ಮಂಗಳೂರು ಮಾರುಕಟ್ಟೆಯ ತರಕಾರಿ ಚೀಲದಿಂದ ತಾಂತ್ರಿಕ ಕ್ರಾಂತಿಯವರೆಗೆ… ‘ಯತಿಕಾರ್ಪ್‌’ ಯತೀಶ್ ನಡೆದು ಬಂದ ಹಾದಿಯ ಯಶೋಗಾಥೆ … !

ಮಂಗಳೂರು: ಇಂದು ಲಕ್ಷಾಂತರ ರೂಪಾಯಿ ಸುರಿದರೆ ಮಾತ್ರ ಸಿಗುವ ಹೈಟೆಕ್ ಶಿಕ್ಷಣ, ಮುಂದಿನ ದಿನಗಳಲ್ಲಿ ಬಡ ಮಗನಿಗೂ ಸಿಗಬೇಕು ಅನ್ನೋದು ನನ್ನ ಗುರಿ ಯಾಕೆಂದರೆ ನಾನು ಬೆಂಕಿಯಲ್ಲಿ ಅರಳಿದ ಹೂವು . ತರಕಾರಿ ಚೀಲಹೊರುವಾಗಲೇ ಯತಿಕಾರ್ಪ್‌ ಕನಸು ಕಂಡವನು ನಾನು ಎಂದು ಯತಿಕಾರ್ಪ್ ಇಂಡಿಯಾ ಸಂಸ್ಥೆಯ ಸಿಇಒ ಯತೀಶ್ ಕೆ.ಎಸ್. ಮನದ ಮಾತನ್ನು ಬಿಚ್ಚಿಟ್ಟರು. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ” ನಾನು 2014ರಲ್ಲಿ ತಾಂತ್ರಿಕ ಶಿಕ್ಷಣ ಕಲಿಯಬೇಕು ಅನ್ನೋ ಕನಸ ಹೊತ್ತು…

Read More

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಮುಂದೆ ೧೨ ಬೇಡಿಕೆಗಳನ್ನು ಮುಂದಿಟ್ಟ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ , ಬೇಡಿಕೆಗೆ ಒಪ್ಪದಿದ್ದರೆ ಮಾರ್ಚ್ ೧೬ ರಿಂದ ಕೆಲಸ ಕಾರ್ಯ ಸ್ಥಗಿತ : ಅಧ್ಯಕ್ಷ ಡಾ. ದೀಪಕ್ ರೈ

ಮಂಗಳೂರು: ರಾಜ್ಯದ ಸರಕಾರಿ ಆರೋಗ್ಯ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಾ ಇಲ್ಲ, ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧ ಸರಬರಾಜು ಮಾಡಲು ಸಾಧ್ಯವಾಗದ ಇಲಾಖೆಯು ಸಾರ್ವಜನಿಕರಿಗೆ ಯಾವ ಆರೋಗ್ಯ ಭಾಗ್ಯ ನೀಡುತ್ತಿದೆ ಎಂದುಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷ ಡಾ. ದೀಪಕ್ ರೈ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಿಡಿದಿದ್ದ ಅವರು , ರಾಜ್ಯ ಸರ್ಕಾರದ ಧೋರಣೆ ಹಾಗೂ ಆರೋಗ್ಯ ಇಲಾಖೆ ಜವಾಬ್ದಾರಿ ಇಲ್ಲದ…

Read More

ಮಾರ್ಚ್ 1 ರಂದು “ಗ್ರಂಥ” ಪ್ರಾಂತೀಯ ಸಮ್ಮಿಲನ …. !

ಮಂಗಳೂರು: Lions Clubs International‌ನ ಲಯನ್ಸ್ ಜಿಲ್ಲೆ 317 ಡಿ, ಪ್ರಾಂತ್ಯ 2ರ “ಗ್ರಂಥ” ಪ್ರಾಂತೀಯ ಸಮ್ಮಿಲನವು ಮಾರ್ಚ್ 1 ರಂದು ಮಂಗಳೂರಿನ ಪಿಲಿಕುಳ ಸೌಟ್ಸ್ ಭವನದಲ್ಲಿ ನಡೆಯಲಿದ್ದು ಇದಕ್ಕೆ Lions Club Mangalore Ashoknagar ಹಾಗೂ ಪ್ರಾಂತ್ಯ 2ರ ಇತರ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು PMJF-D2 ಪ್ರಾದೇಶಿಕ ಅಧ್ಯಕ್ಷರಾದ ಲಯನ್ ಚರಣ್ ಆಳ್ವಾ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮಕ್ಕೆ ಕದ್ರಿ ದೇವಾಲಯದ ಅರ್ಚಕರಾದ ಕೃಷ್ಣ…

Read More

ಸಿಪಿಎಂ ಪಕ್ಷದ ಕುಂಬಳೆ ಏರಿಯಾ ಸೆಕ್ರೆಟರಿ ಮುಸ್ಲಿಂ ಲೀಗ್ ಏಜೆಂಟ್.-ಆದರ್ಶ ಬಿ ಎಂ

ಮಂಜೇಶ್ವರ: ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್, ಬಿಜೆಪಿ ಮದ್ಯೆ ಪೈಪೋಟಿ, ಆದರೂ 2006ರಲ್ಲಿ ಸಿ ಎಚ್ ಕುಂಞಬುಅನಿರೀಕ್ಷಿತ ವಾಗಿ ಗೆದ್ದ ಇತಿಹಾಸ ಇರುವ ಮಂಜೇಶ್ವರ ಮಂಡಲ ದಲ್ಲಿ ಈಗಿನ ಎಡರಂಗ ಗೆಲ್ಲುವ ಪ್ರಯತ್ನ ಮಾಡುತ್ತಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಗಂಭೀರ ಆರೋಪ.. ಕುಂಬಳೆ ಏರಿಯಾ ಸೆಕ್ರೆಟರಿ ಎಡರಂಗ ಸ್ಪರ್ದಿಸಲು ಟಿಕೇಟ್ ನೀಡಿದರು ಸ್ಪರ್ಧೆಗೆ ಇಳಿಯಲ್ಲ ಎಂದು ಎಡರಂಗದ ನೇತಾರ ರೆ ಹೇಳುತ್ತಾರೆ..ಯಾಕೆಂದರೆ ಮಂಜೇಶ್ವರ ಹಾಗೂ ಕಾಸರಗೋಡು ಮಂಡಲ ಗಳಲ್ಲಿ ಮುಸ್ಲಿಂ ಲೀಗ್…

Read More

ಬೆಳ್ಳೂರು ಕಲ್ಲಗ ಪಡ್ಡಾಯಿ ಮೂಲೆ ಅಪಘಾತ ವಲಯ: ಮನೆ ಮೇಲ್ಚಾವಣಿಗೆ ಕಾರು ಮಗುಚಿ ಇಬ್ಬರಿಗೆ ಗಾಯ

ಬೆಳ್ಳೂರು: ಇಲ್ಲಿನ ಕಲ್ಲಗ ಪಡ್ಡಾಯಿ ಮೂಲೆ ತಿರುವು ಪದೇ ಪದೇ ವಾಹನ ಅಫಘಾತದ ಅಸುರಕ್ಷಿತ ಪ್ರದೇಶವಾಗಿ ಬದಲಾಗಿದೆ. ನಿನ್ನೆ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದು ದುರ್ಘಟನೆ ನಡೆದ ಇದೇ ಸ್ಥಳದಲ್ಲಿ ಎರಡುಸತಿಂಗಳ ಹಿಂದೆಯೂ ಕಾರೊಂದು ಮಗುಚಿತ್ತು. ಎರಡೂ ಘಟನೆಗಳಲ್ಲಿ ಜೀವಾಪಾಯ ಸಂಭವಿಸದೇ ಇದ್ದರೂ ಈ ಪ್ರದೇಶ ಅಪಘಾತ ವಲಯವಾಗಿ ಬದಲಾಗಿದೆ ಎಂದು ನಾಗರಿಕರು ಆತಂಕ ಪ್ರಕಟಿಸಿದ್ದಾರೆ. ನಿನ್ನೆ ಅಪರಾಹ್ನ ಕರ್ನಾಟಕ ಭಾಗಕ್ಕೆ ಅಡಿಕೆ ಹೇರಿ ಕೊಂಡೊಯ್ಯುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿ…

Read More

ಕಾಸರಗೋಡಿಗೆ ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ನೇಮಕ – ಇಂಬುಶೇಖರ್ ಕೆ. ವರ್ಗಾವಣೆ

ಕಾಸರಗೋಡು: ವಿಧಾನಸಭಾ ಪೂರ್ವಭಾವಿಯಿಗಿ ಕಾಸರಗೋಡು ಜಿಲ್ಲಾಧಿಕಾರಿ ಇಂಬುಶೇಖ‌ರ್ ಕೆ. ಅವರನ್ನು ವರ್ಗಾಯಿಸಲಾಗಿದ್ದು, ನೂತನ ಜಿಲ್ಲಾಧಿಕಾರಿಯಿಗಿ ತ್ರಿಶೂರು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡ್ಯನ್ ಅವರನ್ನು ಕಾಸರಗೋಡಿಗೆ ನೇಮಿಸಿ ಆದೇಶವಾಗಿದೆಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಅರ್ಜುನ್ ಪಾಂಡ್ಯನ್ ಅವರ ಜೀವನಗಾಥೆ ಯುವ ಪೀಳಿಗೆಗೆ ದೊಡ್ಡ ಪ್ರೇರಣೆ. ಇಡುಕ್ಕಿಯ ಸಾಧಾರಣ ಕೃಷಿಕ ಮತ್ತು ಅಂಗನವಾಡಿ ಶಿಕ್ಷಕಿಯ ಮಗನಾದ ಇವರು, ಬಾಲ್ಯದಲ್ಲಿ ಚಹಾ ಎಲೆಯ ಚೀಲ ಹೊತ್ತು, ಟ್ಯಾಕ್ಸಿ ಚಾಲಕರಾಗಿ ದುಡಿದು ಬಡತನದ ವಿರುದ್ಧ ಹೋರಾಡಿದವರು. ​ಬಿ.ಟೆಕ್ ನಂತರ ಐಟಿ ಉದ್ಯೋಗ ಸಿಕ್ಕರೂ,…

Read More

ಡಾ.ಬಾಲಕೃಷ್ಣl ಎಸ್.ಮದ್ದೋಡಿ ಅವರಿಗೆ ಶ್ರೀ ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ

ಕೇರಳ ರಾಜ್ಯದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದಂಗವಾಗಿ ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಖ್ಯಾತ ಪರಿಸರವಾದಿ ಹಾಗೂ ಸಮಾಜ ಸೇವಾ ಕಾರ್ಯಕರ್ತ ಪ್ರಾಧ್ಯಾಪಕ ಡಾ.ಬಾಲಕೃಷ್ಣl ಎಸ್.ಮದ್ದೋಡಿ ಅವರಿಗೆ ಶ್ರೀ ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಕಾರ್ಯಕ್ರಮದಲ್ಲಿ ಶ್ರೀ ಮದಡೆನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು, ಗೋನಾಳದ ರಮೇಶ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಕೃಷ್ಣಪ್ರಸಾಧ ಕೂಡ್ಲು,ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ…

Read More

ಕಾಸರಗೋಡು -ಕರ್ನಾಟಕ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ನಾಡೋಜ, ನೇತ್ರಾಲಯ ಡಾ. ಕೃಷ್ಣಪ್ರಸಾದ್ ಕೂಡ್ಲು ರೀಗೆ ಕನ್ನಡ ಭವನದಿಂದ ವಿಶೇಷ ಗೌರವಾರ್ಪಣೆ,

ಕಾಸರಗೋಡು : ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಸರ್ವಧ್ಯಕ್ಷರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ಅವರೀಗೆ ಸಮ್ಮೇಳನ ಪ್ರಯೋಜಕರಾದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಮುತುವರ್ಜಿಯಲ್ಲಿ ವಿಶೇಷ ಸನ್ಮಾನ, ಗೌರವಾರ್ಪಣೆ ನಡೆಯಿತು. ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ, ಗದಗ ಗೋವಿನಾಳದ ಶ್ರೀ ಶ್ರೀ ರಮೇಶ ಮಹಾ ಸ್ವಾಮಿಗಳು ಸ್ಮರಣಿಕೆ ನೀಡಿ, ಡಾ. ವಾಮನ್ ರಾವ್…

Read More

ಅವ್ಯಸ್ಧೆಯಿಂದ ಸಾವು, ಕೂಡಲೇ ಪರಿಹಾರ ಘೋಷಿಸಿ-ಭೋವಿ ಮುಖಂಡ ಪವನ್ ಕುಮಾರ್ ಶಿರ್ವ

ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿರುವ ತಮಿಳುನಾಡು ಕಾರ್ಮಿಕನ ಸಾವಿಗೆ ಸರ್ಕಾರದ ಅವ್ಯವಸ್ಥೆಯೇ ನೇರ ಕಾರಣ… ಈ ಘಟನೆ ನಡೆದು ಎರಡು ದಿನಗಳಾದರೂ ಯಾವುದೇ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪರಿಹಾರದ ಭರವಸೆ ನೀಡಿಲ್ಲ… ಇಂಥ ನಿರ್ಲಕ್ಷ ಸಲ್ಲದು.. ಅಲ್ಲಿರುವ ಅವ್ಯವಸ್ಥೆಯನ್ನು ಸರ್ಕಾರ ಮತ್ತು ಮೀನುಗಾರಿಕೆ ಇಲಾಖೆ ಕೂಡಲೇ ಸರಿಪಡಿಸಬೇಕು.. ಅಲ್ಲಿ ಎಲ್ಲಾ ಬಡ ಜನಾಂಗದವರೇ ನಾ ಹೊಟ್ಟೆಪಾಡಿಗೆ ದುಡಿದುಕೊಂಡಿದ್ದು ಸರ್ಕಾರದ ಅಭಿವೃದ್ಧಿಯ ವೈಫಲ್ಯದಿಂದ ಜನರು ಸಾವಿಗೀಡಾಗಬೇಕಾಗಿದೆ.. ಈ ಸಮಸ್ಯೆಯಿಂದ ಇನ್ನಷ್ಟು ಜೀವ ಬಳಿ ಪಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಮೃತ…

Read More

ಬೇಕೂರು ಬ್ರಹ್ಮಶ್ರೀ ಮೊಗೇರ ದೈವಸ್ಥಾನದಲ್ಲಿ ಫೆ.28-ಮಾ.1ರಂದು ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ

ಉಪ್ಪಳ : ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಬೇಕೂರು ಇದರ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವವು ಫೆಬ್ರವರಿ 28 ಮತ್ತು ಮಾರ್ಚ್ 1, 2026ರಂದು ಭಕ್ತಿ ಭಾವಪೂರ್ಣವಾಗಿ ಜರುಗಲಿದೆ. ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪಚ್ಲಂಪಾರೆ ಇದರ ಗೌರವಾಧ್ಯಕ್ಷರು,ಚೌಡಿ ಚಾಮುಂಡೇಶ್ವರಿ ಆರಾಧಕರು ಹಾಗು ಶ್ರೀ ದೈವದ ಮಧ್ಯಸ್ಥರಾದ ಶ್ರೀ ಬಾಬು ಯು. ಪಚ್ಲಂಪಾರೆ ಅವರ ಕಾರ್ಮಿಕತ್ವದಲ್ಲಿ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ ನಡೆಯಲಿದ್ದು. ಫೆಬ್ರವರಿ 28ರಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ ,…

Read More
error: Content is protected !!