ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳಲ್ಲಿ ಅಧಿಕಾರಿಗಳ ತೀವ್ರ ಕೊರತೆ . ಸಂಕಷ್ಟದಲ್ಲಿ ಗ್ರಾಮಸ್ಥರು.
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಮಂಗಲ್ಪಾಡಿ , ವರ್ಕಾಡಿ ಗ್ರಾಮ ಪಂಚಾಯತು ಸೇರಿದಂತೆ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳಲ್ಲಿ ಅಧಿಕಾರಿಗಳ ತೀವ್ರ ಕೊರತೆಯು ಕಂಡುಬರುತ್ತಿದ್ದು, ಈ ಪರಿಣಾಮವಾಗಿ ವಿವಿಧ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡ ಸ್ಥಿತಿಯಲ್ಲಿ ಉಳಿದಿವೆ. ಗ್ರಾಮಸ್ಥರು ಈ ಸ್ಥಿತಿಯಿಂದ ಸಂಕಷ್ಟಕ್ಕೀಡಾಗುತಿದ್ದು, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಕಾರ್ಯದರ್ಶಿ ಹುದ್ದೆ ಕಳೆದ ಕೆಲವು ತಿಂಗಳಿಂದ ಖಾಲಿ ಬಿದ್ದಿದೆ. ಈ ಕಾರಣದಿಂದ ಹಲವು ಯೋಜನೆಗಳು ವಿಳಂಬಗೊಳ್ಳುತ್ತಿದೆ. ಇದೇ ರೀತಿ ಮಂಗಲ್ಪಾಡಿ ಪಂಚಾಯತಿನಲ್ಲಿ ಸಹ ಯೋಜನೆಗಳ ಅನುಷ್ಠಾನಕ್ಕೆ…