ಮುಂಗಾರು ಮಳೆ ಕಾಸರಗೋಡು ಜಿಲ್ಲೆಗೆ ಸಂಕಷ್ಟ ತರಲಿದೆಯಾ?
ಮಂಜೇಶ್ವರ: ಹವಾಮಾನ ವೈಪರೀತ್ಯ ಸಹಿತ ವಿವಿಧ ಕಾರಣಗಳಿಂದ ಈ ಬಾರಿ ಬೇಸಿಗೆ ಮಳೆ ಸಹಿತ ವಾಯುಭಾರ ಕುಸಿತದ ಪರಿಣಾಮ ಆಗಾಗ ಮಳೆ ಬೀಳುತ್ತಿದ್ದು, ಸ್ಥಳೀಯಾಡಳಿತ ಸಂಸ್ಥೆಗಳು ಸಹಿತ ಆಡಳಿತ ಯಂತ್ರ ನಿಷ್ಕ್ರೀಯವಾಗಿದ್ದು ಜನರು ಆತಂಕ ಪಡುವಂತಾಗಿದೆ. ಜಲಜೀವನ ಮಿಷನ್, ದೂರವಾಣಿ-ಮೊಬೈಲ್, ಕುಡಿಯುವ ನೀರು ಪೂರೈಕೆ ಮೊದಲಾದವುಗಳು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅವ್ಯವಸ್ಥೆಗಳು ಮುಂದಿನ ಮಳೆಗಾಲವನ್ನು ತೀವ್ರ ಸ್ವರೂಪದಲ್ಲಿ ಅಲ್ಲೋಲ ಕಲ್ಲೋಲಗೊಳಿಸುವ ಅತಂತ್ರತೆಗಳು ಭವಿಷ್ಯವನ್ನು ಕರಾಳಗೊಳಿಸುವ ಸೂಚನೆ ಕಂಡುಬಂದಿದೆ.ಅಂತರ್ ರಾಜ್ಯ ಸಂಪರ್ಕದ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ…