ಅಯ್ಯಪ್ಪ ಮಾಲೆಧಾರಿಗಳೇ ಪಂದಳಂ ಹೋಟೆಲ್‌ನಲ್ಲಿ ಊಟ ಮಾಡುವಾಗ ಇರಲಿ ಎಚ್ಚರ!: ಅಡುಗೆ ಕೋಣೆಯಲ್ಲಿ ಕೋಳಿ ತ್ಯಾಜ್ಯ, ಕಲುಷಿತ ಆಹಾರ ಪತ್ತೆ!

ಶಬರಿಮಲೆ :ಶಬರಿಮಲೆಗೆ ದೇಶದ ನಾನಾ ಪ್ರದೇಶಗಳಿಂದ ಶುದ್ಧ ಸಸ್ಯಹಾರ ಸೇವಿಸಿ, 48 ದಿನಗಳ ವೃತಾಚರಣೆ ನಡೆಸಿ ಸನ್ನಿಧಾನಕ್ಕೆ ಬರುತ್ತಾರೆ. ಆದರೆ ಪಂದಳಂನ ಹೋಟೆಲ್‌ನಲ್ಲಿಯೇ ಕೋಳಿಯ ತ್ಯಾಜ್ಯ, ಕಲುಷಿತ ಆಹಾರ ಪತ್ತೆಯಾಗಿದ್ದು ಭಕ್ತರು ಎಚ್ಚರಿಕೆಯಿಂದ ಊಟ ಮಾಡುವ ಅಗತ್ಯವಿದೆ ವಿಶೇಷವೆಂದರೆ ಈ ಹೋಟೆಲ್ಗಳನ್ನು ವಲಸೆ ಕಾರ್ಮಿಕರು ನಡೆಸುತ್ತಿದ್ದರು.ವಲಸೆ ಕಾರ್ಮಿಕರು ನಡೆಸುತ್ತಿದ್ದ ವರವಾನಗಿ ರಹಿತ ಹೋಟೆಲ್‌ಗಳ ವಿರುದ್ಧ ಪಂತಲಂ ಪುರಸಭೆಯ ಆರೋಗ್ಯ ವಿಭಾಗ ಕ್ರಮ ಕೈಗೊಂಡಿದ್ದು ಪ್ರತಿಯೊಂದು ಘಟಕಕ್ಕೆ ₹10,000 ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದ. ಈ ಹೋಟೆಲ್‌ಗಳು ಕಡಕ್ಕಾಡ್ ಕುಟುಂಬ ಆರೋಗ್ಯ ಕೇಂದ್ರದ ಹತ್ತಿರದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ಸುಮಾರು ಹತ್ತು ದಿನಗಳ ಹಿಂದೆ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ನಡೆಸಿದ ಜಂಟಿ ತಪಾಸಣೆಯಲ್ಲಿ ಹೋಟೆಲ್‌ಗಳನ್ನು ಮುಚ್ಚಲಾಗಿತ್ತಾದರೂ, ಅಧಿಕಾರಿಗಳ ಕಣ್ಣಪ್ಪಿಸಿ ಸಂಜೆ ಮತ್ತೆ ಹೋಟೆಲ್ಗಳನ್ನು ತೆರೆದಿರುವುದು ಗಮನಕ್ಕೆ ಬಂದಿದೆ. ಥನ್ನಲ್ಲೂರ್ ಸಾಬು ಕಟ್ಟಡದ ಒಳಗಿನ ಅಂಗಡಿಗಳನ್ನು ಪಶ್ಚಿಮ ಬಂಗಾಳ ಮೂಲದ ತಜ್ಞರಾ ಖತುನ್, ಎಸ್.ಕೆ. ಸುಕುಮಾರ್ ಮತ್ತು ಡಲುವಾರ್ ಹುಸೇನ್ ನಡೆಸುತ್ತಿದ್ದರು.ಇತ್ತೀಚಿನ ದಾಳಿ ವೇಳೆ, ಸ್ನಾನಗೃಹದ ಯುರೋಪಿಯನ್ ಶೌಚಾಲಯದ ಒಳಗೆ ಸ್ಟೈನರ್ ಬಳಸಿ ಕೋಳಿ ತೊಳೆಯುತ್ತಿರುವ ನೌಕರರನ್ನು ಅಧಿಕಾರಿಗಳು ಪತ್ತೆಹಚ್ಚಿದರು. ಪರದೆಯಿಂದ ಮುಚ್ಚಿದ ಅಸುರಕ್ಷಿತ ಸ್ಥಳದಲ್ಲಿ ಅಡುಗ ನಡೆಯುತ್ತಿದ್ದು ಅಡುಗೆಮನೆ ಮತ್ತು ಊಟ ವಿಭಾಗಗಳು ಅತ್ಯಂತ ಆಶುದ್ಧ ಸ್ಥಿತಿಯಲ್ಲಿದ್ದವು. ತಂಡ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ತೀವು ದುರ್ವಾಸನೆ ಹರಡುತ್ತಿದ್ದು ಹಳಯ ಕೋಳಿ ಹಾಗೂ ಕಲುಷಿತ ಆಹಾರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಸಂದರ್ಶನಗೊಂಡ ಎರಡೂ ಕಟ್ಟಡಗಳಲ್ಲಿ ಅಪಾಯಕಾರಿ ಪರಿಸ್ಥಿತಿ ಇತ್ತು ಅಧಿಕಾರಿಗಳು ತಿಳಿಸಿದ್ದಾರೆ. ವರಾಂಡಾಗಳು ಮತ್ತು ಕೂಠಡಿಗಳಲ್ಲಿ ತ್ಯಾಜ್ಯ ತುಂಬಿಹೋಗಿದ್ದು ಶೌಚಾಲಯಗಳು ಅತ್ಯಂತ ಕಟ್ಟ ಸ್ಥಿತಿಯಲ್ಲಿದ್ದವು. ತ್ಯಾಜ್ಯ ನೀರನ್ನು ಕಟ್ಟಡದ ಹಿಂಭಾಗದಲ್ಲಿಯೇ ಸುರಿಸಲಾಗುತ್ತಿದ್ದು ಕಿರಿದಾದ ಚರಂಡಿಯ ಮೂಲಕ ಹತ್ತಿರದ ಭತ್ತದ ಗದ್ದೆಗೆ ಹರಿಯುತ್ತಿತ್ತು,ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಹತ್ತುಕ್ಕಿಂತ ಹೆಚ್ಚು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಜೋಡಿಸಿರುವುದು ಕಂಡುಬಂದಿದೆ. ಅದೇ ಕಟ್ಟಡದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಕುಟುಂಬಗಳು ವಾಸವಾಗಿದ್ದು ಬೆಂಕಿ ಅಥವಾ ಅವಘಡ ಸಂಭವಿಸಿದರ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸಂಬಂಧಿತ ನಿಬಂಧನೆಗಳಡಿ ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ಪುರಸಭೆಯ ಆರೋಗ್ಯ ಮೇಲ್ವಿಚಾರಕ ಎಸ್.ಎಲ್. ವಲಯ ಸುಂದರ್, ಸಾರ್ವಜನಿಕ ಆರೋಗ್ಯ ನಿರೀಕ್ಷಕರಾದ ಸುಜಿತಾ ಎಸ್. ಪಿಳ್ಳೆ ಮತ್ತು ಅಮಲ್ ಪಿ. ನಾಯರ್, ಎಸ್‌ಐ ಆರ್. ಮನೋಜ್ ಕುಮಾರ್ ನೇತೃತ್ವದ ಪೋಲೀಸ್ ತಂಡ, ವೈದ್ಯಕೀಯ ಅಧಿಕಾರಿ ಡಾ. ಆರ್. ಹರಿಕುಮಾರ್ ಹಾಗೂ ಆರೋಗ್ಯ ನಿರೀಕ್ಷಕ ರಜಿಯಾ ಬೇಗಂ ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!