ವಯನಾಡಿನ ಕಳ್ಳಾಡಿ ಭೂಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ *7ಕ್ಕೆ ಏರಿಕೆಯಾಗಿದೆ. ಇಂದು ಬೆಳಿಗ್ಗೆ ನಡೆದ ಶೋಧ ಕಾರ್ಯಾಚರಣೆಯಲ್ಲಿ *ಮೂರು ಮಂದಿಯ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು *ಬಿಹಾರ ಮೂಲದ ಮೊಹಮ್ಮದ್ ಇಮ್ರಾನ್, *ಹಿಮಾಚಲ ಪ್ರದೇಶದ ರಾಹುಲ್ ಶರ್ಮಾ ಹಾಗೂ ಉತ್ತರ ಪ್ರದೇಶದ ಅಸರುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದೆ.

ದುರಂತದ ಮೂರನೇ ದಿನ ನಡೆದ ಶೋಧ ಕಾರ್ಯಾಚರಣೆಯಲ್ಲಿ ಮೊದಲ ವಲಯದಲ್ಲಿ (Zone-1) ಬಿಹಾರ ಮೂಲದ ಮೊಹಮ್ಮದ್ ಇಮ್ರಾನ್ ಅವರ ಮೃತದೇಹ ಪತ್ತೆಯಾಗಿದೆ. ಅವರು ಯೋಜನೆಯಲ್ಲಿ ಎಕ್ಸ್ಕವೇಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

ಮೀನಾಕ್ಷಿಪುಳ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಎಂಜಿನಿಯರ್ ಆಗಿದ್ದ ಹಿಮಾಚಲ ಪ್ರದೇಶದ ರಾಹುಲ್ ಶರ್ಮಾ ಅವರ ಮೃತದೇಹ ಪತ್ತೆಯಾಗಿದೆ.
ಅದೇ ಪ್ರದೇಶದಿಂದ ಉತ್ತರ ಪ್ರದೇಶದ ಅಸರುದ್ದೀನ್ ಅನ್ಸಾರಿ ಅವರ ಮೃತದೇಹವೂ ಪತ್ತೆಯಾಗಿದೆ. ಅವರು ಗುತ್ತಿಗೆ ಕಂಪನಿಯಲ್ಲಿ ಸರ್ವೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.


