ಮಂಗಲ್ಪಾಡಿಯಲ್ಲಿ ಅಪಾಯಕರ ಸೇತುವೆ: ತಕ್ಷಣ ನವೀಕರಣಕ್ಕೆ ಸ್ಥಳೀಯರ ಒತ್ತಾಯ
ಉಪ್ಪಳ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪ್ರಮುಖ ಜಲಸ್ರೋತಗಳಲ್ಲಿ ಒಂದಾದ ಸ್ವರ್ಣಗಿರಿ ತೋಡಿನ ಮೇಲೆ ನಿರ್ಮಿಸಲಾದ ಮಾಣಿಬಿತ್ತಿಲು ವಿ.ಸಿ.ಬಿ ಕಮ್ ಬ್ರಿಡ್ಜ್ ಗಂಭೀರ ಜೀರ್ಣಾವಸ್ಥೆಗೆ ತಲುಪಿದ್ದು, ಕುಸಿತದ ಭೀತಿಯನ್ನು ಎದುರಿಸುತ್ತಿದೆ.ನಾಲ್ಕು ದಶಕಕ್ಕೂ ಹೆಚ್ಚು ಹಳೆಯದಾದ ಈ ಸೇತುವೆಯನ್ನು ನವೀಕರಿಸಿ ಮರುನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಮುಟ್ಟಂ,ಬೇರಿಕೆ ಹಾಗೂ ಕುಕ್ಕಾರ್ ಭಾಗದ ನೂರಾರು ಎಕರೆ ಕೃಷಿಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮೈನರ್ ಇರಿಗೇಷನ್ ಅಣೆಕಟ್ಟು ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ–ಸೇತುವೆಯನ್ನು ನಿರ್ಮಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ…