ವಿಟ್ಲ: ಕೊಳ್ನಾಡು ಅಭಿವೃದ್ಧಿಗೆ ಮತ್ತೊಂದು ಕೊಡುಗೆ, ರೈತರಿಗೆ ನೆರವಾಗುವ ಯೋಜನೆ: 36 ಲಕ್ಷ ರೂ ವೆಚ್ಚದಲ್ಲಿ ಕಾಡುಮಠ ಬಸ್ತಿಗುಂಡಿ ಆಣೆಕಟ್ಟು ನವೀಕರಣ; ಶಾಸಕ ಮಂಜುನಾಥ ಭಂಡಾರಿ ಶಿಪಾರಸ್ಸು
ವಿಟ್ಲ: ಕೊಳ್ನಾಡು ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಕೊಡುಗೆಯಾಗಿ ಕಾಡುಮಠ ಬಸ್ತಿಗುಂಡಿಯ ಹಳೆಯ ಕಿಂಡಿ ಆಣೆಕಟ್ಟನ್ನು 36 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿ ಸ್ಥಳೀಯ ಜನರ ದೀರ್ಘಕಾಲದ ಬೇಡಿಕೆಯಾಗಿದ್ದು, ಇದೀಗ ಅನುಷ್ಠಾನದ ಹಂತಕ್ಕೆ ಬಂದಿರುವುದು ಸಂತಸದ ಸಂಗತಿಯಾಗಿದೆ. ಕಾಡುಮಠ–ಕುಡ್ತಮುಗೇರು–ಕುದ್ರಿಯಾ ಭಾಗದ ರೈತರಿಗೆ ಅನುಕೂಲವಾಗುವಂತೆ ಹಳೆಯ ಮರದ ಹಲಗೆಯನ್ನು ಬದಲಾಯಿಸಿ, ಆಧುನಿಕ ತಂತ್ರಜ್ಞಾನದೊಂದಿಗೆ ಕಬ್ಬಿಣ ಹಾಗೂ ಪೈಬರ್ ಹಲಗೆಯನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ನೀರಿನ ನಿಯಂತ್ರಣ ಸುಧಾರಿಸಿ, ಕೃಷಿಗೆ ಅಗತ್ಯವಾದ…
