ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ನವೀಕರಣಕ್ಕಾಗಿ ಧರ್ಮಸ್ಥಳ ಕ್ಷೇತ್ರದಿಂದ ಆರ್ಥಿಕ ನೆರವು.

ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಡೆಯವರು ಆರ್ಥಿಕ ನೆರವನ್ನು ನೀಡಿದ್ದಾರೆ. ಇಂದು ಬೆಳಗ್ಗೆ ಕ್ಷೇತ್ರ ಪರಿಸರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ಹಾಗು ಜನಜಾಗ್ರತಿಯ ಪ್ರಮುಖರು ರೂ.5 ಲಕ್ಷ ಡಿ.ಡಿ ಯನ್ನು ಕ್ಷೇತ್ರ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತೋಡಿ ಮಾತನಾಡಿ ನಿವೇದನೆಗಾಗಿ ಕ್ಷೇತ್ರದಿಂದ ಧರ್ಮಸ್ಥಳಕ್ಕೆ ಹೋದಾಗ ಬಹಳ…

Read More

ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 ಸೆಪ್ಟೆಂಬರ್ 22 ಕ್ಕೆ ಚಾಲನೆ.

ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ “ಶ್ರೀ ದುರ್ಗಾಂಬ ವೇದಿಕೆ” ಯಲ್ಲಿ 2925 ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರ ತನಕ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಜರುಗಲಿದೆ. ಕನ್ನಡ ಭವನದ ಸಂಸ್ಥಾಪಕ ಶ್ರೀ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕಳೆದ 12 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಸಂಭ್ರಮದ ಈ ಬಾರಿಯ ಉದ್ಘಾಟನೆ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11 ಗಂಟೆಗೆ ಪಾಂಗೋಡು ಕ್ಷೇತ್ರ ಸಭಾಂಗಣದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ಡಾl ಕೆ.ಎನ್….

Read More

ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆ

ಮಂಜೇಶ್ವರ: ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ಇತ್ತೀಚೆಗೆ “ಟ್ಯಾಲೆಂಟ್ ಹಂಟ್ ಡೇ” ಉತ್ಸವ ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ದಿನಾಚರಣೆಯ ಉದ್ದೇಶ, ವಿದ್ಯಾರ್ಥಿಗಳಲ್ಲಿರುವ ಅಡಗಿದ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸುವುದಾಗಿತ್ತು. ಈ ಸಂಭ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ಹಾಡು, ಚಿತ್ರಕಲೆ, ನಾಟಕ, ಭಾಷಣ, ಕರಾಟೆ ಹಾಗೂ ವಿವಿಧ ಕಲಾತ್ಮಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ವೈಯಕ್ತಿಕ ಪ್ರತಿಭೆಯನ್ನು ಮೆರೆದರು. ಪ್ರತಿ ತರಗತಿಯಿಂದ ವಿದ್ಯಾರ್ಥಿಗಳು ಭಾಗಿ ಆಗಿದ್ದು,…

Read More

ಚಲಿಸುತ್ತಿದ್ದ ಟ್ಯಾಂಕರ್ ಲಾರಿಯಿಂದ ಸ್ಪಿರಿಟ್ ಸೋರಿಕೆ

ಮಂಜೇಶ್ವರ: ಚಲಿಸುತ್ತಿದ್ದ ಟ್ಯಾಂಕರ್ ಲಾರಿಯಿಂದ ಸ್ಪಿರಿಟ್ ಸೋರಿಕೆಯಾಗಿ ಆತಂಕದ ಪರಿಸ್ಥಿತಿ ಎದುರಾಗಿದೆ. ಮಂಜೇಶ್ವರ ಹೊಸಂಗಡಿ ವಾಮಂಜೂರು ಅಬಕಾರಿ ತಪಾಸಣಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬಳಿಕ ಟ್ಯಾಂಕರ್ ಲಾರಿಯಿಂದ ಪಾತ್ರೆಗೆ ಸ್ಪಿರಿಟ್ ಹರಿಯುವ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಪ್ರದೇಶದಿಂದ ಕೋಝಿಕ್ಕೋಡ್ ಗೆ ತೆರಳುತಿದ್ದ ಟ್ಯಾಂಕರ್ ಲಾರಿಯಲ್ಲಿ ಈ ರೀತಿಯ ಸೋರಿಕೆ ಕಂಡು ಬಂದಿದೆ.ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸರು ಆಗಮಿಸಿ ಸುರಕ್ಷತೆಯಲ್ಲಿ ಬೇರೊಂದು ಟ್ಯಾಂಕರಿಗೆ ಸ್ಪಿರಿಟ್ ವರ್ಗಾಯಿಸಿದ್ದಾರೆ.

Read More

ವರ್ಕಾಡಿ ಕಜೆಪದವಿನಲ್ಲಿ ಭೂಮಿ ಬಿರುಕು ಉಂಟಾದ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತ್ತಿನ ಕೆಜೆಪದವಿಯಲ್ಲಿ ಭಯಾನಕವಾಗಿ ಉಂಟಾಗುತ್ತಿರುವ ಭೂಮಿ ಬಿರುಕುಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿಶೇಷ ತಂಡ ಸ್ಥಳಕ್ಕೆ ಭೇಟಿ ನೀಡಿತು. 2019ರಿಂದ ಆರಂಭವಾದ ಈ ಸಮಸ್ಯೆ, ಕಳೆದ ವರ್ಷ (2024) ಅತ್ಯಂತ ಗಂಭೀರ ಸ್ವರೂಪವನ್ನು ಪಡೆದಿದ್ದು, ಈ ವರ್ಷ ಭೂಭಾಗವು ಹೆಚ್ಚು ತಳಮಟ್ಟಕ್ಕೆ ಇಳಿಯುತ್ತಿದ್ದಂತೆ, ಆ ಪ್ರದೇಶದ ಮೂವರು ಕುಟುಂಬಗಳನ್ನು ತುರ್ತು ಅವಸ್ಥೆಯಲ್ಲಿ ಸ್ಥಳಾಂತರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಭೂಮಿ ಬಿರುಕುಗಳಿಂದಾಗಿ ಕೃಷಿಭೂಮಿಗಳು ನಾಶವಾಗಿದ್ದು, ಸ್ಥಳೀಯರ ಪ್ರಮುಖ ಆರ್ಥಿಕ ಆಧಾರವಾದ ಕೃಷಿಯೇ ದುರ್ಬಲಗೊಂಡಿದೆ. ಪ್ರದೇಶದಲ್ಲಿನ ಮನೆಗಳು ಕೂಡ…

Read More

ಕೇರಳ ಸರಕಾರದ ಜನ ವಿರೋಧಿ,ಕಾರ್ಮಿಕ ವಿರೋಧಿ ನೀತಿಗೆದುರಾಗಿ ಕಾಲ್ನಡೆ ಜಾಥಾ.

ಕೇರಳ ಸರಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗೆದುರಾಗಿ ಕೇರಳ ರಾಜ್ಯಾದ್ಯಂತ ನಡೆಯುವ ಕಾಲ್ನಡೆ ಜಾಥ ಅಂಗವಾಗಿ ಮಂಜೇಶ್ವರ ಪಂಚಾಯತ್ ವತಿಯಿಂದ ನಡೆದ ಕಾಲ್ನಡೆ ಜಾಥ ವನ್ನು BMS ಜಿಲ್ಲಾ ಅಧ್ಯಕ್ಷರಾದ ಉಪೇಂದ್ರನ್ ಕೋಟೆಕಣಿ ಉದ್ಘಾಟನೆ ಗೆಯ್ದರು. ಜಾಥಾ ಕ್ಯಾಪ್ಟನ್ ಪ್ರಕಾಶ್ ಕೆ. ಪಿ ರವರ ನೇತ್ತ್ವದಲ್ಲಿ ನಡೆದ ಕಾಲ್ನಡೆ ಜಾಥಾದಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ. ಯಶವಂತಿ ಬೆಜ್ಜ ,ವಲಯ ಅಧ್ಯಕ್ಷ ರವಿ ಎಂ ಕೆ ಕೊಲ್ಯೂರು,ರವಿ ಮಜಲ್, ಕಿಶೂರ್ ಶೆಟ್ಟಿ ಕುಂಜತ್ತೂರು, ಶ್ರೀಧರ…

Read More

ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಗೆ ಡೆಸ್ಕ್ ಟಾಪ್ , ಪ್ರಿಂಟರ್ ನೀಡಿದ 24ನ್ಯೂಸ್ ಹಾಗೂ ಕೆ ಚಿಟ್ಟಿಲಪ್ಪಿಲ್ಲಿ ಸಂಸ್ಥೆ.

ಮಂಜೇಶ್ವರ : ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ 24ನ್ಯೂಸ್ ಹಾಗೂ ಕೆ ಚಿಟ್ಟಿಲಪ್ಪಿಲ್ಲಿ ಸಂಸ್ಥೆಯವರು ಶಾಲೆಗೆ ದೇಣಿಗೆಯಾಗಿ ನೀಡಿದ 8 ಡೆಸ್ಕ್ ಟಾಪ್ ಹಾಗೂ ಒಂದು ಪ್ರಿಂಟರ್ ಗಳ ಉದ್ಘಾಟನಾ ಸಮಾರಂಭ ಜರುಗಿತು. ಕಾಸರಗೋಡು ಜಿಲ್ಲಾ ಕ್ರೈಂ ಬ್ರಾಂಚ್ ಡಿ. ವೈ. ಎಸ್. ಪಿ. ಶ್ರೀ ಟಿ. ಉತ್ತಮ್ ದಾಸ್ ಇವರು ಕಂಪ್ಯೂಟರ್‌ಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿದರು. ಕುಂಜತ್ತೂರು ಶಾಲೆಯ ಪ್ರಾಂಶುಪಾಲರಾದ ಶ್ರೀ ಶಿಶು ಪಾಲನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ವಿದ್ಯಾರ್ಥಿಗಳಿಂದ ಲಹರಿ ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಯಿತು. ಈ…

Read More

ಬಾಯಾರು: ಶಾಲಾ ಬಸ್ಸು ಸ್ಕೂಟರ್ ಡಿಕ್ಕಿ .ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ.

ಮಂಜೇಶ್ವರ : ಬಾಯಾರು ಪೆಟ್ರೋಲ್ ಬಂಕ್ ಮುಂಬಾಗದಲ್ಲಿ ಇಂದು ಬೆಳಿಗ್ಗೆ ಶಾಲಾ ಬಸ್ಸೊಂದು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಂದು ವಿದ್ಯಾರ್ಥಿ ಸ್ಥಿತಿ ಚಿಂತಾಜನಕವೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಾಯಾರು ಪೊನ್ನಂಗಳ ಮುಜಮ್ಮ ಸಶಾಫತ್ ಸುನ್ನಿ ಶಾಲಾ ಬಸ್ಸು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಪೈವಳಿಕೆ ಅಕಾಡೆಮಿಕ್ ಶಾಲೆಯ ಪ್ಲಸ್ 2 ವಿದ್ಯಾರ್ಥಿಗಳಾದ ಸಾದಿಖ್ ಹಾಗೂ ಮೊಯಿನುದ್ದೀನ್ ಅಪಘಾತದಿಂದ ಗಾಯಗೊಂಡಿದ್ದಾರೆ.

Read More

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪ ಜಿಲ್ಲಾ ಸಮಿತಿಯ ರೂಪೀಕರಣ.

ಮೀಯಪದವು:ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನ ಹಾಗೂ ಮಹಾಸಭೆ ವಿದ್ಯಾವರ್ಧಕ ಪ್ರೌಢ ಶಾಲೆ ಮೀಯಪದವು ಶಾಲೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರುಅಶೋಕ್ ಕೊಡ್ಲಮೊಗರು ಉಪಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಡಾಜೆ ಇಲ್ಲಿಯ ಶಿಕ್ಷಕರಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು, ಉಪಾಧ್ಯಕ್ಷರುಗಳಾಗಿ ಶ್ರೀ ಶಿವರಾಮ ಭಟ್ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಕಾಯರ್ ಕಟ್ಟೆ , ಶ್ರೀ…

Read More

ಸಾಮ್ರಾಜ್ಯಶಾಹಿ ವಿರುದ್ಧ ಪ್ರತಿಭಟನೆ: ಇಸ್ರೇಯಿಲ್ ನರಮೇಧ ವಿರೋಧಿಸಿ ಸಿಪಿಐಎಂ ನೇತೃತ್ವದಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ.

ಮಂಜೇಶ್ವರ: ಇಸ್ರೇಯಿಲ್ ನಡೆಸುತ್ತಿರುವ ನರಮೇಧವನ್ನು ತೀವ್ರವಾಗಿ ಖಂಡಿಸಿ ಹಾಗೂ ಅದರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಕುಂಜತೂರಿನಲ್ಲಿ ಸಿಪಿಐಎಂ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ಬೃಹತ್ ಪ್ರತಿಭಟನೆ, ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಸಿಪಿಐಎಂ ಮಂಜೇಶ್ವರ ಏರಿಯಾ ಸದಸ್ಯ ಕೆ. ಕಮಲಾಕ್ಷ ಸಭೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಇಸ್ರೇಯಿಲ್ ನಡೆಸುತ್ತಿರುವ ದಾಳಿಗಳು ಮನುಷ್ಯತ್ವದ ವಿರುದ್ಧದ ಕ್ರೂರ ದಾಳಿಗಳಾಗಿವೆ. ಗಾಜಾ ಮತ್ತು ಪ್ಯಾಲಸ್ತೀನಾ ಜನರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣ ನಿಲ್ಲಿಸಬೇಕು. ಭಾರತ ಸೇರಿದಂತೆ ಎಲ್ಲ…

Read More
error: Content is protected !!