡುಗಡೆ ಮಾಡಿದರು. ಕಾಸರಗೋಡಿನ ಸಾಹಿತಿ ವಿರಾಜ್ ಅಡೂರು ರಚಿಸಿದ ಈ ಕೃತಿಯು ಕಾಂತಾವರದ ಕೆ. ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ…

Read More

ಆಡಳಿತ ಭಾಷಾ ಸಪ್ತಾಹದ ಜಿಲ್ಲಾ ಮಟ್ಟದ ಉದ್ಘಾಟನೆ

ಕಾಸರಗೋಡು: ಆಡಳಿತ ಭಾಷಾ ಸಪ್ತಾಹಕ್ಕೆ ಸಂಬಂಧಿಸಿದಂತೆ ಕಾಸರಗೋಡು ನೋಂದಣಿ ಇಲಾಖೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಮಂಜೇಶ್ವರ ಉಪ-ನೋಂದಣಿ ಕಚೇರಿಯಲ್ಲಿ ದಿನಾಂಕ 04-11-2025 ರಂದು ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಜಿಲ್ಲಾ ನೋಂದಣಾಧಿಕಾರಿ ಶ್ರೀ ಫಿರೋಜ್ ಟಿ.ಎಂ., ಮಲಯಾಳಂ ಭಾಷೆಯಲ್ಲಿ ಆಡಳಿತದ ಮೂಲಕ ಎಲ್ಲಾ ವರ್ಗದ ಜನರು ಆಡಳಿತದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದರು. ಪ್ರಸಿದ್ಧ ನಾಟಕಕಾರ ಮತ್ತು ಬರಹಗಾರ ಶ್ರೀ ಸುರೇಶ್ ಬಿ.ಎನ್. ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರಂ ಉಪ-ನೋಂದಣಿಾಧಿಕಾರಿ ಶ್ರೀ ಅರುಣ್‌ಕುಮಾರ್ ಕೆ. ಶ್ರೀ ರಂಜು ಎಂ.ವಿ….

Read More

K ಜಯರಾಜ ಶೆಟ್ಟಿ ಚಾರ್ಲ,ಮಂಜೇಶ್ವರ ಇವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ 2025 ರ ಪ್ರಶಸ್ತಿ

ಮಂಜೇಶ್ವರ: ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ತನ್ನದೇ ವಿಶಿಷ್ಟತೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿ ದೀನ ದಲಿತರ ಸೇವೆಗಾಗಿ, ಅಸಹಾಯಕ ಕುಟುಂಬಗಳ ಕಲ್ಯಾಣಕ್ಕೆ ಸಂಪೂರ್ಣ ತೊಡಗಿಸಿ, ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಸಮಾಜಮುಖಿ ಸೇವಾ ಕಾರ್ಯ ಮಾಡುವ ಯುವ ನಾಯಕ, K ಜಯರಾಜ ಶೆಟ್ಟಿ ಚಾರ್ಲ,ಮಂಜೇಶ್ವರ ಇವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ 2025 ರ ಪ್ರಶಸ್ತಿ ಪ್ರಧಾನಿಸಲಾಯಿತು.

Read More

ಮತದಾರರ ಪಟ್ಟಿ ಪರಿಷ್ಕರಣೆಯ ಎಲ್ಲಾ ಸೂಚನೆ ,ನಿರ್ಧೇಶಗಳನ್ನು ಕನ್ನಡದಲ್ಲೂ ಒದಗಿಸಿ : ಬಾಕುಡ ಸಮಾಜ ಕೇಂದ್ರ ಸಮಿತಿ

ಮಂಜೇಶ್ವರ :ಚುನಾವಣೆಗೆ ಸಂಬಂಧಿಸಿ ಬಿ ಎಲ್ ಒ ಗಳ ಮೂಲಕ ಮತದಾರರಿಗೆ ನೀಡುವ ಎನ್ಯುಮರೇಶನ್ ಫಾರ್ಮ್ ಮಲಯಾಳದಲ್ಲಿ ಮಾತ್ರವೇ ಮುದ್ರಣಗೊಂಡಿರುವುದು ಖಂಡನೀಯವಾಗಿದ್ದು ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಜನರು ಕನ್ನಡ ಭಾಷೆಯನ್ನು ಓದಲು ಬರೆಯಲು ತಿಳಿದವರಾಗಿದ್ದು ಈ ರೀತಿಯ ತಾರತಮ್ಯ ನೀತಿಯಿಂದ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡತ್ತಾಗಿದೆ. ಮಲಯಾಳಂನಲ್ಲಿ ಮಾತ್ರವೇ ಇರುವ ಫಾರ್ಮ್ ನ್ನು ಕನ್ನಡಿಗರು ಭರ್ತಿಗೊಳಿಸುವ ಸಂದರ್ಭದಲ್ಲಿ ತಪ್ಪಾದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಆದ್ದರಿಂದ ಕಾಸರಗೋಡಿನಲ್ಲಿ ಮಲಯಾಳಂ ಜೊತೆಗೆ ಕನ್ನಡದಲ್ಲೂ ಫಾರ್ಮ್, ಅರ್ಜಿಗಳನ್ನು ವಿತರಣೆ…

Read More

ಡಾ.ಕೆ ವಾಮನ್ ರಾವ್ ಬೇಕಲ್ ರ ಬಗ್ಗೆ ಬರೆದ ಕೃತಿ ಲೋಕಾರ್ಪಣೆ.

ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ಕೆ. ವಾಮನ್ ರಾವ್ ಬೇಕಲ ಎಂಬ ಪುಸ್ತಕ,… ಡಾ. ನಾ. ಮೊಗಸಾಲೆ ಸಾರತ್ಯದ ಕನ್ನಡ ಸಂಘ ಕಾಂತಾವರ “ನಾಡಿಗೆ ನಮಸ್ಕಾರ ಪುಸ್ತಕ ಮಾಲೆಯಲ್ಲಿ ಪ್ರಕಟಗೋಳಿಸಿದೆ. ನವೆಂಬರ್ ಒಂದರಂದು, ಕನ್ನಡ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘ ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನಃರೂರು ಅದ್ಯಕ್ಷತೆಯಲ್ಲಿ ಪುಸ್ತಕ ಬಿಡುಗಡೆ ಗೊಂಡಿತ್ತು. ಕಾಸರಗೋಡು ಕನ್ನಡ ಭವನಕ್ಕೆ ದಿನಾಂಕ 3.11.2025 ರಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷರು, ಹಾಗೂ ಮುಂಬರುವ ಕ….

Read More

ಮಂಜೇಶ್ವರ ತೂಮಿನಾಡಿನಿಂದ ಎಸ್‌ಐಆರ್ ಪರಿಷ್ಕರಣೆಗೆ ಅಧಿಕೃತ ಚಾಲನೆ

ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡಿನಿಂದ ಎಸ್‌ಐಆರ್ ಪರಿಷ್ಕರಣೆಗೆ ಅಧಿಕೃತ ಚಾಲನೆ ದೊರಕಿತು. ಸ್ಥಳೀಯ ಹಿರಿಯ ಪತ್ರಕರ್ತ ಅಬ್ದುಲ್ ರಹ್ಮಾನ್ ರವರಿಗೆ ಬೂತ್ ಲೆವಲ್ ಅಧಿಕಾರಿ ಹರಿಣಾಕ್ಷಿ ಫಾರಂ ಹಸ್ತಾಂತರಿಸುವ ಮೂಲಕ ಈ ಪ್ರಕ್ರಿಯೆಗೆ ಕೇರಳದ ತುದಿಯಿಂದ ಆರಂಭವಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತದಾರರ ಪಟ್ಟಿಯ ನಿಖರತೆ ಮತ್ತು ನವೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಪ್ರತಿ ಅರ್ಹ ನಾಗರಿಕರೂ ತಮ್ಮ ಹೆಸರು, ವಿಳಾಸ ಮತ್ತು ಇತರೆ ವಿವರಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಮನವಿ ಮಾಡಿದರು. ಎಸ್‌ಐಆರ್…

Read More

ಕಾಸರಗೋಡು: ಸ್ಕೂಟರ್-ಕಾರಿನ ನಡುವೆ ಅಪಘಾತ; ಬಿಜೆಪಿ ಕಾರ್ಯಕರ್ತ ಮೃತ್ಯು .

ಸ್ಕೂಟರ್ ಹಾಗೂ ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್ ನಲ್ಲಿ ನಡೆದಿದೆ. ಆರಿಕ್ಕಾಡಿ ಪಾರೆಸ್ಥಾನ ಸಮೀಪದ ಎನ್.ಹರೀಶ್ ಕುಮಾರ್ (37) ಮೃತ ದುರ್ದೈವಿ. ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಹರೀಶ್ ಬಿಜೆಪಿ ಕಾರ್ಯಕರ್ತರಾಗಿದ್ದರು. ಅಪಘಾತದಿಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ. ಗಾಯಗೊಂಡ ಹರೀಶ್ ಕುಮಾರ್ ರನ್ನು ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.ಸ್ಕೂಟರ್ ಕಾಸರಗೋಡಿನಿಂದ ಕುಂಬಳೆ ಕಡೆಗೆ…

Read More

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಚಾಂಪಿಯನ್ ಶಿಪ್ ಪಡೆದುಕೊಂಡ ಜಿ.ಎಲ್.ಪಿ.ಯಸ್. ವಾಮಂಜೂರು ಶಾಲೆ

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಜಿ.ಎಲ್.ಪಿ.ಯಸ್.ವಾಮಂಜೂರು ಶಾಲೆ ಎಲ್.ಪಿ ಜನರಲ್ ವಿಭಾಗದಲ್ಲಿ ಪ್ರಥಮ ಸ್ಥಾನ ವನ್ನು ಗಳಿಸಿ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.ಅರೆಬಿಕ್ ಶಾಲಾ ಕಲೋತ್ಸವದಲ್ಲಿ ರನ್ನರ್ ಅಪ್ ಆಗಿ ಮೂಡಿಬಂದಿದೆ. ಈ ಸಂತೋಷದ ವಿಚಾರವನ್ನು ಪ್ರಕಟ ಪಡಿಸಲು ಶಾಲೆಯಿಂದ ಹೊರಟು ಹೊಸಂಗಡಿ ಪೇಟೆಗೆ ಮೆರವಣಿಗೆಯ ಮೂಲಕ ಸಾಗಿ ವಿಜಯೋತ್ಸವವನ್ನು ಆಚರಿಸಲಾಯಿತು.. ಮೆರವಣಿಗೆಯ ನೇತೃತ್ವವನ್ನು ಪಿ.ಟಿ.ಎ.ಅಧ್ಯಕ್ಷ ರಾದ ಶ್ರೀಯುತ ಕಲಂದರ್ ತಾಜುದ್ದೀನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಶ್ರೀಯುತ ಶೇಖ್ ಉಸ್ಮಾನ್, ಯಂ.ಪಿ.ಟಿ.ಎ ಅಧ್ಯಕ್ಷೆಯಾದ ಶ್ರೀಮತಿ ರಮೀಝ,…

Read More
error: Content is protected !!