ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಪಂಚಮ ದಿನ
ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಯಕ್ಷಮಂಜರಿ ಯ ಪಂಚಮ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಎಸ್ ನಾಯಕ್ ಆಂಡ್ ಅಸೋಸಿಯೇಟ್ಸ್ ನ ‘ಪಾಲುದಾರರಾದ ಶ್ರೀ ಎಸ್.ಎಸ್.ನಾಯಕ ಇವರು ಮಹಿಳೆಯೊಬ್ಬಳು ಶಿಕ್ಷಿತಳಾದರೆ ಸಮಾಜವೊಂದು ಉದ್ಧಾರವಾದಂತೆ ನಮ್ಮ ಧರ್ಮ ಪುರಾಣ ಕಾಲದಿಂದಲೂ ಸ್ತ್ರೀಯರಿಗೆ ಉನ್ನತವಾದ ಸ್ಥಾನವನ್ನು ನೀಡಿದೆ. ನಮ್ಮ ಧರ್ಮಗ್ರಂಥಗಳಾದ ಭಗವದ್ಗೀತೆ, ಹದಿನೆಂಟು ಪುರಾಣಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾದುದು ಅವುಗಳನ್ನು ಎಲ್ಲರೂ ಅಭ್ಯಸಿಸಬೇಕು ಸಾಧ್ಯವಿಲ್ಲವಾದರೆ ಅವುಗಳ ತಾತ್ಪರ್ಯದಂತೆ ಪರಪೀಡನೆ…