ಮೀಯಪದವು:ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನ ಹಾಗೂ ಮಹಾಸಭೆ ವಿದ್ಯಾವರ್ಧಕ ಪ್ರೌಢ ಶಾಲೆ ಮೀಯಪದವು ಶಾಲೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು
ಅಶೋಕ್ ಕೊಡ್ಲಮೊಗರು
ಉಪಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಡಾಜೆ ಇಲ್ಲಿಯ ಶಿಕ್ಷಕರಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು, ಉಪಾಧ್ಯಕ್ಷರುಗಳಾಗಿ ಶ್ರೀ ಶಿವರಾಮ ಭಟ್ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಕಾಯರ್ ಕಟ್ಟೆ , ಶ್ರೀ ಶಂಕರ ನಾರಾಯಣ ಭಟ್ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಉದ್ಯಾವರ , ಶ್ರೀಮತಿ ಮಾಲತಿ ಮುಖ್ಯ ಶಿಕ್ಷಕಿ ಸರಕಾರಿ ಶಾಲೆ ಕುಳೂರು , ಶ್ರೀ ಸುರೇಶ್ ಬಂಗೇರ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಮಜಿಬೈಲ್ , ಶ್ರೀಮತಿ ಹರಿಣಾಕ್ಷಿ ಮುಖ್ಯ ಶಿಕ್ಷಕಿ ಸರಕಾರಿ ಶಾಲೆ ಬಡಾಜೆ , ಶ್ರೀಮತಿ ದಯಾವತಿ ಪ್ರಭಾರ ಮುಖ್ಯ ಶಿಕ್ಷಕಿ ಸರಕಾರಿ ಶಾಲೆ ಮೂಡಂಬೈಲ್ , ಪ್ರಧಾನ ಕಾರ್ಯದರ್ಶಿಯಾಗಿ ಮೀಯಪದವು ಪ್ರೌಢ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶ್ರೀ ಸುನಿಲ್ ಕುಮಾರ್ ಯಂ , ಜತೆ ಕಾರ್ಯದರ್ಶಿಗಳಾಗಿ ಶ್ರೀ ದಿವಾಕರ ಬಲ್ಲಾಳ್ ಶಿಕ್ಷಕರು ಸರಕಾರಿ ಶಾಲೆ ಕುಂಜತ್ತೂರು , ಶ್ರೀ ಅಶ್ರಫ್ ಮರ್ತ್ಯ ಶಿಕ್ಷಕರು ಸರಕಾರಿ ಶಾಲೆ ಪೈವಳಿಕೆ ನಗರ, ಶ್ರೀ ಜಯಪ್ರಸಾದ್ ಶಿಕ್ಷಕರು ಬಿ ಪಿಪಿ ಎಲ್ ಪಿ ಯಸ್ ಪೆರ್ಮುದೆ , ಶ್ರೀ ದೇವಾನಂದ ಶಿಕ್ಷಕರು ಸರಕಾರಿ ಶಾಲೆ ಮಜಿಬೈಲ್ , ಶ್ರೀಮತಿ ರೇಖಾ ಶಿಕ್ಷಕಿ ಎ ಯು ಪಿ ಯಸ್ ಆನೆಕಲ್ಲು , ಕೋಶಾಧಿಕಾರಿಯಾಗಿ ಜಿ ಬಿ ಎಲ್ ಪಿ ಯಸ್ ಶಾಲೆಯ ಶಿಕ್ಷಕರಾದ ಶ್ರೀ ಕಿಶೋರ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ
ಸುನಿಲ್ ಕುಮಾರ್
ಲೆಕ್ಕ ಪರಿಶೋಧಕರಾಗಿ ಬಾಕ್ರಬೈಲ್ ಎ ಯು ಪಿ ಯಸ್ ಪಾತೂರು ಶಾಲೆಯ ಶಿಕ್ಷಕರಾದ ಶ್ರೀ ಗಣೇಶ್ ಇವರನ್ನು ಆಯ್ಕೆ ಮಾಡಲಾಯಿತು. ಶ್ರೀಮತಿ ಶೋಭಿತಾ ರಾಜೇಶ್ ಮುಖ್ಯ ಶಿಕ್ಷಕಿ ಕನಿಯಾಲ ಶಾಲೆ ,ಶ್ರೀಮತಿ ಶಕೀಲ ಬಾಕ್ರಬೈಲ್ ಎ ಯು ಪಿ ಯಸ್ ಪಾತೂರು , ಶ್ರೀ ವಿಶ್ವನಾಥ , ಶ್ರೀ ರಾಜೇಶ್ , ಶ್ರೀ ಹರೀಶ್ ಕುಮಾರ್ ಸರಕಾರಿ ಶಾಲೆ ಪೈವಳಿಕೆ, ಶ್ರೀ ಕೃಷ್ಣ ಮೂರ್ತಿ , ಶ್ರೀ ವಿದ್ಯಾ ಪ್ರಸನ್ನ ಹೆದ್ದಾರಿ ಎ ಯು ಪಿ ಶಾಲೆ , ಶ್ರೀ ಅಜಿತ್ ಕೊಡ್ಲಮೊಗರು ಶಾಲೆ , ಶ್ರೀಮತಿ ನೀತಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರ , ಶ್ರೀ ಮೆಲ್ವಿನ್ ಸರಕಾರಿ ಶಾಲೆ ಬೇಕೂರು , ಶ್ರೀ ಗುರುರಾಜ್ ಸರಕಾರಿ ಶಾಲೆ ಉದ್ಯಾವರ ಗುಡ್ಡೆ , ಶ್ರೀ ಸದಾಶಿವ ಬಾಲಮಿತ್ರ ಮುಖ್ಯ ಶಿಕ್ಷಕರು ಪೆರ್ಮುದೆ ಶಾಲೆ , ಶ್ರೀಮತಿ ಮಾಲತಿ ಸರಕಾರಿ ಶಾಲೆ ಉಪ್ಪಳ , ಶ್ರೀ ನಯನ ಪ್ರಸಾದ್ ಸರಕಾರಿ ಶಾಲೆ ಕಡಂಬಾರ್ ,ಶ್ರೀ ಕೃಷ್ಣ ನಾಯ್ಕ ಕೋಳ್ಯೂರು ಶಾಲೆ , ಶ್ರೀಮತಿ ಗೋಪಿ ಶಿಕ್ಷಕಿ ಸರಕಾರಿ ಪ್ರೌಢ ಶಾಲೆ ಕಡಂಬಾರ್ , ಶ್ರೀ ನಿಶಿತ್ ಐಲ ಶಿಕ್ಷಕರು ಶಾರದಾ ಬೋವಿ ಶಾಲೆ ಐಲ , ಶ್ರೀ ಸಿದ್ದಿಕ್ ಸರಕಾರಿ ಪ್ರೌಢ ಶಾಲೆ ಉಪ್ಪಳ , ಶ್ರೀಮತಿ ಜ್ಯೋತಿ ಲಕ್ಷ್ಮಿ ಶಿಕ್ಷಕಿ ಕೊಡ್ಲಮೊಗರು ಶಾಲೆ , ಶ್ರೀ ರಾಜೇಶ್ ಸೈಟ್ ಜೋಸಫ್ ಶಾಲೆ ಕಳಿಯೂರು , ಶ್ರೀ ರಾಜರಾಮ್ ವಿದ್ಯಾವರ್ಧಕ ಶಿಕ್ಷಕರು ಪ್ರೌಢ ಶಾಲೆ ಮೀಯಪದವು, ಕು| ಧನ್ಯಶ್ರೀ ಶಿಕ್ಷಕಿ ಬಜಲಕರಿಯ ಶಾಲೆ , ಈ ಸದಸ್ಯರನ್ನೊಳಗೊಂಡ ಕಾರ್ಯಾಕಾರೀ ಸಮಿತಿಯನ್ನು ರಚಿಸಲಾಯಿತು. ಕೇಂದ್ರ ಸಮಿತಿಯ ಸದಸ್ಯರಾಗಿ ಶ್ರೀ ಸುಕೇಶ್ , ಶ್ರೀ ಜಯರಾಮ ಸಿ ಯಚ್ , ಶ್ರೀ ಜಯಪ್ರಶಾಂತ್ ಪಿ , ಶ್ರೀ ಶ್ರೀರಾಮ ಕೆದುಕೋಡಿ , ಶ್ರೀ ಜೀವನ್ ಕುಮಾರ್ ಪಿ , ಇವರನ್ನು ಆಯ್ಕೆ ಮಾಡಲಾಯಿತು.
ಕೋಶಧಿಕಾರಿ
ಕಿಶೋರ್ ಕುಮಾರ್
ವಿಶೇಷ ಆಹ್ವಾನಿತರಾಗಿ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀ ಜಾರ್ಜ್ ಕ್ರಾಸ್ತಾ , ಶ್ರೀ ಚಂದ್ರಕಾಂತ , ಶ್ರೀ ಉಮೇಶ ಕೆ , ಶ್ರೀ ಜಬ್ಬಾರ್ ಬಿ , ಶ್ರೀಮತಿ ಕವಿತಾ ಕೂಡ್ಲು ಇವರನ್ನು ಆಯ್ಕೆ ಮಾಡಲಾಯಿತು. ಕಾಲೇಜು ಪ್ರತಿನಿಧಿಯಾಗಿ ಶ್ರೀ ಶಿವಶಂಕರ ಪ್ರಾಧ್ಯಾಪಕರು ಗೋವಿಂದ ಪೈ ಕಾಲೇಜು ಮಂಜೇಶ್ವರ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿಯೊಂದು ಪಂಚಾಯತಿನ ಜವಾಬ್ದಾರಿಗಳನ್ನು ಅಧ್ಯಾಪಕರಿಗೆ ಹಂಚಲಾಯಿತು. ಶ್ರೀ ಅಶ್ರಫ್ ಮರ್ತ್ಯ ಪೈವಳಿಕೆ , ಶ್ರೀ ದಿವಾಕರ ಬಲ್ಲಾಳ್ ಮಂಜೇಶ್ವರ , ಶ್ರೀ ಜೀವನ್ ಕುಮಾರ್ ವರ್ಕಾಡಿ , ಶ್ರೀ ರೂಪೇಶ್ ಯನ್ ಮೀಂಜ , ಶ್ರೀಮತಿ ಜಯಶ್ರೀ ಮಂಗಲ್ಪಾಡಿ ಹಾಗೂ ಶ್ರೀ ವಸಂತ ಬಿ ಇವರಿಗೆ ನೋನ್ ಪಿ ಇ ಸಿ ಶಾಲೆಗಳ ಜವಾಬ್ದಾರಿಗಳನ್ನು ನೀಡಲಾಯಿತು.