ಸಂಕಷ್ಟದ ಸಾಥಿಗೆ ಕೃತಜ್ಞತೆಯ ಹರಕೆ: ಕೇರಳದ ಅರ್ಜುನನ ತಾಯಿಯಿಂದ ಮಂಜೇಶ್ವರದ ಅಭ್ಯರ್ಥಿಗೆ ‘ಗೆಲುವಿನ ಇಡುಗಂಟು
ಮಂಜೇಶ್ವರ: ರಾಜಕೀಯದ ಆಚೆಗೂ ಮಾನವೀಯ ಸಂಬಂಧಗಳು ಎಷ್ಟು ಗಾಢವಾಗಿರುತ್ತವೆ ಎಂಬುದಕ್ಕೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಹಾಗೂ ಶಿರೂರು ಭೂಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಕುಟುಂಬದ ನಡುವಿನ ಭೇಟಿ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಲಾರಿ ಸಹಿತ ಗಂಗಾವಳಿ ನದಿ ಪಾಲಾಗಿದ್ದ ಅರ್ಜುನನ ಪತ್ತೆಗಾಗಿ ನಡೆದ ಸುದೀರ್ಘ 70ಕ್ಕೂ ಹೆಚ್ಚು ದಿನಗಳ ಕಾರ್ಯಾಚರಣೆಯ ವೇಳೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸೇತುವೆಯಂತೆ ನಿಂತು ಅಶ್ರಫ್…