“ಭೂದಾನ ಚಳುವಳಿಯೇ, ಭೂಮಸೂದೆ ಕಾಯ್ದೆಗೆ ಪ್ರೇರಣೆ : ಪಿ .ಸೋಮಪ್ಪ
ಮಂಜೇಶ್ವರ : ಮಹಾತ್ಮಾ ಗಾಂಧಿಜಿಯವರ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳುವಳಿಯಿಂದ ಪ್ರೇರಿತರಾಗಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಭೂಮಸೂದೆ ಕಾಯ್ದೆಯನ್ನು ಜಾರಿಗೆ ತಂದರು. ಉಳುವವನೇ ಹೊಲದೊಡೆಯ ಎಂಬ ಪರಿಕಲ್ಪನೆ ವಿನೋಬಾ ಭಾವೆಯವರದ್ದಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಸೋಮಪ್ಪ ಹೇಳಿದ್ದಾರೆ. ಅವರು ವರ್ಕಾಡಿಯಲ್ಲಿ ಜರುಗಿದ ಆಚಾರ್ಯ ವಿನೋಬಾ ಭಾವೆಯವರ 130 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿನೋಬಾ – ವೆಂಕಟೇಶರಾವ್ ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಸಂಚಾಲಕ…