ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳಿಗೆ “ಕನ್ನಡ ರಾಜ್ಯೋತ್ಸವ ಸಾಧಕ ದಂಪತಿ ಪ್ರಶಸ್ತಿ 2025.

ಕಾಸರಗೋಡು :ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಾಯ -ಕನ್ನಡ ಭವನ “ಉಚಿತ ವಸತಿ ಸೌಕರ್ಯ “ರಜತ ಸಂಭ್ರಮ ವಿಶೇಷ ಕರ್ನಾಟಕದ ಜಿಲ್ಲೆಗಳಲ್ಲಿ ಘಟಕ ಸ್ಥಾಪನೆಯೊಂದಿಗೆ ಕನ್ನಡ ಪರ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುವ ದಂಪತಿಗಳಿಗೆ ರೋ. ಬಿ. ಶಿವಕುಮಾರ್ ಸಾರತ್ಯದ “ಸ್ವರ್ಣಭೂಮಿ ಫೌಂಡೇಶನ್, ಕೋಲಾರ -ಕರ್ನಾಟಕ ಕನ್ನಡ ರಾಜ್ಯೋತ್ಸವ ಸಾಧಕ ಕನ್ನಡ ದಂಪತಿ ಪ್ರಶಸ್ತಿ ನೀಡಿ ಗೌರವಿಸಿತು.

ಕಾಸರಗೋಡು ಕನ್ನಡ ಭವನದಲ್ಲಿ 15.11.2025.ರಂದು ಒಂದಿಡೀ ದಿನ ನಡೆದ “ಕೋಲಾರ -ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ “ಕಾರ್ಯಕ್ರಮದಲ್ಲಿ ಸ್ವರ್ಣಭೂಮಿ ಫೌಂಡೇಶನ್, ಕರ್ನಾಟಕ ಸ್ಥಾಪಕ ಅಧ್ಯಕ್ಷರಾದ ರೋ. ಬಿ. ಶಿವಕುಮಾರ್ ಪ್ರಶಸ್ತಿ ನೀಡಿದರು. ಕೋಲಾರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾರಣಪ್ಪ, ಮೇರು ಕವಿ, ಸಾಹಿತಿ, ಪ್ರಾಂಶುಪಾಲ ಶರಣಪ್ಪ ಗಬ್ಬೂರು,ಬಿ. ವೆಂಕಟ ರಾಮ, ಇಂಚರ ನಾರಾಯಣ ಸ್ವಾಮಿ,ಪ್ರಾಂಶುಪಾಲ ರಾಜೇಶ್ಚಂದ್ರ ಕೆ. ಪಿ. ಕೆ. ಜಿ. ವೆಂಕಟೇಶ್ ಶಿವಮೊಗ್ಗ, ಡಾ. ರವೀಂದ್ರ ಜೆಪ್ಪು, ಉಮೇಶ್ ರಾವ್ ಕುಂಬಳೆ, ಅರಿಬೈಲ್ ಗೋಪಾಲ್ ಶೆಟ್ಟಿ, ಡಾ. ಶಾಂತ ಪುತ್ತೂರು, ವಿರಾಜ್ ಅಡೂರ್, ಪ್ರದೀಪ್ ಬೇಕಲ್, ಎ. ಆರ್. ಸುಬ್ಬಯ್ಯಕಟ್ಟೆ, ರವಿ ನಾಯಿಕಾಪು, ರಾಜೇಶ್ ಕೋಟೆಕಣಿ ಮುಂತಾದವರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!