ಆಶಾಜ್ಯೋತಿ ಸಂಸ್ಥೆಯಿಂದ ಜನವರಿ 11ರಂದು ದಿವ್ಯಾಂಗರಿಗಾಗಿ ಮಂಗಳೂರಿನಲ್ಲಿ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ
ಮಂಗಳೂರು:ಸೇವಾ ಭಾರತಿ(ರಿ ) ಮಂಗಳೂರು ಇದರ ಘಟಕವಾಗಿರುವ ಆಶಾಜ್ಯೋತಿಯು ಪ್ರತಿ ವರ್ಷ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಕಾರ್ಯಕ್ರಮವನ್ನು ದಿವ್ಯಾಂಗರಿಗಾಗಿ ಆಯೋಜಿಸಿಕೊಂಡು ಬರುತಿದ್ದು ಈ ಭಾರಿ ಕಾರ್ಯಕ್ರಮವನ್ನು ಕೆನರಾ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ ನ ಸಹಭಾಗಿತ್ವದಲ್ಲಿ ಜನವರಿ 11 ರಂದು ಬೆಳಿಗ್ಗೆ 8.30ರಿಂದ ಸಂಜೆ 4.15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ(ರಿ ) ಮಂಗಳೂರು ಇದರ ಕಾರ್ಯದರ್ಶಿಗಳಾದ ಹೆಚ್ ನಾಗರಾಜ್ ಭಟ್ ನಗರದ ಚೇತನ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ….