ಪೊಸೋಟು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಹೊಸಂಗಡಿ ಕಜೆ ನಿವಾಸಿ ದಾರುಣ ಸಾವು

ಮಂಜೇಶ್ವರ : ಪೊಸೋಟು ರಾಷ್ಟ್ರೀಯ ಹೆದ್ದಾರಿಯ ರಸ್ತೆ ದಾಟಲು ಸರ್ವೀಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಜಿಗಿದಾಗ ಕಾರೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಬಂಗ್ರ ಮಂಜೇಶ್ವರ ವಾಮಂಜೂರು ಕಜೆ ನಿವಾಸಿ ಸಾದಿಕ್ ಅಪಘಾತದಲ್ಲಿ ಸಾವನ್ನಪ್ಪಿದ ಯುವಕನಾಗಿದ್ದಾನೆ. ಸೋಮವಾರ ರಾತ್ರಿ 10.30 ಗಂಟೆಯ ಸುಮಾರಿಗೆ ತಲಪಾಡಿಯಿಂದ ಕಾಸರಗೋಡಿಗೆ ತೆರಳುತಿದ್ದ ಇನೋವಾ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಮಂಜೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Read More

ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಓಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ ಜೂನ್-10 ರಂದು

ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಓಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆಯು ದಿನಾಂಕ 10.06. 2025ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಾನ್ಯ ಸಹಕಾರಿ ಮಂತ್ರಿಗಳಾದ ವಿ. ಎನ್ ವಾಸವನ್ ಇವರಿಂದ ಉದ್ಘಾಟನೆಗೊಳ್ಳಲಿದೆ. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ . ಭದ್ರತಾ ಕೊಠಡಿಯನ್ನು ಉದುಮ ಶಾಸಕ ಶ್ರೀ ಸಿ. ಎಚ್. ಕುಂಞಂಬು ಉದ್ಘಾಟಿಸಲಿದ್ದಾರೆ. ಕೌಂಟರ್ ನ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಮಾಡಲಿದ್ದಾರೆ. ಕಾಸರಗೋಡು ಕೋ-ಒಪರೇಟಿವ್…

Read More

ಕಾಸರಗೋಡಿನಲ್ಲಿ ಜೂನ್ 15 ಕ್ಕೆ ಭಜನಾ ಕಮ್ಮಟಕ್ಕೆ ಸಿದ್ಧತೆ

ಕಾಸರಗೋಡು : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ವತಿಯಿಂದ ಕಾಸರಗೋಡಿನಲ್ಲಿ ಮೊಟ್ಟಮೊದಲ ಬಾರಿಗೆ ಭಜನಾ ಕಮ್ಮಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿಸಿದ್ದತಾ ಸಭೆ ಜರಗಿತು. ಭಜನಾ ಪರಿಷತ್ ಅಧ್ಯಕ್ಷರಾದ ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಭಜನಾ ಕಮ್ಮಟದ ರೂಪು ರೇಖೆಯನ್ನು ತಯಾರಿಸಿ ಸದಸ್ಯರು ಮಾಡ ಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು. ಜಿಲ್ಲಾ ಸಮನ್ವಯ ಅಧಿಕಾರಿ ಶ್ರೀ ಸಂತೋಷ್. ಪಿ. ಅಳಿಯೂರು ಇವರು ಮೊದಲ ಬಾರಿಗೆ…

Read More

ಮಂಗಳೂರು ವಿ.ವಿ ಯಲ್ಲಿ ಬಿ.ಎ ಪ್ರವಾಸೋಧ್ಯಮ ಮುಚ್ಚುಗಡೆ ಪುನರಾರಂಭಕ್ಕೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ೨೦೨೫-೨೬ ಶೈಕ್ಷಣಿಕ ವರ್ಷದಲ್ಲಿ ಬಹುಬೇಡಿಕೆಯುಳ್ಳ ಪ್ರವಾಸೋಧ್ಯಮ ವಿಷಯವನ್ನೊಳಗೊಂಡ ಟ್ರಾವೆಲ್ & ಟೊರೀಸಮ್ ಮ್ಯಾನೇಜ್ಮೆಂಟ್ ಕೋರ್ಸ್ ನ್ನು ಸ್ಥಗಿತಗೊಳಿಸಿದ್ದು, ಇದನ್ನು ಮುಂದುವರಿಸುವಂತೆ ಕರ್ನಾಟಕ ಸರಕಾರದ ಉನ್ನತ ಸಚಿವ ಡಾ. ಎಂ ಸಿ ಸುಧಾಕರ್ ರವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ೨೦೦೯ ಬಿಎ ಪದವಿಯಲ್ಲಿ ಐಚ್ಚಿಕ ವಿಷಯವಾಗಿ ಈ ಕೋರ್ಸ್ ಆರಂಬಿಸಲಾಗಿತ್ತು. ಈ ವಿಷ್ಯದಲ್ಲಿ ಪದವಿ ಮಾಡಿದವರು ಉನ್ನತ ವ್ಯಾಸಂಗ ಹಾಗೂ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಉದ್ದಿಮೆ ಅತೀ ವೇಗವಾಗಿ ಬೆಳೆಯುತ್ತಿರುವ ಉದ್ಯೋಮವಾಗಿದ್ದು…

Read More

ಕಾಸರಗೋಡಿನಲ್ಲಿ ಜೂನ್ 15 ಕ್ಕೆ ಭಜನಾ ಕಮ್ಮಟಕ್ಕೆ ಸಿದ್ಧತೆ

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ವತಿಯಿಂದ ಕಾಸರಗೋಡಿನಲ್ಲಿ ಮೊಟ್ಟಮೊದಲ ಬಾರಿಗೆ ಭಜನಾ ಕಮ್ಮಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿಸಿದ್ದತಾ ಸಭೆ ಜರಗಿತು. ಭಜನಾ ಪರಿಷತ್ ಅಧ್ಯಕ್ಷರಾದ ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಭಜನಾ ಕಮ್ಮಟದ ರೂಪು ರೇಖೆಯನ್ನು ತಯಾರಿಸಿ ಸದಸ್ಯರು ಮಾಡ ಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು.ಜಿಲ್ಲಾ ಸಮನ್ವಯ ಅಧಿಕಾರಿ ಶ್ರೀ ಸಂತೋಷ್. ಪಿ. ಅಳಿಯೂರು ಇವರು ಮೊದಲ ಬಾರಿಗೆ ಕಾಸರಗೋಡಿನಲ್ಲಿ ನಡೆಯುವ ಈ…

Read More

ಮಿಂಜ ಗ್ರಾಮ ಪಂಚಾಯತ್ ಮಜಿಬೈಲ್ ನಲ್ಲಿಇತ್ತೀಚಿನ ಮಳೆ ತಂದ ಅವಾಂತರ. ಬಾರಿ ನಾಶ ನಷ್ಟ,ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮಾದರಿಯಾದ ಗ್ರಾಮಸ್ಥರು

ಮಂಜೇಶ್ವರ : ಮೀಂಜ ಗ್ರಾಮ ಪಂಚಾಯತು ವ್ಯಾಪ್ತಿಯ ಮಜಿಬೈಲ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಅಪಾರವಾದ ನೀರಿನ ಪ್ರವಾಹ ಸಂಭವಿಸಿದ ಪರಿಣಾಮ, ಗ್ರಾಮದಲ್ಲಿನ ತೋಡಿನ ಸೈಡ್ ಬಂಡ್ ಕಟ್ಟ ಒಡೆದು ದೊಡ್ಡ ನೀರಿನ ಹರಿವು ಹರಿದು ಬಂದು 75 ಹೆಕ್ಟರ್ ಭತ್ತದ ಕೃಷಿ ಭೂಮಿಯನ್ನು ಸಂಪೂರ್ಣ ನಾಶಮಾಡುವುದರ ಜೊತೆಯಾಗಿ ತೋಡಿನ ಬದಿಯ ಸುಮಾರು 150 ಕುಟುಂಬಗಳು ಸಂಚರಿಸಲು ನಿರ್ಮಾಣ ಮಾಡಲಾಗಿದ್ದ ರಸ್ತೆಯಲ್ಲಿ ನಿಲುಗಡೆಗೊಂಡ ಕಾರುಗಳು ಸೇರಿದಂತೆ ಹಲವು ವಾಹನಗಳು ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿ ರಾಷ್ಟ್ರ ಮಟ್ಟದ…

Read More

ಪುತ್ತಿಗೆ ಶ್ರೀ ಧೂಮಾವತೀ ಕೋಮರಾಯ ಚಾಮುಂಡೇಶ್ವರಿ ಸಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಅನುಜ್ಞ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ

ಇತಿಹಾಸ ಪ್ರಸಿದ್ಧ 18 ದೈವಸ್ಥಾನಗಳಿಲ್ಲಿ ಒಂದಾದ ಪುತ್ತಿಗೆ ಶ್ರೀ ಧೂಮಾವತೀ ಕೋಮರಾಯ ಚಾಮುಂಡೇಶ್ವರಿ ಸಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಅನುಜ್ಞ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಕಾರ್ಯವೂ ತಂತ್ರಿವರ್ಯರಾದ ದೇಲಂಪಾಡಿ ಶ್ರೀ ಗಣೇಶ್ ಇವರ ದಿವ್ಯ ಹಸ್ತದಲ್ಲಿ ನೇರವೇರಿತು. ಈ ಸಂದರ್ಭದಲ್ಲಿ ಬಾಕುಡ ಸಮಾಜ 18 ದೈವಸ್ಥಾನದ ದೈವದ ಪಾತ್ರಿ ಮತ್ತು ಕಾರ್ನ ವರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಶ್ರೀ ಶಂಕರ ಅಡ್ಕ ಶ್ರೀ ವಸಂತ ಬಾಡೂರು ಶ್ರೀ ಸುರೇಶ್ ಕುಂಜತ್ತೂರು. ಶ್ರೀ ತುಳಸಿದಾಸ್ ಮಂಜೇಶ್ವರ…

Read More

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ನೆರವು,ಜೊತೆಗೆ ಯೋಗಕ್ಷೇಮ ವಿಚಾರಿಸಿದ ಲಂಚುಲಾಲ್ ಕೆ.ಎಸ್

ಸ್ವಾರ್ಥ ಹೆಚ್ಚುತ್ತಿರುವ ಮತ್ತು ಮಾನವೀಯತೆ ಮರೆಯಲಾಗುತ್ತಿರುವ ಕಾಲದಲ್ಲಿ, ಶಿಕ್ಷಣ ಬಯಸುವ ಮಗುವಿಗೆ ಶಿಕ್ಷಣ, ಕಂಕಣ ಕೂಡಿ ಬಂದಿರುವ ಮನೆಮಗಳಿಗೆ ಮದುವೆ, ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವವನಿಗೆ ಚಿಕಿತ್ಸೆ ಇಂತಹ ಅನೇಕ ಮಹತ್ಕಾರ್ಯಗಳನ್ನು ಯಾವುದೇ ಪಲಾಷೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಮಾಡಿಕೊಂದು ಬಂದವರು ಶ್ರೀ ಲಂಚುಲಾಲ್ ಕೆ.ಎಸ್‌. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಕೇವಲ ಚಿಕಿತ್ಸೆ ವೆಚ್ಚಮಾತ್ರವಲ್ಲದೆ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ಮಾಡುವುದು – ಜನರ ಗಮನ ಸೆಳೆಯಲು ಅಲ್ಲ, ಪ್ರಶಂಸೆಗಾಗಿ ಅಲ್ಲ, ಅದು ಅವರ ಹೃದಯದಿಂದ ಬಂದ ಕಾಳಜಿ.ಅವರು ಮಾಡಿದ…

Read More

ಹನಿಮೂನ್ ಗೆ ತೆರಳಿದ ಜೋಡಿ ನಾಪತ್ತೆ ಪ್ರಕರಣ ಇನ್ನೂ ಕಗ್ಗಂಟಾಗಿದೆ

ಯುವಕ ಶವವಾಗಿ ಪತ್ತೆಯಾದರೂ, ಯುವತಿ ವಿಚಾರ ಇನ್ನೂ ಪ್ರಶ್ನೆಯಾಗಿ ಉಳಿದಿದೆ ಇಂದೋರ್ ನಲ್ಲಿ ಸಾರಿಗೆ ವ್ಯವಹಾರ ಮಾಡುತಿದ್ದ ರಘುವಂಶಿ ಫ್ಯಾಮಿಲಿ.ಮನೆಯ ಪುತ್ರ ರಾಧಾ ರಘುವಂಶಿಯ ವಿವಾಹವು ಸೋನಮ್ ಎನ್ನುವ ಯುವತಿಯೊಂದಿಗೆ ಮೇ 11 ರಂದು ವಿವಾಹವಾಗಿತ್ತು.ಎರಡೂ ಕುಟುಂಬದ ಒಪ್ಪಿಗೆಯಿಂದಲೇ ಈ ವಿವಾಹ ನೆರವೇರಿತ್ತು. ವಿವಾಹ ನಂತರ ಅನಿಮೂನ್ ಗೆಂದು ಮೊದಲು ಕಾಶ್ಮೀರಕ್ಕೆ ತೆರಳುವ ಆಲೋಚನೆ ಮಾಡಿದ್ದರು. ಪೆಹಲ್ ಗಾವ್ ಘಟನೆಯ ನಂತರ ತಮ್ಮ ತೀರ್ಮಾನದಲ್ಲಿ ಬದಲಾವಣೆ ಮಾಡಿಕೊಂಡು ಅಸ್ಸಾಂ ಗೆ ತೆರಳಲು ನಿರ್ಧರಿಸಿ ಮೇ 20 ರಂದು…

Read More

ಮಂಜೇಶ್ವರದೆಲ್ಲೆಡೆ ಸಂಭ್ರಮದ ಬಕ್ರೀದ್ ಹಬ್ಬ

ಮಂಜೇಶ್ವರ: ಮಂಜೇಶ್ವರದ ಎಲ್ಲೆಡೆ ಶನಿವಾರ ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ಈದುಲ್ ಅಝ್ಹಾ(ಬಕ್ರೀದ್) ಅನ್ನು ಆಚರಿಸಲಾಗುತ್ತಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಮುಸ್ಲಿಮರು ಮಸೀದಿ, ಈದ್ದಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಸಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಹಾಗೂ ನೆರೆಮನೆ, ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡುಬಂತು. ತೂಮಿನಾಡು ಅಲ್ ಫತಾಃ ಜುಮಾ ಮಸೀದಿ, ಕುಂಜತ್ತೂರು ಮಸ್ಜಿದ್ ನೂರ್, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಜುಮಾ ಮಸೀದಿ, ಉದ್ಯಾವರ ಜುಮಾ ಮಸೀದಿ, ಪೊಸೋಟು…

Read More
error: Content is protected !!